ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುಳ್ಳು ಪತ್ತೆ ಪರೀಕ್ಷೆಗೆ ನಾನು ಸದಾ ಸಿದ್ಧ- ಕರೀಂ ಲಾಲ ತೆಲಗಿ

By Staff
|
Google Oneindia Kannada News

ಸುಳ್ಳು ಪತ್ತೆ ಪರೀಕ್ಷೆಗೆ ನಾನು ಸದಾ ಸಿದ್ಧ- ಕರೀಂ ಲಾಲ ತೆಲಗಿ
‘ತೆಲಗಿಗೆ ಚಿಕಿತ್ಸೆ ಕೊಡುತ್ತಿದ್ದ ವೈದ್ಯರ ಎತ್ತಂಗಡಿ ಮಾಡಿದ್ದು ಯಾಕೆ?’

ಬೆಂಗಳೂರು : ಎಲ್ಲಾ ಹಗರಣಗಳ ಮಾತೆ ಎಂಬ ಕುಖ್ಯಾತಿಗೆ ಪಾತ್ರವಾಗಿರುವ ಬಹುಕೋಟಿ ನಕಲಿ ಛಾಪಾ ಕಾಗದ ಹಗರಣದ ಮುಖ್ಯ ಆರೋಪಿ ಅಬ್ದುಲ್‌ ಕರೀಂ ಲಾಲ ತೆಲಗಿ ‘ಸುಳ್ಳು ಪತ್ತೆ ಪರೀಕ್ಷೆ’ ಹಾಗೂ ಧ್ವನಿ ಮುದ್ರಣ ಪರೀಕ್ಷೆಗೆ ತಾನು ಸಿದ್ಧವಿರುವುದಾಗಿ ಹೇಳಿದ್ದಾನೆ.

ಮಹಾರಾಷ್ಟ್ರದ ವಿಶೇಷ ತನಿಖಾ ತಂಡ (ಎಸ್‌ಐಟಿ) ತೆಲಗಿಯನ್ನು ಸುಳ್ಳು ಪತ್ತೆ ಪರೀಕ್ಷೆಗೆ ಗುರುಪಡಿಸುವ ಪ್ರಸ್ತಾವನೆ ಒಡ್ಡಿತ್ತು. ಶನಿವಾರ (ಡಿ. 06) ತೆಲಗಿಯ ಒಂದು ಪ್ರಕರಣದ ವಿಚಾರಣೆ ನಡೆಸಿದ ತ್ವರಿತ ನ್ಯಾಯಾಲಯ, ಮುಂದಿನ ವಿಚಾರಣೆಯನ್ನು ಡಿಸೆಂಬರ್‌ 17ಕ್ಕೆ ನಿಗದಿಪಡಿಸಿತು.

ವಿಚಾರಣೆಯ ನಂತರ ಸುದ್ದಿಗಾರರ ಜೊತೆ ಮಾತಾಡಿದ ತೆಲಗಿ ಪರ ವಕೀಲ ಎಂ.ಟಿ. ನಾಣಯ್ಯ, ತಾನು ಸುಳ್ಳು ಪತ್ತೆ ಪರೀಕ್ಷೆಗೆ ಸಿದ್ಧವಿರುವುದಾಗಿ ಕರೀಂ ಲಾಲ ಹೇಳಿದ್ದಾನೆ ಎಂದರು.

ವಕೀಲರು ಕರೀಂ ಲಾಲ ಮಾತುಗಳನ್ನು ಬಿಚ್ಚಿಟ್ಟಿದ್ದು ಹೀಗೆ- ‘ನಾನು ಈಗಾಗಲೇ ಸಿಬಿಐ ತನಿಖೆ ನಡೆಸಿ ಎಂದು ಒತ್ತಾಯಿಸುತ್ತಿದ್ದೇನೆ. ಇಂತಹ ಪರೀಕ್ಷೆಗಳಿಗೆ ಭಯಪಡುವ ಅಗತ್ಯವೇ ಇಲ್ಲ. ಸತ್ಯಾಂಶ ಪೂರ್ತಿ ಹೊರ ಬರಲಿ ಎಂಬುದೇ ನನ್ನ ಬಯಕೆ. ಸುಳ್ಳು ಪತ್ತೆ ಪರೀಕ್ಷೆ ನಡೆಸುವ ಪ್ರಸ್ತಾವನೆಯನ್ನು ಪೊಲೀಸರು ಇಟ್ಟಿರುವುದನ್ನು ಪತ್ರಿಕೆಗಳಲ್ಲಿ ನೋಡಿದೆ. ಅದಕ್ಕೆ ನಾನು ಸಿದ್ಧ ’.

ಸುದ್ದಿಗಾರರ ಜೊತೆ ಸಂವಾದ ಏರ್ಪಡಿಸಿ, ಹಗರಣದ ಬಗ್ಗೆ ಮುಕ್ತವಾಗಿ ಮಾತಾಡುವ ಬಯಕೆ ಕರೀಂ ಲಾಲಾಗೆ ಇದೆ. ಆತ ಖುದ್ದು ತನ್ನ ಹತ್ತಿರ ಈ ವಿಷಯವನ್ನು ಹೇಳಿಕೊಂಡಿದ್ದಾನೆ ಎಂದು ನಾಣಯ್ಯ ಹೇಳಿದರು.

ಕರೀಂ ಲಾಲ ಆರೋಗ್ಯ ದಿನೇದಿನೇ ಹದಗೆಡುತ್ತಿದೆ. ಕೇಂದ್ರ ಕಾರಾಗೃಹದಲ್ಲಿ ತೆಲಗಿಗೆ ಚಿಕಿತ್ಸೆ ಕೊಡುತ್ತಿದ್ದ ಡಾ. ಚೌಹಾನ್‌ ಅವರನ್ನು ಕರ್ನಾಟಕ ಸರ್ಕಾರ ವರ್ಗಾವಣೆ ಮಾಡಿದೆ. ಇದರ ಔಚಿತ್ಯವೇನು ಎಂದು ನಾಣಯ್ಯ ಪ್ರಶ್ನಿಸಿದರು.

ತೆಲಗಿ ಸೇರಿದಂತೆ ಛಾಪಾ ಕಾಗದ ಹಗರಣದ 9 ಆರೋಪಿಗಳನ್ನು ಸುಳ್ಳು ಪತ್ತೆ ಪರೀಕ್ಷೆಗೆ ಒಳಪಡಿಸುವ ಪ್ರಸ್ತಾವನೆಯನ್ನು ಎಸ್‌ಐಟಿ ಇಟ್ಟಿದೆ.

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X