ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಛಾಪಾ ಪಾಪ: ‘ಸ್ಟಾಂಪಿಟ್‌’ನಿಂದ ಇಬ್ಬರು ರಾಜ್ಯ ಪೊಲೀಸರ ಬಂಧನ

By Staff
|
Google Oneindia Kannada News

ಛಾಪಾ ಪಾಪ: ‘ಸ್ಟಾಂಪಿಟ್‌’ನಿಂದ ಇಬ್ಬರು ರಾಜ್ಯ ಪೊಲೀಸರ ಬಂಧನ
ಈವರೆಗೆ ಮಹಾರಾಷ್ಟ್ರ ಪೊಲೀಸರ ಸೆರೆಹಾಕಿದ್ದಾಯಿತು, ಈಗ ಕರ್ನಾಟಕದವರ ಪಾಳಿ !

ಬೆಂಗಳೂರು : ಬಹುಕೋಟಿ ನಕಲಿ ಛಾಪಾ ಕಾಗದ ಹಗರಣದ ತನಿಖೆ ನಡೆಸುತ್ತಿರುವ ಕರ್ನಾಟಕ ಸ್ಟಾಂಪಿಟ್‌ (ವಿಶೇಷ ತನಿಖಾ ತಂಡ) ರಾಜ್ಯದ ಇಬ್ಬರು ಪೊಲೀಸ್‌ ಅಧಿಕಾರಿಗಳನ್ನು ಹಗರಣದಲ್ಲಿ ಕೊಂಡಿ ಹಾಕಿಕೊಂಡಿದ್ದಾರೆಂದು ಆರೋಪಿಸಿ ಬಂಧಿಸಿದೆ.

ಕೇಂದ್ರ ಕಾರಾಗೃಹದ ಮಾಜಿ ಸೂಪರಿಂಟೆಂಡೆಂಟ್‌ ಆಫ್‌ ಪೊಲೀಸ್‌ (ಎಸ್ಪಿ) ಜಯಸಿಂಹ ಹಾಗೂ ಸಹಾಯಕ ಎಸ್ಪಿ ನಂಜಪ್ಪ ಎಂಬ ಪೊಲೀಸ್‌ ಅಧಿಕಾರಿಗಳನ್ನು ಸ್ಟಾಂಪಿಟ್‌ ಮಂಗಳವಾರ (ಡಿ.09) ರಾತ್ರಿ ಬಂಧಿಸಿತು ಎಂದು ತಂಡದ ಮುಖ್ಯಸ್ಥ , ಪೊಲೀಸ್‌ ಅಧಿಕಾರಿ ಶ್ರೀಕುಮಾರ್‌ ಬುಧವಾರ ತಿಳಿಸಿದರು.

ನಕಲಿ ಛಾಪಾ ಕಾಗದ ಹಗರಣದ ಪ್ರಮುಖ ಆರೋಪಿ ಅಬ್ದುಲ್‌ ಕರೀಂ ಲಾಲ ತೆಲಗಿಯ ಅವ್ಯವಹಾರಕ್ಕೆ ಈ ಪೊಲೀಸ್‌ ಅಧಿಕಾರಿಗಳು ಬೆಂಬಲ ಕೊಟ್ಟಿದ್ದರು ಎಂದು ಸ್ಟಾಂಪಿಟ್‌ ಆರೋಪಿಸಿದೆ. ಬಂಧಿತರನ್ನು ಬುಧವಾರ ಕೋರ್ಟಿಗೆ ಹಾಜರು ಪಡಿಸಲಾಯಿತು.

ಮೈಸೂರಿನಲ್ಲಿರುವ ಜೈಲು ತರಪೇತಿ ಕೇಂದ್ರದ ಪ್ರಿನ್ಸಿಪಾಲ್‌ ಆಗಿ ಜಯಸಿಂಹ ಪ್ರಸ್ತುತ ಕಾರ್ಯ ನಿರ್ವಹಿಸುತ್ತಿದ್ದಾರೆ.

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X