ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನ್ಯಾಯಮೂರ್ತಿ ಅಂಗಳಕ್ಕೆ ಕೋರ್ಟ್‌ ಪೀಠ ಸ್ಥಳ ನಿರ್ಣಯದ ಚೆಂಡು

By Staff
|
Google Oneindia Kannada News

ನ್ಯಾಯಮೂರ್ತಿ ಅಂಗಳಕ್ಕೆ ಕೋರ್ಟ್‌ ಪೀಠ ಸ್ಥಳ ನಿರ್ಣಯದ ಚೆಂಡು
ಶಾಶ್ವತ ಪೀಠ ಸ್ಥಾಪನೆ ನಿರ್ಣಯದ ಅಧಿಕಾರವಿರುವುದು ರಾಷ್ಟ್ರಪತಿಗೆ ಮಾತ್ರ

ಬೆಂಗಳೂರು : ರಾಜ್ಯದ ಯಾವ ಸ್ಥಳದಲ್ಲಿ ಹೈಕೋಟ್‌ ಪೀಠ ಸ್ಥಾಪಿಸಬೇಕು ಎಂದು ನಿರ್ಣಯ ಕೈಗೊಳ್ಳುವ ಹೊಣೆಯನ್ನು ರಾಜ್ಯ ಸರ್ಕಾರ ಹೈಕೋರ್ಟಿನ ಮುಖ್ಯ ನ್ಯಾಯಾಧೀಶರಿಗೆ ವಗಾಯಿಸಿದೆ.

ಹೈಕೋರ್ಟ್‌ ಪೀಠ ತಮಗೇ ಬೇಕು ಎಂದು ಉತ್ತರ ಕರ್ನಾಟಕ ಹಾಗೂ ಹೈದ್ರಾಬಾದ್‌ ಕರ್ನಾಟಕದ ವಕೀಲರು ಪ್ರತಿನಿತ್ಯ ಬೈಠಕ್‌ ನಡೆಸುತ್ತ ಸರ್ಕಾರದ ಮೇಲೆ ಒತ್ತಡ ಹೇರುತ್ತಿರುವುದರಿಂದ ಸರ್ಕಾರ ಸ್ಥಳ ನಿರ್ಣಯದ ಚೆಂಡನ್ನು ನ್ಯಾಯಮೂರ್ತಿಗಳ ಅಂಗಳಕ್ಕೆ ತಳ್ಳಿದೆ.

ಪ್ರಸಕ್ತ ಸಂದರ್ಭದಲ್ಲಿ ಹೈಕೋರ್ಟ್‌ ಪೀಠ ಯಾವ ಸ್ಥಳದಲ್ಲಾಗಬೇಕು ಎನ್ನುವ ರಾಜಕೀಯ ನಿರ್ಣಯ ಕೈಗೊಳ್ಳುವುದು ಸಾಧ್ಯವಿಲ್ಲ . ಆ ಕಾರಣದಿಂದಾಗಿ ಪೀಠದ ಸ್ಥಳವನ್ನು ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿ ಎನ್‌.ಕೆ.ಜೈನ್‌ ಅವರು ಕೈಗೊಳ್ಳಬೇಕೆಂದು ಸರ್ಕಾರ ಬಯಸಿದೆ ಎಂದು ಕಾನೂನು ಸಚಿವ ಡಿ.ಬಿ.ಚಂದ್ರೇಗೌಡ ಮಂಗಳವಾರ (ಸೆ.23) ಸುದ್ದಿಗಾರರಿಗೆ ತಿಳಿಸಿದರು.

ಶಾಶ್ವತ ಪೀಠ ಅಥವಾ ಸರ್ಕೀಟ್‌ ಪೀಠ ಸ್ಥಾಪಿಸುವ ನಿರ್ಣಯ ಕೂಡ ಹೈಕೋರ್ಟ್‌ ಕೈಗೊಳ್ಳಲಿದೆ. ಒಂದುವೇಳೆ ಶಾಶ್ವತ ಪೀಠ ಸ್ಥಾಪನೆಯ ನಿರ್ಣಯ ಕೈಗೊಂಡರೂ, ಈ ಕುರಿತ ಅಂತಿಮ ನಿರ್ಣಯವನ್ನು ರಾಷ್ಟ್ರಪತಿ ಎಪಿಜೆ ಅಬ್ದುಲ್‌ ಕಲಾಂ ಅವರು ಕೈಗೊಳ್ಳುವರು. ಸರ್ಕೀಟ್‌ ಪೀಠವಾದರೆ ಮುಖ್ಯ ನ್ಯಾಯಮೂರ್ತಿಗಳು ನಿರ್ಣಯ ಕೈಗೊಳ್ಳುವ ಅಧಿಕಾರ ಹೊಂದಿದ್ದಾರೆ ಎಂದು ಚಂದ್ರೇಗೌಡ ಹೇಳಿದರು.

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X