ಪ್ರಗತಿಪರ ಜನತಾದಳ-ಕಾಂಗ್ರೆಸ್ ‘50:50’
ಪ್ರಗತಿಪರ
ಜನತಾದಳ-ಕಾಂಗ್ರೆಸ್
‘50:50’
ಸೆಪ್ಟಂಬರ್
26ರ
ಶುಕ್ರವಾರ
ಕೋಲಾರ
ಜಿಲ್ಲೆಯ
ವೇಮಗಲ್
ಕ್ಷೇತ್ರದ
ಚುನಾವಣೆ.
ಮಾಜಿ
ಸಚಿವ
ಭೈರೇಗೌಡರ
ನಿಧನದಿಂದ
ತೆರವಾದ
ಈ
ಕ್ಷೇತ್ರದಲ್ಲಿ
ಈಗ
ತುರುಸಿನ
ಸ್ಪರ್ಧೆ.
ಚುನಾವಣಾ
ಹಣಾಹಣಿಯ
ಚಿತ್ರಣ
ಇಲ್ಲಿದೆ.
ಕೋಲಾರ : ವೇಮಗಲ್ ವಿಧಾನಸಭೆ ಕ್ಷೇತ್ರದ ಮರು ಚುನಾವಣೆ ಪ್ರಚಾರ ಕಾರ್ಯ ಬಿರುಸಿನಿಂದ ಸಾಗಿದೆ. ಎರಡೂ ಪಕ್ಷಗಳು ಗೆಲುವು ತಮ್ಮದೇ ಎಂದು ಬೀಗುತ್ತಿವೆಯಾದರೂ ಅಂತಿಮ ತೀರ್ಮಾನ ಮತದಾರನದ್ದು .
ಕ್ಷೇತ್ರದಲ್ಲಿ ಪ್ರಗತಿಪರ ಜನತಾದಳ ಅಭ್ಯರ್ಥಿಯಾಗಿ ದಿವಂಗತ ಸಿ.ಬಿ. ಕೃಷ್ಣ ಭೈರೇಗೌಡ, ಕಾಂಗ್ರೆಸ್ ಅಭ್ಯರ್ಥಿ ವಿ.ವೆಂಕಟಮುನಿಯಪ್ಪ , ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ ಅಭ್ಯರ್ಥಿ ನಾರಾಯಣಸ್ವಾಮಿ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ಗಿನ್ನೆಸ್ ದಾಖಲೆಯ ಹೊಟ್ಟೆಪಕ್ಷ ರಂಗಸ್ವಾಮಿ ಕಣದಲ್ಲಿದ್ದಾರೆ.
ಪ್ರಸ್ತುತ ಜನತೆಯ ಪ್ರತಿಕ್ರಿಯೆ ಗಮನಿಸಿದಾಗ ಕಾಂಗ್ರೆಸ್ ಮತ್ತು ಪ್ರಗತಿಪರ ಜನತಾದಳ ಅಭ್ಯರ್ಥಿಯ ನಡುವೆ ನೇರ ಪೈಪೋಟಿಯಿದ್ದು, ಇಬ್ಬರಿಗೂ ಸಮಾನ ಅವಕಾಶ ಕಂಡುಬರುತ್ತಿದೆ. ಉಳಿದಿಬ್ಬರು ಅಭ್ಯರ್ಥಿಗಳು ಆಟಕ್ಕುಂಟು- ಲೆಕ್ಕಕ್ಕಿಲ್ಲ ಎಂಬಂತಿದ್ದಾರೆ.
ಹಿಂದೆಂದಿಗಿಂತ ಅಬ್ಬರದ ಪ್ರಚಾರದ ಮೂಲಕ ಕಾಂಗ್ರೆಸ್ ಗೆಲುವು ತನ್ನದೇ ಎಂದು ಬೀಗುತ್ತಿದ್ದರೆ, ಭಾವನಾತ್ಮಕ ಪ್ರಚಾರ ಕೈಗೊಂಡಿರುವ ಪ್ರಗತಿಪರ ಜನತಾದಳ ತನ್ನ ಪಾರುಪತ್ಯ ಉಳಿಸಿಕೊಳ್ಳುವುದಾಗಿ ಹೇಳಿಕೊಳ್ಳುತ್ತಿದೆ.
ಭೈರೇಗೌಡರ ಅವಧಿಯಲ್ಲಿ ಜನತಾದಳದಲ್ಲಿದ್ದ ಮುಖಂಡರನ್ನು ತನ್ನತ್ತ ಸೆಳೆದುಕೊಳ್ಳಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ. ಕೆಪಿಸಿಸಿ ಅಧ್ಯಕ್ಷ ಜನಾರ್ದನ ಪೂಜಾರಿ ಈಗಾಗಲೇ ಎರಡು ಬಾರಿ ತಮ್ಮ ಪಾದಯಾತ್ರೆ ಮುಗಿಸಿದ್ದಾರೆ. ಸೋನಿಯಾ ಭಾವಚಿತ್ರ ಮತದಾರರಿಗೆ ನೀಡಿ ಕಾಂಗ್ರೆಸ್ಗೆ ಮತ ಯಾಚಿಸುತ್ತಿದ್ದಾರೆ. ಇನ್ನೊಂದೆಡೆ ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ಅವರಿಂದ ಹಿಡಿದು ಘಟಾನುಘಟಿಗಳೇ ಪ್ರಚಾರದಲ್ಲಿ ತೊಡಗಿದ್ದಾರೆ.
ಕೋಲಾರದ ಶಾಸಕ ಕೆ.ಶ್ರೀನಿವಾಸಗೌಡ, ಮಾಜಿ ಸ್ಪೀಕರ್ ರಮೇಶ್ಕುಮಾರ್ ಸೇರಿದಂತೆ ಜಿಲ್ಲೆಯ ಪ್ರಗತಿಪರರು ಅಭ್ಯರ್ಥಿ ಜೊತೆ ಮನೆ ಮನೆಗೆ ತೆರಳುತ್ತಿದ್ದಾರೆ. ಕ್ಷೇತ್ರದ ಜನತೆಗಾಗಿ ವಿದೇಶದ ಉದ್ಯೋಗ ಬಿಟ್ಟು ಬಂದ ಕೃಷ್ಣೇಗೌಡರನ್ನು ಗೆಲ್ಲಿಸಿ ಇಲ್ಲಿಯೇ ಉಳಿಸಿಕೊಳ್ಳುವಂತೆ ಮತದಾರನಲ್ಲಿ ಮನವಿ ಮಾಡಿಕೊಳ್ಳುತ್ತಿದ್ದಾರೆ.
ಸಿ.ಭೈರೇಗೌಡರ ಪತ್ನಿ ಸಾವಿತ್ರಮ್ಮ ಕೂಡ ಒಂದೆರಡು ದಿನ ಪ್ರಚಾರ ನಡೆಸಿ, ಪ್ರಸ್ತುತ ಮೌನವಾಗಿದ್ದಾರೆ. ಆದರೆ, ಕೃಷ್ಣ ಅರ ಪತ್ನಿ ಮೀನಾಕ್ಷಿ ಪ್ರಚಾರನಿರತರಾಗಿದ್ದಾರೆ. ಮತದಾರರ ಜತೆ ಬೆರೆಯುವ ಮೂಲಕ ಭೈರೇಗೌಡರ ಕುಟುಂಬದ ಗೆಲುವಿಗೆ ರಾಜ್ಯ ಮುಖಂಡರ ಅಗತ್ಯತೆ ಇಲ್ಲ ಎಂಬುದನ್ನು ಬಿಂಬಿಸತೊಡಗಿದ್ದಾರೆ.
ವೇಮಗಲ್ ಕ್ಷೇತ್ರ ವ್ಯಾಪ್ತಿಗೆ ಬರುವ ಕೋಲಾರ ತಾಲ್ಲೂಕಿನಲ್ಲಿ ಮೇಲ್ನೋಟಕ್ಕೆ ಕಾಂಗ್ರೆಸ್ ಮೇಲುಗೈ ಸಾಧಿಸಿದಂತೆ ಕಂಡುಬರುತ್ತಿದೆ. ಅಬ್ಬರದ ಪ್ರಚಾರವೇ ಇದಕ್ಕೆ ಕಾರಣ. ಆದರೆ ಚಿಂತಾಮಣಿ ತಾಲ್ಲೂಕು ವ್ಯಾಪ್ತಿಯ ಕಸಬಾ ಮತ್ತು ಕೈವಾರ ಹೋಬಳಿಯಲ್ಲಿ ಪ್ರಗತಿಪರ ಅಭ್ಯರ್ಥಿ ಮೇಲುಗೈ ಸಾಧಿಸಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ. ಇದನ್ನು ಬದಲಿಸಲು ಮಾಜಿ ಸಚಿವ ಕೆ.ಎಂ.ಕೃಷ್ಣಾರೆಡ್ಡಿ ಹಗಲಿರುಳು ಪ್ರಚಾರದಲ್ಲಿ ತೊಡಗಿದ್ದರೂ ಹೆಚ್ಚಿನ ಪ್ರಗತಿ ಕಂಡುಬಂದಿಲ್ಲ . ಒಟ್ಟಿನಲ್ಲಿ ವೇಮಗಲ್ ವಿಧಾನಸಭೆ ಚುನಾವಣೆಯ ಪ್ರಸ್ತುತ ವಿದ್ಯಮಾನಗಳನ್ನು ಗಮನಿಸಿದಾಗ ಕಾಂಗ್ರೆಸ್ ಮತ್ತು ಪ್ರಗತಿಪರ ಅಭ್ಯರ್ಥಿಗೆ ಗೆಲ್ಲುವ ಅವಕಾಶ ಸಮಾನವಾಗಿದೆ.
(ಸ್ನೇಹಸೇತು : ವಿಜಯ ಕರ್ನಾಟಕ)
ಮುಖಪುಟ / ವಾಟ್ಸ್ ಹಾಟ್