ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿರಿಯ ವಿದ್ವಾಂಸ ವೆಂಕಟಾಚಲಶಾಸ್ತ್ರಿಗೆ ಚಾವುಂಡರಾಯ ಪ್ರಶಸ್ತಿ

By Staff
|
Google Oneindia Kannada News

ಹಿರಿಯ ವಿದ್ವಾಂಸ ವೆಂಕಟಾಚಲಶಾಸ್ತ್ರಿಗೆ ಚಾವುಂಡರಾಯ ಪ್ರಶಸ್ತಿ
ಚಾರುಕೀರ್ತಿ ಭಟ್ಟಾರಕ ಸ್ವಾಮಿಗಳು ಈ ಪ್ರಶಸ್ತಿ ಪ್ರತಿಷ್ಠಾಪಿಸಿದ್ದಾರೆ

ಬೆಂಗಳೂರು : ಕನ್ನಡದ ಹಿರಿಯ ವಿದ್ವಾಂಸ ಡಾ. ಟಿ.ವಿ.ವೆಂಕಟಾಚಲ ಶಾಸ್ತ್ರಿ ಅವರು 2003ನೇ ಇಸವಿಯ ‘ಚಾವುಂಡರಾಯ ಪ್ರಶಸ್ತಿ’ಗೆ ಆಯ್ಕೆಯಾಗಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಕಟಣೆಯ ಮೂಲಕ ಪರಿಷತ್ತಿನ ಅಧ್ಯಕ್ಷ ಹರಿಕೃಷ್ಣ ಪುನರೂರು ಈ ವಿಷಯ ತಿಳಿಸಿದ್ದಾರೆ. 1993ರಲ್ಲಿ ಮಹಾ ಮಸ್ತಕಾಭಿಷೇಕ ನಡೆದ ನೆನಪಿಗಾಗಿ ಶ್ರವಣಬೆಳಗೊಳದ ಚಾರುಕೀರ್ತಿ ಭಟ್ಟಾರಕ ಸ್ವಾಮಿಗಳು ಪ್ರತಿಷ್ಠಾಪಿಸಿರುವ ಈ ಪ್ರಶಸ್ತಿ 20 ಸಾವಿರ ರುಪಾಯಿ ನಗದು, ಕಂಚಿನ ಫಲಕ ಮತ್ತು ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ.

ಮಠದ ಪ್ರತಿನಿಧಿಯನ್ನೂ ಒಳಗೊಂಡ ಆಯ್ಕೆ ಸಮಿತಿ ಸರ್ವಾನುಮತದಿಂದ ವೆಂಕಟಾಚಲಶಾಸ್ತ್ರಿಯವರನ್ನು ಪ್ರಶಸ್ತಿಗೆ ಆರಿಸಿದೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X