ಕಲಾಕ್ಷೇತ್ರದಲ್ಲಿ ಶ್ರೀರಂಗ ನಮಸ್ಕಾರ
ಕಲಾಕ್ಷೇತ್ರದಲ್ಲಿ
ಶ್ರೀರಂಗ
ನಮಸ್ಕಾರ
ಶ್ರೀರಂಗ
ಜನ್ಮ
ಶತಮಾನೋತ್ಸವ-
ಸೆ.26ರಿಂದ
ನಾಟಕೋತ್ಸವ,
ಛಾಯಾಚಿತ್ರ
ಪ್ರದರ್ಶನ
ಹಾಗೂ
ವಿಚಾರ
ಸಂಕಿರಣ
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ರಾಷ್ಟ್ರೀಯ ನಾಟಕ ಶಾಲೆ ಏರ್ಪಡಿಸುವ ಈ ನಾಟಕೋತ್ಸವ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿದೆ ಎಂದು ನಾಟಕ ಶಾಲೆಯ ಪ್ರಾದೇಶಿಕ ಸಂಪನ್ಮೂಲ ಕೇಂದ್ರದ ಅಧ್ಯಕ್ಷ ಸುರೇಶ್ ಆನಗಳ್ಳಿ ತಿಳಿಸಿದರು.
ಸೆ. 26ರಂದು ಕನ್ನಡ ಮತ್ತು ಸಂಸ್ಕೃತಿ ಸಚಿವೆ ರಾಣಿ ಸತೀಶ್ ನಾಟಕೋತ್ಸವ ಉದ್ಘಾಟಿಸಲಿದ್ದು, ಅದೇ ದಿನ ಶ್ರೀರಂಗರ ಕುರಿತ ಛಾಯಾಚಿತ್ರ ಪ್ರದರ್ಶನವನ್ನು ಕಲಾವಿದ ಡಿ.ಕೆ.ಚೌಟ ಉದ್ಘಾಟಿಸುವರು. ನಾಟಕೋತ್ಸವದ ಸಂದರ್ಭದಲ್ಲಿ ವಿಚಾರ ಸಂಕಿರಣಗಳೂ ನಡೆಯಲಿವೆ. ಡಾ. ಕೆ. ಮರುಳ ಸಿದ್ಧಪ್ಪ, ವೈಕುಂಠರಾಜು, ಪ್ರೊ. ಚಂದ್ರಶೇಖರ ಪಾಟೀಲ, ಆರ್.ನಾಗೇಶ್ ಹಾಗೂ ಜಿ.ಎಸ್.ಆಮೂರ ವಿವಿಧ ಸಂಕಿರಣಗಳ ಅಧ್ಯಕ್ಷತೆ ವಹಿಸಲಿದ್ದಾರೆ.
ಪ್ರದರ್ಶಿತವಾಗಲಿರುವ ನಾಟಕಗಳು-
ಸೆ.
26-
ಕೇಳು
ಜನಮೇಜಯ
ಸೆ.
27-
ಏನ
ಬೇಡಲಿ
ನಿನ್ನ
ಬಳಿ
ಬಂದು
ಸೆ.28-
ಸಿರಿ
ಪುರಂದರ
ಸೆ.29-
ಶೋಕಚಕ್ರ
ಸೆ.30-
ಕತ್ತಲೆ
ಬೆಳಕು.
ಸೆ.30ನೇ ತಾರೀಕು ಸಮಾರೋಪ ಸಮಾರಂಭ ನಡೆಯಲಿದ್ದು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಗಿರೀಶ್ ಕಾರ್ನಾಡ್ ಭಾಗವಹಿಸುವರು ಎಂದು ಸುರೇಶ್ ಆನಗಳ್ಳಿ ಹೇಳಿದರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು