ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದ ಬದಲಿ ಪಾಂಡಿಚೆರಿಯಲ್ಲಿ ವಿಚಾರಣೆ : ಜಯಾ ಮೊರೆ

By Staff
|
Google Oneindia Kannada News

ಕರ್ನಾಟಕದ ಬದಲಿ ಪಾಂಡಿಚೆರಿಯಲ್ಲಿ ವಿಚಾರಣೆ : ಜಯಾ ಮೊರೆ
ಕಾವೇರಿ ಸಂಘರ್ಷ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಬರಲು ಜಯಲಲಿತಾ ಹಿಂಜರಿಕೆ

ನವದೆಹಲಿ : ಅಕ್ರಮ ಆಸ್ತಿ ಹೊಂದಿರುವ ತಮ್ಮ ಮೇಲಿನ ಪ್ರಕರಣದ ವಿಚಾರಣೆಯನ್ನು ಕರ್ನಾಟಕದ ಬದಲು ಪಾಂಡಿಚೆರಿಗೆ ವರ್ಗಾಯಿಸುವಂತೆ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಸುಪ್ರಿಂಕೋರ್ಟ್‌ ಮೊರೆ ಹೊಕ್ಕಿದ್ದಾರೆ.

ಕಾವೇರಿ ನದಿ ನೀರು ಹಂಚಿಕೆ ಸಂಬಂಧ ಉಭಯ ರಾಜ್ಯಗಳ ನಡುವೆ ಉಂಟಾಗಿರುವ ಸಂಘರ್ಷ ಪರಿಸ್ಥಿತಿಯಿಂದಾಗಿ ಕರ್ನಾಟಕದಲ್ಲಿ ವಿಚಾರಣೆ ನಡೆಸುವು ಸುರಕ್ಷತಾ ಹಿನ್ನೆಲೆಯಲ್ಲಿ ಅಷ್ಟೇನೂ ಸೂಕ್ತವಲ್ಲ . ಆ ಕಾರಣದಿಂದಾಗಿ ಪಾಂಡಿಚೆರಿಗೆ ವಿಚಾರಣೆಯನ್ನು ವರ್ಗಾಯಿಸಬೇಕು ಎಂದು ಜಯಲಲಿತಾ ಗುರುವಾರ (ಡಿ.11) ಸುಪ್ರಿಂಕೋರ್ಟ್‌ಗೆ ಮನವಿ ಸಲ್ಲಿಸಿದರು.

ಈ ಮುನ್ನ , ಜಯಲಲಿತಾ ಅವರ ಮೇಲಿರುವ ಅಕ್ರಮ ಆಸ್ತಿ ಪ್ರಕರಣಗಳ ನ್ಯಾಯಬದ್ಧ ವಿಚಾರಣೆ ತಮಿಳುನಾಡಿನಲ್ಲಿ ನಡೆಯುವ ಕುರಿತು ಅನುಮಾನ ವ್ಯಕ್ತಪಡಿಸಿದ್ದ ಅಪೆಕ್ಸ್‌ ಕೋರ್ಟ್‌, ಪ್ರಕರಣದ ವಿಚಾರಣೆಯನ್ನು ಬೆಂಗಳೂರಿಗೆ ವರ್ಗಾಯಿಸಿತ್ತು . ಕರ್ನಾಟಕ ಹೈಕೋರ್ಟ್‌ ವಿಚಾರಣೆಯ ಸ್ಥಳವನ್ನಾಗಿ ಬೆಂಗಳೂರಿನ ಹೊಸೂರು ರಸ್ತೆಯ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹ ಆವರಣವನ್ನು ಗೊತ್ತುಪಡಿಸಿದೆ. ಈ ಸಂದರ್ಭದಲ್ಲಿ ಜಯಲಲಿತಾ ಅವರು ವಿಚಾರಣಾ ಸ್ಥಳ ಬದಲಿಸುವ ಕುರಿತು ಸುಪ್ರಿಂಕೋರ್ಟ್‌ಗೆ ಮನವಿ ಸಲ್ಲಿಸಿರುವುದು ಕುತೂಹಲಕರ.

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X