ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಂಧ್ರ ಸರ್ಕಾರದ ಸಂಸ್ಕೃತಿ ಸಲಹೆಗಾರರಾಗಿ ಬಾಲಮುರಳಿಕೃಷ್ಣ

By Staff
|
Google Oneindia Kannada News

ಆಂಧ್ರ ಸರ್ಕಾರದ ಸಂಸ್ಕೃತಿ ಸಲಹೆಗಾರರಾಗಿ ಬಾಲಮುರಳಿಕೃಷ್ಣ
ನಾಡಿನ ಹೆಮ್ಮೆಯ ಸಂಗೀತ ಕಲಾವಿದನಿಗೆ ಕ್ಯಾಬಿನೆಟ್‌ ಸಚಿವರ ಸ್ಥಾನಮಾನ

ಬೆಂಗಳೂರು : ಪದ್ಮ ವಿಭೂಷಣ ಪ್ರಶಸ್ತಿ ವಿಜೇತ ಪ್ರಖ್ಯಾತ ಸಂಗೀತಗಾರ ಡಾ.ಬಾಲಮುರಳಿಕೃಷ್ಣ ಅವರನ್ನು ಆಂಧ್ರಪ್ರದೇಶದ ಸರ್ಕಾರ ತನ್ನ ಸಂಸ್ಕೃತಿ ಸಲಹೆಗಾರರನ್ನಾಗಿ ನೇಮಿಸಿಕೊಂಡಿದೆ.

ಆಂಧ್ರಪ್ರದೇಶ ಸರ್ಕಾರದ ಸಂಸ್ಕೃತಿ ಸಲಹೆಗಾರರಾಗಿ ಹೊಂದಿರುವ ನೇಮಕ, ಕರ್ನಾಟಕ ಸಂಗೀತದಲ್ಲಿ ರಾಷ್ಟ್ರೀಯ ಅಂತರರಾಷ್ಟ್ರೀಯ ಖ್ಯಾತಿ ಗಳಿಸಿರುವ ಬಾಲಮುರಳಿಕೃಷ್ಣ ಅವರಿಗೆ ದೊರೆತ ವಿಶಿಷ್ಟ ಮನ್ನಣೆಯಾಗಿದೆ. ಸಲಹೆಗಾರರ ಹುದ್ದೆಯು ಕ್ಯಾಬಿನೆಟ್‌ ದರ್ಜೆಯ ಸ್ಥಾನಮಾನ ಹೊಂದಿದೆ.

Dr. Baalamurali Krishnaಬೆಂಗಳೂರು ಗಾಯನ ಸಮಾಜ ಬಾಲಮುರಳಿಕೃಷ್ಣ ಅವರನ್ನು ಅವರಿಗೆ ದೊರೆತಿರುವ ಅಪರೂಪದ ಮನ್ನಣೆಗಾಗಿ ಅಭಿನಂದಿಸಿದೆ.

ಈ ಮುಂಚೆ ತಮ್ಮ ಸಂಗೀತದಿಂದ ್ಫಕರ್ನಾಟಕದಲ್ಲಿ ಮಳೆ ತರಿಸಲು ಪ್ರಯತ್ನಿಸುವುದಾಗಿ ಹೇಳಿಕೊಂಡಿದ್ದ ಬಾಲಮುರಳಿ, ಅದಕ್ಕಾಗಿ ರಾಜ್ಯ ಸರ್ಕಾರದ ಆಹ್ವಾನವನ್ನು ಅಪೇಕ್ಷಿಸಿದ್ದರು. ಆದರೆ, ಬಾಲಮುರಳಿ ಅವರ ಹೇಳಿಕೆಗೆ ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ಈವರೆಗೂ ಪ್ರತಿಕ್ರಿಯೆ ನೀಡುವ ಗೋಜಿಗೇ ಹೋಗಿಲ್ಲ . ರಾಜ್ಯದಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಕಲಾವಿದನಿಗೆ ನೆರೆರಾಜ್ಯದಲ್ಲಿ ಸ್ಥಾನಮಾನ ದೊರೆತಿರುವುದು ಹಿತ್ತಲ ಗಿಡ ಮದ್ದಲ್ಲ ಎನ್ನುವ ಗಾದೆಯನ್ನು ನೆನಪಿಸುವಂತಿದೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X