ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಗಾಯಕ ಭೀಮಸೇನ್ ಜೋಶಿಗೆ ಷಣ್ಮುಖಾನಂದ ರಾಷ್ಟ್ರೀಯ ಪ್ರಶಸ್ತಿ
ಗಾಯಕ
ಭೀಮಸೇನ್
ಜೋಶಿಗೆ
ಷಣ್ಮುಖಾನಂದ
ರಾಷ್ಟ್ರೀಯ
ಪ್ರಶಸ್ತಿ
ಕರ್ನಾಟಕದ
ಇನ್ನೊಬ್ಬ
ಗಾಯಕ
ಜಯತೀರ್ಥ
ಮೇವುಂಡಿ
ಷಣ್ಮುಖ
ಶಿರೋಮಣಿ
ಒಂದು ಲಕ್ಷ ರುಪಾಯಿ ನಗದು, ಬೆಳ್ಳಿ ದೀಪ ಮತ್ತು ಕಂಚಿನ ಪ್ರತಿಮೆಯನ್ನು ಪ್ರಶಸ್ತಿ ಒಳಗೊಂಡಿದೆ. ಡಿಸೆಂಬರ್ 6ನೇ ತಾರೀಕು ಮುಂಬಯಿಯ ಷಣ್ಮುಕಾನಂದ ಹಾಲ್ನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಹಿಂದೂಸ್ತಾನಿ ಸಂಗೀತ ಕ್ಷೇತ್ರಕ್ಕೆ ಸಲ್ಲಿಸಿರುವ ಜೀವಮಾನದ ಕೊಡುಗೆಯನ್ನು ಪರಿಗಣಿಸಿ, ಜೋಶಿಯವರನ್ನು ಈ ಪ್ರಶಸ್ತಿಗೆ ಆರಿಸಲಾಗಿದೆ.
ಕರ್ನಾಟಕದ ಮತ್ತೊಬ್ಬ ಹಿಂದೂಸ್ತಾನಿ ಹಾಡುಗಾರ ಜಯತೀರ್ಥ ಮೇವುಂಡಿ ಅವರಿಗೆ ಷಣ್ಮುಖ ಶಿರೋಮಣಿ ಪ್ರಶಸ್ತಿಯನ್ನು ಅದೇ ದಿನ ನೀಡಿ ಗೌರವಿಸಲಾಗುವುದು. ಈ ಪ್ರಶಸ್ತಿಗೆ ಆಯ್ಕೆಯಾಗಿರುವ ಇತರರು- ಕರ್ನಾಟಕ ಸಂಗೀತದಲ್ಲಿ ಹೆಸರು ಮಾಡಿರುವ ನಿತ್ಯಶ್ರೀ ಮಹಾದೇವನ್ ಹಾಗೂ ನೃತ್ಯಗಾರ್ತಿ ಊರ್ಮಿಳಾ ಸತ್ಯನಾರಾಯಣ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು
Comments
Story first published: Saturday, May 24, 2003, 5:30 [IST]