ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಂಡು ಹೋಗಲು ಬಯಸಿದ ಕಳ್ಳರು : ಬೆಂಕಿಗೆ ಉದರ ತೃಪ್ತಿ !

By Staff
|
Google Oneindia Kannada News

ಉಂಡು ಹೋಗಲು ಬಯಸಿದ ಕಳ್ಳರು : ಬೆಂಕಿಗೆ ಉದರ ತೃಪ್ತಿ !
ಕಳ್ಳರು ಕದ್ದದ್ದು ಬೆಂಕಿಪಾಲು, 20 ಲಕ್ಷ ರುಪಾಯಿಗಳ ವಸ್ತುಗಳು ಸುಟ್ಟು ಕರಕಲು.

ಬೆಂಗಳೂರು : ಮನೆಗೆ ನುಗ್ಗಿದ ಕಳ್ಳರು, ಅಡುಗೆ ಮನೆಗೆ ನುಗ್ಗಿದಾಗ ಅಚಾತುರ್ಯದಿಂದ ಸಂಭವಿಸಿದ ಬೆಂಕಿ ಅನಾಹುತದಲ್ಲಿ ಲಕ್ಷಾಂತರ ರುಪಾಯಿ ಮೌಲ್ಯದ ನಗ ನಾಣ್ಯ ಹಾಗೂ ಇತರ ವಸ್ತುಗಳು ಸುಟ್ಟು ಹೋಗಿವೆ.

ಜಯನಗರ 2ನೇ ಬ್ಲಾಕ್‌ನಲ್ಲಿರುವ ನಾಗರಾಜ್‌ ಎನ್ನುವವರ ಮನೆಗೆ ಭಾನುವಾರ (ನ.30) ರಾತ್ರಿ ನುಗ್ಗಿದ ಡಕಾಯಿತರ ತಂಡ ಲಕ್ಷಾಂತರ ರುಪಾಯಿ ಮೌಲ್ಯದ ವಜ್ರ ಹಾಗೂ ಚಿನ್ನಾಭರಣಗಳನ್ನು ದೋಚಿತು. ಆನಂತರ ಹಸಿವು ತಾಳಲಾರದ ಡಕಾಯಿತರು ಅಡುಗೆ ಮನೆಗೆ ನುಗ್ಗಿ , ಗ್ಯಾಸ್‌ ಸ್ಟವ್‌ ಹಚ್ಚುವ ಸಂದರ್ಭದಲ್ಲಿ ಅಗ್ನಿ ಅನಾಹುತ ಸಂಭವಿಸಿದೆ. ಈ ಬೆಂಕಿಯಲ್ಲಿ ಆಭರಣಗಳು, ಟೀವಿ, ಸೋಫಾ, ಅಲಂಕಾರಿಕ ಸಾಮಗ್ರಿಗಳು ಸೇರಿದಂತೆ ಸುಮಾರು 20ಲಕ್ಷ ರುಪಾಯಿಗೂ ಅಧಿಕ ಮೌಲ್ಯದ ವಸ್ತುಗಳು ನಾಶವಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿಯಿಂದ ಉಂಟಾಗಬಹುದಾದ ಹೆಚ್ಚಿನ ಅನಾಹುತವನ್ನು ತಪ್ಪಿಸಿದ್ದಾರೆ. ಕಟ್ಟಡಕ್ಕೆ ಕೂಡ ಹೆಚ್ಚಿನ ಧಕ್ಕೆಯುಂಟಾಗಿಲ್ಲ . ಮನೆಯ ಮಾಲೀಕ ಕುಟುಂಬ ಸಮೇತ ಹೈದರಾಬಾದ್‌ಗೆ ತೆರಳಿರುವುದರಿಂದ ದರೋಡೆಕೋರರಿಗೆ ಯಾವುದೇ ಪ್ರತಿರೋಧ ಉಂಟಾಗಿಲ್ಲ . ಈ ಕಾರಣದಿಂದಲೇ ಅವರು ಕೊಂಡು ಹೋಗುವ ಜೊತೆಗೆ ಉಂಡೂ ಹೋಗಲು ಬಯಸಿದ್ದಾರೆ. ಆದರೆ ಆದದ್ದು ಮಾತ್ರ ಬೇರೆ !

ಬೆಂಗಳೂರು ನಗರ ಪೊಲೀಸ್‌ ಆಯುಕ್ತ ಎಸ್‌.ಮರಿಸ್ವಾಮಿ ಹಾಗೂ ಇನ್ನಿತರ ಹಿರಿಯ ಪೊಲೀಸ್‌ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ತನಿಖೆಗೆ ಚಾಲನೆ ನೀಡಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X