ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಾಯಕ ಭೀಮಸೇನ್‌ ಜೋಶಿಗೆ ಷಣ್ಮುಖಾನಂದ ರಾಷ್ಟ್ರೀಯ ಪ್ರಶಸ್ತಿ

By Staff
|
Google Oneindia Kannada News

ಗಾಯಕ ಭೀಮಸೇನ್‌ ಜೋಶಿಗೆ ಷಣ್ಮುಖಾನಂದ ರಾಷ್ಟ್ರೀಯ ಪ್ರಶಸ್ತಿ
ಕರ್ನಾಟಕದ ಇನ್ನೊಬ್ಬ ಗಾಯಕ ಜಯತೀರ್ಥ ಮೇವುಂಡಿ ಷಣ್ಮುಖ ಶಿರೋಮಣಿ

ಮುಂಬಯಿ : ಹಿಂದೂಸ್ತಾನಿ ಸಂಗೀತ ಮೋಡಿಗಾರ ಪಂಡಿತ್‌ ಭೀಮಸೇನ್‌ ಜೋಶಿ ಅವರನ್ನು ಶ್ರೀ ಷಣ್ಮುಖಾನಂದ ರಾಷ್ಟ್ರೀಯ ಪ್ರಶಸ್ತಿಗೆ ಆರಿಸಲಾಗಿದೆ.

ಒಂದು ಲಕ್ಷ ರುಪಾಯಿ ನಗದು, ಬೆಳ್ಳಿ ದೀಪ ಮತ್ತು ಕಂಚಿನ ಪ್ರತಿಮೆಯನ್ನು ಪ್ರಶಸ್ತಿ ಒಳಗೊಂಡಿದೆ. ಡಿಸೆಂಬರ್‌ 6ನೇ ತಾರೀಕು ಮುಂಬಯಿಯ ಷಣ್ಮುಕಾನಂದ ಹಾಲ್‌ನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಹಿಂದೂಸ್ತಾನಿ ಸಂಗೀತ ಕ್ಷೇತ್ರಕ್ಕೆ ಸಲ್ಲಿಸಿರುವ ಜೀವಮಾನದ ಕೊಡುಗೆಯನ್ನು ಪರಿಗಣಿಸಿ, ಜೋಶಿಯವರನ್ನು ಈ ಪ್ರಶಸ್ತಿಗೆ ಆರಿಸಲಾಗಿದೆ.

ಕರ್ನಾಟಕದ ಮತ್ತೊಬ್ಬ ಹಿಂದೂಸ್ತಾನಿ ಹಾಡುಗಾರ ಜಯತೀರ್ಥ ಮೇವುಂಡಿ ಅವರಿಗೆ ಷಣ್ಮುಖ ಶಿರೋಮಣಿ ಪ್ರಶಸ್ತಿಯನ್ನು ಅದೇ ದಿನ ನೀಡಿ ಗೌರವಿಸಲಾಗುವುದು. ಈ ಪ್ರಶಸ್ತಿಗೆ ಆಯ್ಕೆಯಾಗಿರುವ ಇತರರು- ಕರ್ನಾಟಕ ಸಂಗೀತದಲ್ಲಿ ಹೆಸರು ಮಾಡಿರುವ ನಿತ್ಯಶ್ರೀ ಮಹಾದೇವನ್‌ ಹಾಗೂ ನೃತ್ಯಗಾರ್ತಿ ಊರ್ಮಿಳಾ ಸತ್ಯನಾರಾಯಣ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X