ನಿದ್ದೆಯಿಂದ ಎಚ್ಚತ್ತ ಸರಕಾರ, ಬಾಲ್ಯ ವಿವಾಹ ಕಾಯ್ದೆಗೆ ತಿದ್ದುಪಡಿ
ನಿದ್ದೆಯಿಂದ
ಎಚ್ಚತ್ತ
ಸರಕಾರ,
ಬಾಲ್ಯ
ವಿವಾಹ
ಕಾಯ್ದೆಗೆ
ತಿದ್ದುಪಡಿ
ಮದುವೆಯ
ಸಂದರ್ಭದಲ್ಲಿ
ವಯಸ್ಸಿನ
ದಾಖಲೆಗಳ
ಸಲ್ಲಿಕೆ
ಕಡ್ಡಾಯ..
ತಿದ್ದುಪಡಿಗಾಗಿ ಈಗಾಗಲೇ ಕರಡನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಿದ್ಧಪಡಿಸಿದ್ದು , ಕಾನೂನು ಸಚಿವಿ ಡಿ. ಬಿ. ಚಂದ್ರೇಗೌಡ ಈ ಕರಡಿಗೆ ಈಗಾಗಲೇ ಒಪ್ಪಿಗೆ ನೀಡಿದ್ದಾರೆ. ಬಾಲ್ಯ ವಿವಾಹ ತಡೆ ಕಾಯಿದೆ ಕೇಂದ್ರದ ಕಾನೂನಾಗಿದ್ದರೂ ರಾಜ್ಯ ಸರಕಾರಗಳಿಗೆ ಕಾಯಿದೆ ತಿದ್ದುಪಡಿ ಮಾಡುವ ಅವಕಾಶವಿದೆ.
ಬಾಲ್ಯ ವಿವಾಹ ಕುರಿತು ಕಪ್ಪು ಪಟ್ಟಿಗೆ ಸೇರಿಸಲಾಗಿರುವ ಹತ್ತು ರಾಜ್ಯಗಳಲ್ಲಿ ಕರ್ನಾಟಕವೂ ಒಂದು. ಸುಪ್ರಿಂ ಕೋರ್ಟ್ ಕೂಡ ರಾಜ್ಯಕ್ಕೆ ನೊಟೀಸ್ ನೀಡಿ ಬಾಲ್ಯ ವಿವಾಹ ನಿಯಂತ್ರಿಸುವಂತೆ ಈ ಹಿಂದೆ ಸೂಚಿಸಿತ್ತು.
ತಿದ್ದುಪಡಿ ಮಸೂದೆ ಕಾನೂನಾಗಿ ಜಾರಿಗೆ ಬಂದ ನಂತರ ಬಾಲ್ಯ ವಿವಾಹ ತಡೆಯಲು ಪ್ರತಿ ಜಿಲ್ಲೆಯಲ್ಲಿ ಒಬ್ಬ ಅಧಿಕಾರಿಯನ್ನು ನೇಮಿಸಲಾಗುವುದು. ಮದುವೆಯ ಸಂದರ್ಭದಲ್ಲಿ ವಯಸ್ಸಿನ ದಾಖಲೆಗಳ ಸಲ್ಲಿಕೆ ಕಡ್ಡಾಯ, ವಯಸ್ಸಿನ ದಾಖಲೆ ಇಲ್ಲದೇ ಇದ್ದಲ್ಲಿ ವೈದ್ಯಕೀಯ ಪರೀಕ್ಷೆ ಕಡ್ಡಾಯಪಡಿಸುವ ಬಗ್ಗೆ ತಿದ್ದುಪಡಿ ಮಸೂದೆಯಲ್ಲಿ ಹೇಳಲಾಗಿದೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು