ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡೆಕ್ಕನ್‌ನ ಉದ್ಘಾಟನಾ ವಿಮಾನದಲ್ಲಿ ಬೆಂಕಿ, ನಾಯ್ಡು ಬಚಾವ್‌

By Staff
|
Google Oneindia Kannada News

ಡೆಕ್ಕನ್‌ನ ಉದ್ಘಾಟನಾ ವಿಮಾನದಲ್ಲಿ ಬೆಂಕಿ, ನಾಯ್ಡು ಬಚಾವ್‌
ಸೆ. 29ರಿಂದ ಬೇಗುಂಪೇಟೆ-ವಿಜಯವಾಡ ನಡುವೆ ವಿಮಾನ ಹಾರಾಟ ನಿಯಮಿತ

ಹೈದರಾಬಾದ್‌: ಉದ್ಘಾಟನೆಯ ಸಂದರ್ಭದಲ್ಲಿ ಡೆಕ್ಕನ್‌ ಏರ್‌ವೇಸ್‌ನ ವಿಮಾನವೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದ್ದು , ವಿಮಾನದಲ್ಲಿದ್ದ ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ.

ಉದ್ಘಾಟನೆಯ ಸಂದರ್ಭದಲ್ಲಿ ಟೇಕ್‌ ಆಫ್‌ ಆಗುತ್ತಲೇ ಡೆಕ್ಕನ್‌ ಏರ್‌ವೇಸ್‌ನ ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡಿತು. ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಕೇಂದ್ರ ವಿಮಾನಯಾನ ಸಚಿವ ರಾಜೀವ್‌ ಪ್ರತಾಪ್‌ ರುದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಎಂ. ವೆಂಕಯ್ಯ ನಾಯ್ಡು ಮತ್ತು ಹಲವಾರು ಎಂಪಿಗಳು, ಎಂಎಲ್‌ಎಗಳು ಹಾಗೂ ಪತ್ರಕರ್ತರು ಆಶ್ಚರ್ಯಕರ ರೀತಿಯಲ್ಲಿ ಅಪಘಾತದಿಂದ ಪಾರಾಗಿದ್ದಾರೆ.

ವಿಮಾನವು ಬೇಗುಂಪೇಟೆ ನಿಲ್ದಾಣದಿಂದ ವಿಜಯವಾಡದ ಕಡೆಗೆ ಹೊರಟಿತ್ತು. ಅಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಡೆಕ್ಕನ್‌ ಏರ್‌ವೇಸ್‌ನ ಪ್ರಾದೇಶಿಕ ವಿಮಾನ ಸೇವೆಯಡಿ ಬೇಗುಂಪೇಟೆ- ವಿಜಯವಾಡದ ನಡುವೆ ಹಾರಾಡಲಿರುವ ವಿಮಾನವನ್ನು ಬುಧವಾರ (ಸೆ. 24) ಬೆಳಗ್ಗೆ ಉದ್ಘಾಟಿಸಿದರು.

ವಿಮಾನದ ಇಂಜಿನ್‌ನಲ್ಲಿ ತೇವಾಂಶ ಶೇಖರಣೆಯಾಗಿದ್ದರಿಂದ ವಿಮಾನದಲ್ಲಿ ಬೆಂಕಿ ಕಾಣಿಸಿಕೊಳ್ಳಲಾರಂಭಿಸಿತು ಎಂದು ಡೆಕ್ಕನ್‌ ಏರ್‌ವೇಸ್‌ನ ಕ್ಯಾಪ್ಟನ್‌ ಗೋಪಿನಾಥ್‌ ಹೇಳಿದ್ದಾರೆ. ಬೇಗುಂಪೇಟೆಯಿಂದ ವಿಜಯವಾಡಕ್ಕೆ ಹಾರಾಡಲಿರುವ ವಿಮಾನಗಳ ಪ್ರಯಾಣ ಮುಂದಿನ ಸೋಮವಾರ( ಸೆ. 29)ದಿಂದ ನಿಯಮಿತವಾಗಲಿದೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X