ಆಂಧ್ರ ಸರ್ಕಾರದ ಸಂಸ್ಕೃತಿ ಸಲಹೆಗಾರರಾಗಿ ಬಾಲಮುರಳಿಕೃಷ್ಣ
ಆಂಧ್ರ
ಸರ್ಕಾರದ
ಸಂಸ್ಕೃತಿ
ಸಲಹೆಗಾರರಾಗಿ
ಬಾಲಮುರಳಿಕೃಷ್ಣ
ನಾಡಿನ
ಹೆಮ್ಮೆಯ
ಸಂಗೀತ
ಕಲಾವಿದನಿಗೆ
ಕ್ಯಾಬಿನೆಟ್
ಸಚಿವರ
ಸ್ಥಾನಮಾನ
ಆಂಧ್ರಪ್ರದೇಶ ಸರ್ಕಾರದ ಸಂಸ್ಕೃತಿ ಸಲಹೆಗಾರರಾಗಿ ಹೊಂದಿರುವ ನೇಮಕ, ಕರ್ನಾಟಕ ಸಂಗೀತದಲ್ಲಿ ರಾಷ್ಟ್ರೀಯ ಅಂತರರಾಷ್ಟ್ರೀಯ ಖ್ಯಾತಿ ಗಳಿಸಿರುವ ಬಾಲಮುರಳಿಕೃಷ್ಣ ಅವರಿಗೆ ದೊರೆತ ವಿಶಿಷ್ಟ ಮನ್ನಣೆಯಾಗಿದೆ. ಸಲಹೆಗಾರರ ಹುದ್ದೆಯು ಕ್ಯಾಬಿನೆಟ್ ದರ್ಜೆಯ ಸ್ಥಾನಮಾನ ಹೊಂದಿದೆ.
ಬೆಂಗಳೂರು ಗಾಯನ ಸಮಾಜ ಬಾಲಮುರಳಿಕೃಷ್ಣ ಅವರನ್ನು ಅವರಿಗೆ ದೊರೆತಿರುವ ಅಪರೂಪದ ಮನ್ನಣೆಗಾಗಿ ಅಭಿನಂದಿಸಿದೆ.
ಈ ಮುಂಚೆ ತಮ್ಮ ಸಂಗೀತದಿಂದ ್ಫಕರ್ನಾಟಕದಲ್ಲಿ ಮಳೆ ತರಿಸಲು ಪ್ರಯತ್ನಿಸುವುದಾಗಿ ಹೇಳಿಕೊಂಡಿದ್ದ ಬಾಲಮುರಳಿ, ಅದಕ್ಕಾಗಿ ರಾಜ್ಯ ಸರ್ಕಾರದ ಆಹ್ವಾನವನ್ನು ಅಪೇಕ್ಷಿಸಿದ್ದರು. ಆದರೆ, ಬಾಲಮುರಳಿ ಅವರ ಹೇಳಿಕೆಗೆ ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ಈವರೆಗೂ ಪ್ರತಿಕ್ರಿಯೆ ನೀಡುವ ಗೋಜಿಗೇ ಹೋಗಿಲ್ಲ . ರಾಜ್ಯದಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಕಲಾವಿದನಿಗೆ ನೆರೆರಾಜ್ಯದಲ್ಲಿ ಸ್ಥಾನಮಾನ ದೊರೆತಿರುವುದು ಹಿತ್ತಲ ಗಿಡ ಮದ್ದಲ್ಲ ಎನ್ನುವ ಗಾದೆಯನ್ನು ನೆನಪಿಸುವಂತಿದೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು