ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೋಳಿಗೆ ಹಿಡಿದು ಬಾಗಿಲಿಗೆ ಬಂದಿಹರು ಚಿತ್ರದುರ್ಗ ಶರಣರು

By Staff
|
Google Oneindia Kannada News

ಜೋಳಿಗೆ ಹಿಡಿದು ಬಾಗಿಲಿಗೆ ಬಂದಿಹರು ಚಿತ್ರದುರ್ಗ ಶರಣರು
ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬದ ನೆರವಿಗೆ ಪಾದಯಾತ್ರೆ

ದಾವಣಗೆರೆ : ಬರದಿಂದ ಕಂಗೆಟ್ಟ ರೈತರಲ್ಲಿ ಆತ್ಮಸ್ಥೈರ್ಯ ಮೂಡಿಸಲು ಹಾಗೂ ನೆರವು ನೀಡುವ ಉದ್ದೇಶದ ಪಾದಯಾತ್ರೆಯನ್ನು ಕೈಗೊಳ್ಳಲು ಚಿತ್ರದುರ್ಗದ ಶಿವಮೂರ್ತಿ ಮುರುಘ ರಾಜೇಂದ್ರ ಶರಣರು ನಿರ್ಧರಿಸಿದ್ದಾರೆ.

ಅಂಗಡಿ ಹಾಗೂ ಮನೆ ಬಾಗಿಲಿಗೆ ಚಿತ್ರದುರ್ಗದ ಮುರುಘರಾಜೇಂದ್ರ ಶರಣರು ಜೋಳಿಗೆಯಾಂದಿಗೆ ಖುದ್ದು ತೆರಳುವರು. ಧನ ಹಾಗೂ ಧಾನ್ಯಗಳನ್ನು ಸಂಗ್ರಹಿಸಿ, ಸಂಗ್ರಹವಾದ ಧನಧಾನ್ಯಗಳನ್ನು ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳಿಗೆ ವಿತರಿಸಲಾಗುವುದು. ಅಂದಹಾಗೆ, ಶುಕ್ರವಾರ (ಸೆ.26) ದಿಂದಲೇ ಶಿವಮೂರ್ತಿ ಶರಣರ ಪಾದಯಾತ್ರೆ ಆರಂಭ.

ಕಂಗೆಟ್ಟ ರೈತರಿಗೆ ಸಾಂತ್ವನ ನೀಡುವುದು ಹಾಗೂ ನೆರವು ನೀಡುವುದು ಚಿತ್ರದುರ್ಗ ಮುರುಘರಾಜೇಂದ್ರ ಶರಣರ ದಾಸೋಹ ಪಾದಯಾತ್ರೆಯ ಉದ್ದೇಶವಾಗಿದೆ ಎಂದು ದಾವಣಗೆರೆಯ ವಿರಕ್ತ ಮಠದ ಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X