ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಲಾಕ್ಷೇತ್ರದಲ್ಲಿ ಶ್ರೀರಂಗ ನಮಸ್ಕಾರ

By Staff
|
Google Oneindia Kannada News

ಕಲಾಕ್ಷೇತ್ರದಲ್ಲಿ ಶ್ರೀರಂಗ ನಮಸ್ಕಾರ
ಶ್ರೀರಂಗ ಜನ್ಮ ಶತಮಾನೋತ್ಸವ- ಸೆ.26ರಿಂದ ನಾಟಕೋತ್ಸವ, ಛಾಯಾಚಿತ್ರ ಪ್ರದರ್ಶನ ಹಾಗೂ ವಿಚಾರ ಸಂಕಿರಣ

ಬೆಂಗಳೂರು : ನಾಟಕಕಾರ ಶ್ರೀರಂಗರ ಜನ್ಮ ಶತಮಾನೋತ್ಸವದ ಅಂಗವಾಗಿ ಸೆ. 26ರಿಂದ 30ರವರೆಗೆ ‘ಶ್ರೀರಂಗ ನಮಸ್ಕಾರ’ ನಾಟಕೋತ್ಸವ ಆಯೋಜಿಸಲಾಗಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ರಾಷ್ಟ್ರೀಯ ನಾಟಕ ಶಾಲೆ ಏರ್ಪಡಿಸುವ ಈ ನಾಟಕೋತ್ಸವ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿದೆ ಎಂದು ನಾಟಕ ಶಾಲೆಯ ಪ್ರಾದೇಶಿಕ ಸಂಪನ್ಮೂಲ ಕೇಂದ್ರದ ಅಧ್ಯಕ್ಷ ಸುರೇಶ್‌ ಆನಗಳ್ಳಿ ತಿಳಿಸಿದರು.

Srirangaಸೆ. 26ರಂದು ಕನ್ನಡ ಮತ್ತು ಸಂಸ್ಕೃತಿ ಸಚಿವೆ ರಾಣಿ ಸತೀಶ್‌ ನಾಟಕೋತ್ಸವ ಉದ್ಘಾಟಿಸಲಿದ್ದು, ಅದೇ ದಿನ ಶ್ರೀರಂಗರ ಕುರಿತ ಛಾಯಾಚಿತ್ರ ಪ್ರದರ್ಶನವನ್ನು ಕಲಾವಿದ ಡಿ.ಕೆ.ಚೌಟ ಉದ್ಘಾಟಿಸುವರು. ನಾಟಕೋತ್ಸವದ ಸಂದರ್ಭದಲ್ಲಿ ವಿಚಾರ ಸಂಕಿರಣಗಳೂ ನಡೆಯಲಿವೆ. ಡಾ. ಕೆ. ಮರುಳ ಸಿದ್ಧಪ್ಪ, ವೈಕುಂಠರಾಜು, ಪ್ರೊ. ಚಂದ್ರಶೇಖರ ಪಾಟೀಲ, ಆರ್‌.ನಾಗೇಶ್‌ ಹಾಗೂ ಜಿ.ಎಸ್‌.ಆಮೂರ ವಿವಿಧ ಸಂಕಿರಣಗಳ ಅಧ್ಯಕ್ಷತೆ ವಹಿಸಲಿದ್ದಾರೆ.

ಪ್ರದರ್ಶಿತವಾಗಲಿರುವ ನಾಟಕಗಳು-

ಸೆ. 26- ಕೇಳು ಜನಮೇಜಯ
ಸೆ. 27- ಏನ ಬೇಡಲಿ ನಿನ್ನ ಬಳಿ ಬಂದು
ಸೆ.28- ಸಿರಿ ಪುರಂದರ
ಸೆ.29- ಶೋಕಚಕ್ರ
ಸೆ.30- ಕತ್ತಲೆ ಬೆಳಕು.

ಸೆ.30ನೇ ತಾರೀಕು ಸಮಾರೋಪ ಸಮಾರಂಭ ನಡೆಯಲಿದ್ದು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಗಿರೀಶ್‌ ಕಾರ್ನಾಡ್‌ ಭಾಗವಹಿಸುವರು ಎಂದು ಸುರೇಶ್‌ ಆನಗಳ್ಳಿ ಹೇಳಿದರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X