ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕಾರ್ನಾಡ್, ಅನಂತಮೂರ್ತಿ, ಗೋವಿಂದರಾವ್ ಪ್ರತಿಕೃತಿ ದಹನ !
ಕಾರ್ನಾಡ್,
ಅನಂತಮೂರ್ತಿ,
ಗೋವಿಂದರಾವ್
ಪ್ರತಿಕೃತಿ
ದಹನ
!
ಸಾಹಿತಿಗಳ
ವಿರುದ್ಧ
ಅಖಿಲ
ಭಾರತ
ವಿದ್ಯಾರ್ಥಿ
ಪರಿಷತ್ಕೆಂಡ
ತುಮಕೂರು ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ನಕ್ಸಲೀಯ ಹಾವಳಿ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಕಾರ್ಯಕರ್ತರು ಸಾಹಿತಿಗಳ ವಿರುದ್ಧ ಮಾತಿನ ಕತ್ತಿ ಝಳಪಿಸಿದರು. ಬುದ್ಧಿಜೀವಿಗಳೆಂದು ಹೇಳಿಕೊಳ್ಳುವ ಈ ಸಾಹಿತಿಗಳು ಬುದ್ಧಿ ಭ್ರಮಣೆಗೆ ಒಳಗಾಗಿದ್ದಾರೆ. ಇವರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಬೇಕು ಎಂದು ಎಬಿವಿಪಿ ರಾಜ್ಯ ಸಹ ಕಾರ್ಯದರ್ಶಿ ವಿನಯ್ ಬಿದರೆ ಅಭಿಪ್ರಾಯ ಪಟ್ಟರು.
ಸ್ವಯಂ ಘೋಷಿತ ವಿಚಾರವಾದಿಗಳಾದ ಇವರು ವಾಸ್ತವದಲ್ಲಿ ವಿಕಾರವಾದಿಗಳು. ನಕ್ಸಲೀಯ ಚಟುವಟಿಕೆಗಳಿಗೆ ಇವರು ಬೆಂಬಲ ಸೂಚಿಸುತ್ತ, ಪೊಲೀಸರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿದ್ದಾರೆ. ರಾಜ್ಯದ ಯಾವುದೇ ಮೂಲೆಗೆ ಇವರು ಹೋಗಿ ಪ್ರಚಾರ ಮಾಡಲು ಮುಂದಾದರೆ, ಎಬಿವಿಪಿ ಕಾರ್ಯಕರ್ತರು ಪ್ರತಿಭಟನೆ ಒಡ್ಡಲು ಸಿದ್ಧ ಎಂದು ವಿನಯ್ ಎಚ್ಚರಿಸಿದರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು
Story first published: Saturday, May 24, 2003, 5:30 [IST]