ಅಲೆವೂರಿನ ಜಿಂಕೆಗಳ ಗ್ರಾಮಕ್ಕೆ ಡಾ.ಶಿವರಾಮ ಕಾರಂತರ ಹೆಸರು
ಅಲೆವೂರಿನ
ಜಿಂಕೆಗಳ
ಗ್ರಾಮಕ್ಕೆ
ಡಾ.ಶಿವರಾಮ
ಕಾರಂತರ
ಹೆಸರು
ಕೊಲ್ಲೂರು
ಅಭಿವೃದ್ಧಿಗೆ
4-
5
ಕೋಟಿ
ರು.
ಮಹಾ
ಯೋಜನೆ
ವಿಶ್ವ ಪ್ರವಾಸೋದ್ಯಮ ದಿನಾಚರಣೆ ಉದ್ಘಾಟಿಸಿ ಇತ್ತೀಚೆಗೆ ಮಾತಾಡಿದ ಉಮಾಶಂಕರ್ ಈ ವಿಷಯ ತಿಳಿಸಿದರು. ಕಾಪು, ಮಲ್ಪೆ, ಸೈಂಟ್ ಮೇರೀಸ್, ಒತ್ತಿನೆಣೆ ಹಾಗೂ ಕೂಡ್ಲು ತೀರ್ಥದ ಅಭಿವೃದ್ಧಿಗೆ ಕೆಯುಐಡಿಎಫ್ಸಿ 1.35 ಕೋಟಿ ರುಪಾಯಿ ಯೋಜನೆ ಮಂಜೂರು ಮಾಡಿದೆ. ಇನ್ನೆರಡು ತಿಂಗಳಲ್ಲಿ ಅಭಿವೃದ್ಧಿ ಕಾಮಗಾರಿ ಶುರುವಾಗಲಿದೆ ಎಂದರು.
ಪಾಜಕದಲ್ಲಿ 50 ಲಕ್ಷ ರುಪಾಯಿ ವೆಚ್ಚದಲ್ಲಿ ಯಾತ್ರಿನಿವಾಸ್ ಪೂರ್ಣಗೊಂಡಿದ್ದು, ಹೆಚ್ಚುವರಿ 18 ಲಕ್ಷ ರು. ಕೋರಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಉಡುಪಿಯಲ್ಲಿ 50 ಲಕ್ಷ ರು. ವೆಚ್ಚದ ಯಾತ್ರಿ ನಿವಾಸಕ್ಕೆ ಮಂಜೂರು ಸಿಕ್ಕಿದೆ. ಕೊಲ್ಲೂರು ಅಭಿವೃದ್ಧಿಗೆ ಸುಮಾರು 4- 5 ಕೋಟಿ ರು. ವೆಚ್ಚದ ಮಹಾ ಯೋಜನೆ ರೂಪಿಸಲಾಗಿದೆ. ಉಡುಪಿ ಜಿಲ್ಲೆಯಲ್ಲಿ ತಾಜ್ ಹೊಟೇಲ್, ಪ್ರವಾಸಿ ಭೂಪಟ ರಚನೆ, ಪ್ರವಾಸಿ ಕಿರು ಕೈಪಿಡಿ ಬಿಡುಗಡೆ, ವಾರಾಹಿಯಲ್ಲಿ ವರ್ಷಪೂರ್ತಿ ರ್ಯಾಫ್ಟಿಂಗ್, ಮಲ್ಪೆ- ಮರವಂತೆಯಲ್ಲಿ ಜಲ ಸಾಹಸ ಕ್ರೀಡೆ ಸವಲತ್ತು ಕಲ್ಪಿಸಲು ಉದ್ದೇಶಿಸಿದ್ದೇವೆ ಎಂದು ಉಮಾಶಂಕರ್ ತಿಳಿಸಿದರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು