ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಂಹ, ಕದ್ರಿ, ಕಪ್ಪಣ್ಣಗೆ ಸಂಗೀತ-ನಾಟಕ ಅಕಾಡೆಮಿ ಪ್ರಶಸ್ತಿ ಗರಿ

By Staff
|
Google Oneindia Kannada News

ಸಿಂಹ, ಕದ್ರಿ, ಕಪ್ಪಣ್ಣಗೆ ಸಂಗೀತ-ನಾಟಕ ಅಕಾಡೆಮಿ ಪ್ರಶಸ್ತಿ ಗರಿ
ಒಟ್ಟು 33 ಕಲಾ ಸಾಧಕರಿಗೆ ಕೇಂದ್ರ ಸಂಗೀತ-ನಾಟಕ ಅಕಾಡೆಮಿಯ ಪ್ರಶಸ್ತಿ ಪ್ರಕಟ

ಚೆನ್ನೈ : ಸ್ಯಾಕ್ಸಫೋನ್‌ ವಾದಕ ಕದ್ರಿ ಗೋಪಾಲನಾಥ್‌ ಮತ್ತು ರಂಗ ನಟ ಸಿ.ಆರ್‌.ಸಿಂಹ ಸೇರಿದಂತೆ 33 ಕಲಾವಿದರಿಗೆ ಕೇಂದ್ರ ಸಂಗೀತ ನಾಟಕ ಅಕಾಡೆಮಿಯ 2003ನೇ ಸಾಲಿನ ಪ್ರಶಸ್ತಿ ಸಂದಿದೆ.

ಶಾಸ್ತ್ರೀಯ ಹಾಡುಗಾರಿಕೆಗಾಗಿ ಎಂ.ಎ.ನರಸಿಂಹಾಚಾರ್‌, ನಟನೆಗೆ ಸಿ.ಆರ್‌.ಸಿಂಹ ಮತ್ತು ರಂಗ ತಂತ್ರಜ್ಞ- ಸಂಘಟಕ ಶ್ರೀನಿವಾಸ ಜಿ. ಕಪ್ಪಣ್ಣ - ಕರ್ನಾಟಕದಿಂದ ಪ್ರಶಸ್ತಿಗೆ ಆಯ್ಕೆಯಾದವರು.

ಹಿಂದೂಸ್ತಾನಿ ಶಾಸ್ತ್ರೀಯ ಗಾಯನಕ್ಕೆ ಗುಲಾಂ ಮುಸ್ತಫಾ ಖಾನ್‌, ಕಲಾ ವಿಮರ್ಶೆಗಾಗಿ ಸುಬ್ಬುಡು ಎಂದು ಹೆಸರುವಾಸಿಯಾಗಿರುವ ಪಿ.ವಿ.ಸುಬ್ರಹ್ಮಣ್ಯಂ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಶನಿವಾರ ರಾತ್ರಿ (ನ. 29) ಚೆನ್ನೈನಲ್ಲಿ ನಡೆದ ಅಕಾಡೆಮಿಯ ಮಹಾಸಭೆಯಲ್ಲಿ ಸಾಧಕರನ್ನು ಪ್ರಶಸ್ತಿಗೆ ಆರಿಸಲಾಯಿತು. ಸಂಗೀತ, ನೃತ್ಯ, ನಾಟಕ ಹಾಗೂ ಸಾಂಪ್ರದಾಯಿಕ ಜಾನಪದ ಕಲಾ ಪ್ರಕಾರಗಳಿಂದ ತಲಾ 8 ಮಂದಿಯನ್ನು ಪ್ರಶಸ್ತಿಗೆ ಆರಿಸಲಾಗಿದೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X