ವೃದ್ಧ ಅಧ್ಯಕ್ಷ : ಚಿದಾನಂದಮೂರ್ತಿ ವಿರುದ್ಧ ಹರಿಹಾಯ್ದ ಇದಿನಬ್ಬ
ವೃದ್ಧ
ಅಧ್ಯಕ್ಷ
:
ಚಿದಾನಂದಮೂರ್ತಿ
ವಿರುದ್ಧ
ಹರಿಹಾಯ್ದ
ಇದಿನಬ್ಬ
ಪ್ರಾಧಿಕಾರದ
ಅಧ್ಯಕ್ಷತೆ
ಬಗ್ಗೆ
ಚಿಮೂ
ಹೇಳಿಕೆ
ವಿರುದ್ಧ
ಸಿಡಿಮಿಡಿ
ಕನ್ನಡ ಪ್ರಾಧಿಕಾರಕ್ಕೆ ವಯಸ್ಸಾದವರನ್ನು ಅಧ್ಯಕ್ಷರನ್ನಾಗಿ ಮಾಡಬಾರದು. ಕಾರ್ಮಿಕರ ಕಷ್ಟಗಳನ್ನು ಅರಿತುಕೊಳ್ಳುವ ಸಾಮರ್ಥ್ಯ ಉಳ್ಳ ಯುವಕರನ್ನು ಪ್ರಾಧಿಕಾರದ ಅಧ್ಯಕ್ಷರನ್ನಾಗಿ ನೇಮಿಸಬೇಕು ಎಂದು ಇದಿನಬ್ಬರ ಹೆಸರು ಉಲ್ಲೇಖಿಸದೆಯೇ ಚಿಮೂ ಇತ್ತೀಚೆಗೆ ಹೇಳಿದ್ದರು.
ಭಾನುವಾರ ನಗರದ ಕರ್ನಾಟಕ ಕೈಗಾರಿಕೆ ಮತ್ತು ವಾಣಿಜ್ಯೋದ್ಯಮ ಕನ್ನಡ ಸಂಘಗಳ ಒಕ್ಕೂಟ ವಾರ್ಷಿಕೋತ್ಸವದ ವೇದಿಕೆಯನ್ನು ಚಿಮೂಗೆ ಇದಿರೇಟು ನೀಡಲು ಬಳಸಿಕೊಂಡ ಇದಿನಬ್ಬ- ತಮ್ಮ ಮಾತಿನಲ್ಲಿ ಎಲ್ಲೂ ಚಿಮೂ ಹೆಸರನ್ನು ಉಲ್ಲೇಖಿಸದೆ ತರಾಯೆಗೆ ತೆಗೆದುಕೊಂಡರು.
ಇದಿನಬ್ಬ ಅವರ ಪ್ರತಿಕ್ರಿಯೆ :
ಮೂರು ವರ್ಷದ ನಂತರ ನನ್ನ ಸಾಧನೆಯ ಬಗ್ಗೆ ಮಾತನಾಡಬೇಕು. ನಾನು ಅಧಿಕಾರ ಸ್ವೀಕರಿಸಿ ಕೇವಲ ಐದೇ ತಿಂಗಳಾಗಿದೆ. ಟೀಕೆ ಮಾಡುವವರು ಮಾಡುತ್ತಿರುತ್ತಾರೆ. ಯಾಕಂದ್ರೆ ‘ಅವರು’ ಕುಳಿತು ಯೋಚನೆ ಮಾಡುವವರೇ ವಿನಾ ಕೆಲಸ ಮಾಡುವವರಲ್ಲ ಎಂದ ಇದಿನಬ್ಬ, ತಾವು ಪ್ರಾಧಿಕಾರದ ಅಧ್ಯಕ್ಷರಾದ ಮೇಲೆ ಏಳು ಮಂದಿ ತರುಣರನ್ನು ಪ್ರಾಧಿಕಾರದ ಸದಸ್ಯರನ್ನಾಗಿ ನೇಮಿಸಿರುವುದಾಗಿ ಹೇಳಿದರು.
ವಯಸ್ಸಾದವರನ್ನು ಹಳೇ ಬೇರಿಗೆ ಹೋಲಿಸಿದ ಇದಿನಬ್ಬ- ಅದು ಮಣ್ಣಿನಲ್ಲಿ ಭದ್ರವಾಗಿರುತ್ತದೆ. ನಾನು ಬಿಜೆಪಿ ಮತ್ತು ಕಮ್ಯೂನಿಸ್ಟ್ ಬಲವಾಗಿರುವ ಪ್ರದೇಶದಿಂದ ನಾಲ್ಕು ಬಾರಿ ವಿಧಾನ ಸಭೆಗೆ ಆಯ್ಕೆಯಾಗಿದ್ದೇನೆ. ನನ್ನ ಆರಿಸಿದವರೇ ಕಾರ್ಮಿಕರು. ನನಗೆ ಕಾರ್ಮಿಕರ ಕುರಿತು ಸಾಕಷ್ಟು ಕಾಳಜಿ ಇದೆ. ಯಾರನ್ನೋ ಹೊಗಳಲಿಕ್ಕಾಗಿ ಜಾತಿ ಮನೋಭಾವ ಮತ್ತು ರಾಜಕೀಯ ಬುದ್ಧಿ ಉಪಯೋಗಿಸಿ ಬೇರೆಯವರನ್ನು ಟೀಕಿಸುವುದು ಉಚಿತವಲ್ಲ ಎಂದು ಇದಿನಬ್ಬ ಬುದ್ಧಿ ಮಾತು ಹೇಳಿ ಮಾತು ಮುಗಿಸಿದರು.
(ಇನ್ಫೋ ವಾರ್ತೆ)
ಪೂರಕ
ಓದಿಗೆ-
ಕನ್ನಡ
ಅಭಿವೃದ್ಧಿಪ್ರಾಧಿಕಾರದ
ಅಧ್ಯಕ್ಷಗಿರಿಗೆ
ಮುದುಕರ್ಯಾತಕೊ-ಚಿಮೂ
ಮುಖಪುಟ / ವಾರ್ತೆಗಳು