ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾರ್ನಾಡ್‌, ಅನಂತಮೂರ್ತಿ, ಗೋವಿಂದರಾವ್‌ ಪ್ರತಿಕೃತಿ ದಹನ !

By Staff
|
Google Oneindia Kannada News

ಕಾರ್ನಾಡ್‌, ಅನಂತಮೂರ್ತಿ, ಗೋವಿಂದರಾವ್‌ ಪ್ರತಿಕೃತಿ ದಹನ !
ಸಾಹಿತಿಗಳ ವಿರುದ್ಧ ಅಖಿಲ ಭಾರತ ವಿದ್ಯಾರ್ಥಿ ಪರಿಷತ್‌ಕೆಂಡ

ತುಮಕೂರು : ನಾಡಿನಲ್ಲಿ ಕೆಲವು ಸಾಹಿತಿಗಳು ನಕ್ಸಲೀಯ ಚಟುವಟಿಕೆಗಳನ್ನು ಪರೋಕ್ಷವಾಗಿ ಬೆಂಬಲಿಸುತ್ತಿದ್ದಾರೆಂದು ಆರೋಪಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್‌(ಎಬಿವಿಪಿ) ಕಾರ್ಯಕರ್ತರು ಯು.ಆರ್‌.ಅನಂತಮೂರ್ತಿ, ಗಿರೀಶ್‌ ಕಾರ್ನಾಡ್‌, ಜಿ.ಕೆ.ಗೋವಿಂದ ರಾವ್‌ ಹಾಗೂ ನಗರಿ ಬಾಬಯ್ಯ ಅವರ ಪ್ರತಿಕೃತಿಗಳನ್ನು ಸೋಮವಾರ (ಡಿ.01) ದಹನ ಮಾಡಿದರು.

ತುಮಕೂರು ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ನಕ್ಸಲೀಯ ಹಾವಳಿ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಕಾರ್ಯಕರ್ತರು ಸಾಹಿತಿಗಳ ವಿರುದ್ಧ ಮಾತಿನ ಕತ್ತಿ ಝಳಪಿಸಿದರು. ಬುದ್ಧಿಜೀವಿಗಳೆಂದು ಹೇಳಿಕೊಳ್ಳುವ ಈ ಸಾಹಿತಿಗಳು ಬುದ್ಧಿ ಭ್ರಮಣೆಗೆ ಒಳಗಾಗಿದ್ದಾರೆ. ಇವರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಬೇಕು ಎಂದು ಎಬಿವಿಪಿ ರಾಜ್ಯ ಸಹ ಕಾರ್ಯದರ್ಶಿ ವಿನಯ್‌ ಬಿದರೆ ಅಭಿಪ್ರಾಯ ಪಟ್ಟರು.

ಸ್ವಯಂ ಘೋಷಿತ ವಿಚಾರವಾದಿಗಳಾದ ಇವರು ವಾಸ್ತವದಲ್ಲಿ ವಿಕಾರವಾದಿಗಳು. ನಕ್ಸಲೀಯ ಚಟುವಟಿಕೆಗಳಿಗೆ ಇವರು ಬೆಂಬಲ ಸೂಚಿಸುತ್ತ, ಪೊಲೀಸರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿದ್ದಾರೆ. ರಾಜ್ಯದ ಯಾವುದೇ ಮೂಲೆಗೆ ಇವರು ಹೋಗಿ ಪ್ರಚಾರ ಮಾಡಲು ಮುಂದಾದರೆ, ಎಬಿವಿಪಿ ಕಾರ್ಯಕರ್ತರು ಪ್ರತಿಭಟನೆ ಒಡ್ಡಲು ಸಿದ್ಧ ಎಂದು ವಿನಯ್‌ ಎಚ್ಚರಿಸಿದರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X