ಜಾನ್ ನಿರ್ಗಮನ; ಕೊಡಗಿಗೆ 107 ಕೋಟಿ ಯೋಜನೆ ಆಗಮನ
ಜಾನ್
ನಿರ್ಗಮನ;
ಕೊಡಗಿಗೆ
107
ಕೋಟಿ
ಯೋಜನೆ
ಆಗಮನ
ಕೊಡಗಿನ
ಸೋಲು
ಕಾಂಗ್ರೆಸ್ಗೆ
ಪಾಠ
ಕಲಿಸಿತೇ?
ಮುಖ್ಯಮಂತ್ರಿ ಎಸ್.ಎಂ.ಕೃಷ್ಣ, ಅಬಕಾರಿ ಸಚಿವ ಎಂ.ಟಿ.ನಾಣಯ್ಯ, ಕೊಡಗು ಜಿಲ್ಲೆಯವರೇ ಆದ ಸಚಿವೆ ಸುಮಾ ವಸಂತ್ ನಡುವೆ ಶುಕ್ರವಾರ (ಡಿ. 05) ನಡೆದ ಸಭೆಯಲ್ಲಿ ಹೊಸ ಯೋಜನೆ ಜಾರಿಯ ಕುರಿತು ತೀರ್ಮಾನ ಕೈಗೊಳ್ಳಲಾಯಿತು. ಸಭೆಯ ನಂತರ ಸಚಿವ ನಾಣಯ್ಯ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.
ಕೊಡಗು ಜಿಲ್ಲೆಯಲ್ಲಿ ಆನೆಗಳ ಹಾವಳಿ ತಪ್ಪಿಸುವುದು, ರಸ್ತೆಗಳ ಹಾಗೂ ಸೇತುವೆಗಳ ನಿರ್ಮಾಣ ಮತ್ತು ಅಭಿವೃದ್ಧಿ, ಮಡಿಕೇರಿಗೆ ಕುಡಿಯುವ ನೀರು ಪೂರೈಸುವುದು ಯೋಜನೆಯ ಮುಖ್ಯ ಅಂಶಗಳು.
ಈ ಯೋಜನೆಗೆ ಸರ್ಕಾರ 35 ಕೋಟಿ ರುಪಾಯಿ ಮಂಜೂರು ಮಾಡಲಿದ್ದು, ಉಳಿದ ಹಣವನ್ನು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ಮತ್ತಿತರ ಸಂಸ್ಥೆಗಳ ಮೂಲಕ ಹುಡ್ಕೋದಂಥಾ ಏಜೆನ್ಸಿಗಳ ಸಾಲದ ರೂಪದಲ್ಲಿ ಸಂಗ್ರಹಿಸಲಾಗುವುದು.
ಯಾತ್ಯಾತಕ್ಕೆ ಎಷ್ಟೆಷ್ಟು ಹಣ : ಆನೆಗಳ ಕಾಟ ತಪ್ಪಿಸಲು ಅಗತ್ಯ ಆಯಕಟ್ಟಿನ ಜಾಗೆಗಳಲ್ಲಿ ಸೋಲಾರ್ ತಂತಿ ಹಾಕಲು 7.58 ಕೋಟಿ ರುಪಾಯಿ, ಮಡಿಕೇರಿಯಲ್ಲಿ ಜಿಲ್ಲಾ ಕಚೇರಿ ನಿರ್ಮಾಣಕ್ಕೆ 5.15 ಕೋಟಿ ರುಪಾಯಿ, ಕೊಡಗು ಜಿಲ್ಲೆಯಲ್ಲಿ 8 ಸೇತುವೆಗಳನ್ನು ಕಟ್ಟಲು 8.3 ಕೋಟಿ ರುಪಾಯಿ, ಮಡಿಕೇರಿಯಲ್ಲಿ ಕುಡಿಯುವ ನೀರು ಪೂರೈಸಲು 15 ಕೋಟಿ ಹಾಗೂ 33 ಕಿಲೋ ವ್ಯಾಟ್ ಸಾಮರ್ಥ್ಯದ ಮೂರು ಹೊಸ ವಿದ್ಯುತ್ ಪ್ರಸರಣಾ ಘಟಕಗಳ ಸ್ಥಾಪನೆಯೂ ಸೇರಿದಂತೆ ಈಗಿರುವ ಘಟಕಗಳ ಅಭಿವೃದ್ಧಿಗೆ 9.70 ಕೋಟಿ ರುಪಾಯಿ ವಿನಿಯೋಗಿಸಲಾಗುವುದು ಎಂದು ಮುಖ್ಯ ಕಾರ್ಯದರ್ಶಿ ಬಿ.ಎಸ್.ಪಾಟೀಲ್ ಹೇಳಿದರು.
ಲೋಕಸಭೆಗೆ ಆಯ್ಕೆಯಾದ ಕಾರಣಕ್ಕೆ ಸೋನಿಯಾ ಗಾಂಧಿ ಬಳ್ಳಾರಿ ಅಭಿವೃದ್ಧಿಗೆ 30 ಕೋಟಿ ರುಪಾಯಿ ಮೊತ್ತದ ವಿಶೇಷ ಯೋಜನೆಯ ಕಾಣಿಕೆ ಕೊಟ್ಟಿದ್ದರು. ಅದಾದ ನಂತರ ರಾಜ್ಯ ಸರ್ಕಾರ ರೂಪಿಸಿರುವ ಎರಡನೇ ದೊಡ್ಡ ಯೋಜನೆ ಇದು.
ಕೇಂದ್ರ ಸರ್ಕಾರದ ನೆರವು : ಕೊಡಗನ್ನು ಪ್ರವಾಸಿ ತಾಣವೆಂದು ಕೇಂದ್ರ ಸರ್ಕಾರ ಘೋಷಿಸಿದ್ದು, ಇದರ ಅಭಿವೃದ್ಧಿಗೆ 8.75 ಕೋಟಿ ರುಪಾಯಿ ಯೋಜನೆಯನ್ನು ಮಂಜೂರು ಮಾಡಿದೆ. ಇದಕ್ಕೆ ಕೇಂದ್ರ ಸರ್ಕಾರ 5 ಕೋಟಿ ರುಪಾಯಿ ನೀಡಲಿದ್ದು, ಉಳಿದ 3.75 ಕೋಟಿ ರುಪಾಯಿಯನ್ನು ರಾಜ್ಯ ಸರ್ಕಾರ ಕೊಡಲಿದೆ. ಮಡಿಕೇರಿಯಲ್ಲಿ ಕ್ರೀಡಾಭಿವೃದ್ಧಿಗೂ 50 ಲಕ್ಷ ರುಪಾಯಿ ನೆರವು ಕೊಡುವುದಾಗಿ ಕೇಂದ್ರ ಸರ್ಕಾರ ಹೇಳಿದೆ ಎಂದು ಪಾಟೀಲ್ ತಿಳಿಸಿದರು.
(ಪಿಟಿಐ)
ಮುಖಪುಟ / ವಾರ್ತೆಗಳು