ಕರ್ನಾಟಕದ ಬದಲಿ ಪಾಂಡಿಚೆರಿಯಲ್ಲಿ ವಿಚಾರಣೆ : ಜಯಾ ಮೊರೆ
ಕರ್ನಾಟಕದ
ಬದಲಿ
ಪಾಂಡಿಚೆರಿಯಲ್ಲಿ
ವಿಚಾರಣೆ
:
ಜಯಾ
ಮೊರೆ
ಕಾವೇರಿ
ಸಂಘರ್ಷ
ಹಿನ್ನೆಲೆಯಲ್ಲಿ
ಬೆಂಗಳೂರಿಗೆ
ಬರಲು
ಜಯಲಲಿತಾ
ಹಿಂಜರಿಕೆ
ಕಾವೇರಿ ನದಿ ನೀರು ಹಂಚಿಕೆ ಸಂಬಂಧ ಉಭಯ ರಾಜ್ಯಗಳ ನಡುವೆ ಉಂಟಾಗಿರುವ ಸಂಘರ್ಷ ಪರಿಸ್ಥಿತಿಯಿಂದಾಗಿ ಕರ್ನಾಟಕದಲ್ಲಿ ವಿಚಾರಣೆ ನಡೆಸುವು ಸುರಕ್ಷತಾ ಹಿನ್ನೆಲೆಯಲ್ಲಿ ಅಷ್ಟೇನೂ ಸೂಕ್ತವಲ್ಲ . ಆ ಕಾರಣದಿಂದಾಗಿ ಪಾಂಡಿಚೆರಿಗೆ ವಿಚಾರಣೆಯನ್ನು ವರ್ಗಾಯಿಸಬೇಕು ಎಂದು ಜಯಲಲಿತಾ ಗುರುವಾರ (ಡಿ.11) ಸುಪ್ರಿಂಕೋರ್ಟ್ಗೆ ಮನವಿ ಸಲ್ಲಿಸಿದರು.
ಈ ಮುನ್ನ , ಜಯಲಲಿತಾ ಅವರ ಮೇಲಿರುವ ಅಕ್ರಮ ಆಸ್ತಿ ಪ್ರಕರಣಗಳ ನ್ಯಾಯಬದ್ಧ ವಿಚಾರಣೆ ತಮಿಳುನಾಡಿನಲ್ಲಿ ನಡೆಯುವ ಕುರಿತು ಅನುಮಾನ ವ್ಯಕ್ತಪಡಿಸಿದ್ದ ಅಪೆಕ್ಸ್ ಕೋರ್ಟ್, ಪ್ರಕರಣದ ವಿಚಾರಣೆಯನ್ನು ಬೆಂಗಳೂರಿಗೆ ವರ್ಗಾಯಿಸಿತ್ತು . ಕರ್ನಾಟಕ ಹೈಕೋರ್ಟ್ ವಿಚಾರಣೆಯ ಸ್ಥಳವನ್ನಾಗಿ ಬೆಂಗಳೂರಿನ ಹೊಸೂರು ರಸ್ತೆಯ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹ ಆವರಣವನ್ನು ಗೊತ್ತುಪಡಿಸಿದೆ. ಈ ಸಂದರ್ಭದಲ್ಲಿ ಜಯಲಲಿತಾ ಅವರು ವಿಚಾರಣಾ ಸ್ಥಳ ಬದಲಿಸುವ ಕುರಿತು ಸುಪ್ರಿಂಕೋರ್ಟ್ಗೆ ಮನವಿ ಸಲ್ಲಿಸಿರುವುದು ಕುತೂಹಲಕರ.
(ಪಿಟಿಐ)
ಮುಖಪುಟ / ವಾರ್ತೆಗಳು