ಕೊಡಗಿನಲ್ಲಿ ಸಾಂಸ್ಕೃತಿಕ ನಾಡಹಬ್ಬ ; ಇದು ಮಡಿಕೇರಿ ದಸರಾ !
ಕೊಡಗಿನಲ್ಲಿ
ಸಾಂಸ್ಕೃತಿಕ
ನಾಡಹಬ್ಬ
;
ಇದು
ಮಡಿಕೇರಿ
ದಸರಾ
!
ನಾಲ್ವರು
ಶಕ್ತಿದೇವತೆಗಳಿಗೆ
ಪೂಜೆಯಾಂದಿಗೆ
ದಸರಾಗೆ
ಚಾಲನೆ
ನಗರದಲ್ಲಿರುವ ಈ ನಾಲ್ಕು ಶಕ್ತಿದೇವತೆಗಳು ಸೋದರಿಯರು ಎಂಬ ನಂಬಿಕೆ ಜನರಲ್ಲಿದೆ. ಕೊಡಗನ್ನು ಅರಸರು ಆಳುತ್ತಿದ್ದ ಕಾಲದಿಂದಲೂ ಈ ಶಕ್ತಿ ದೇವತೆಗಳ ದಸರಾ ಉತ್ಸವ ನಡೆದುಕೊಂಡು ಬರುತ್ತಿತ್ತು . ಕಳೆದ 35 ವರ್ಷಗಳಿಂದ ಉತ್ಸವದ ನೇತೃತ್ವವವನ್ನು ಪುರಸಭೆ ವಹಿಸಿಕೊಂಡಿದೆ.
ಸೆ. 27ರಂದು ಕಾವೇರಿ ಕಲಾ ಕ್ಷೇತ್ರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಆರಂಭವಾಗಲಿದ್ದು , ನಾಗರಿಕ ವಿಮಾನಯಾನ ಸಚಿವ ಟಿ. ಜಾನ್ ಕಾರ್ಯಕ್ರಮವನ್ನು ಉದ್ಘಾಟಿಸುವರು. ಸೆ. 28ರಂದು ಬೆಳಗ್ಗೆ 10. 30ಕ್ಕೆ ಜಿಲ್ಲಾ ಮಟ್ಟದ ದಸರಾ ಬಹುಭಾಷಾ ಕವಿಗೋಷ್ಠಿ ನಡೆಯಲಿದೆ. ಜಿ. ಪಿ. ಬಸವರಾಜ್ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಲಿದ್ದು - ಕೊಡವ, ಕನ್ನಡ, ಹಿಂದಿ, ಇಂಗ್ಲಿಷ್, ಮಲಯಾಳಂ, ತೆಲುಗು, ಬ್ಯಾರಿ, ತುಳು, ತಮಿಳು ಭಾಷೆಯ ಕವನಗಳ ವಾಚನ ನಡೆಯಲಿದೆ.
ಅಕ್ಟೋಬರ್ 1 ಮತ್ತು 2ರಂದು ದಸರಾ ಕ್ರೀಡಾಕೂಟ. ವಿಜಯ ದಶಮಿಯ ದಿನ ರಾತ್ರಿ ನಗರದಲ್ಲಿ ದಸರಾ ಹಬ್ಬದ ಪ್ರಮುಖ ಆಕರ್ಷಣೆ ದಶಮಂಟಪಗಳ ಮೆರವಣಿಗೆ ನಡೆಯಲಿದೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು