ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಗಲಕ್ಷ್ಮಿ ಅಧ್ಯಕ್ಷತೆಯಲ್ಲಿ ನಾಟಕ ರಚನಾ ಕಮ್ಮಟದ ಸಮಾರೋಪ

By Staff
|
Google Oneindia Kannada News

ನಾಗಲಕ್ಷ್ಮಿ ಅಧ್ಯಕ್ಷತೆಯಲ್ಲಿ ನಾಟಕ ರಚನಾ ಕಮ್ಮಟದ ಸಮಾರೋಪ
ಹತ್ತು ದಿನಗಳ ನಾಟಕ ರಚನಾ ಕಮ್ಮಟಕ್ಕೆ ಭಾನುವಾರ ತೆರೆ

ಮೈಸೂರಿನ ಕನ್ನಡ ಲೇಖಕಿಯರ ಸಂಘ ಟ್ರಸ್ಟ್‌ (ರಿ. ) ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ಆಶ್ರಯದಲ್ಲಿನ ರಾಜ್ಯಮಟ್ಟದ ಹತ್ತು ದಿನಗಳ ನಾಟಕ ರಚನಾ ಕಾರ್ಯಾಗಾರದ ಸಮಾರೋಪ ಸಮಾರಂಭ ಸೆ.21ರ ಭಾನುವಾರ ನಡೆಯಲಿದೆ.

ರೋಟರಿ ಪಶ್ಚಿಮ ಸಂಸ್ಥೆ ಸಭಾಂಗಣ, ಕುವೆಂಪು ನಗರ, ಮೈಸೂರು- ಇಲ್ಲಿ ಭಾನುವಾರ ಸಂಜೆ 4 ಗಂಟೆಗೆ ನಾಟಕ ರಚನಾ ಕಮ್ಮಟದ ಸಮಾರೋಪ ಸಮಾರಂಭ ನಡೆಯಲಿದ್ದು , ಹಿರಿಯ ಕಲಾವಿದೆ ಶ್ರೀಮತಿ ನಾಗಲಕ್ಷ್ಮಿ ಹರಿಹರೇಶ್ವರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.

Nagalakshmi Harihareshwaraವಿಶ್ರಾಂತ ಕನ್ನಡ ಪ್ರಾಧ್ಯಾಪಕ ಪ್ರೊ. ಎಚ್‌. ಚನ್ನಯ್ಯ ಹಾಗೂ ರೋಟರಿ ಪಶ್ಚಿಮ ಸಂಸ್ಥೆಯ ಅಧ್ಯಕ್ಷ ಎಂ.ಜಿ.ಬೈದೂರ್‌ ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಭಾಗವಹಿಸುವರು.

ಕಾರ್ಯಾಗಾರದ ನಿರ್ದೇಶಕರು ಹಾಗೂ ಮೈಸೂರು ಲಲಿತ ಕಲಾ ಕಾಲೇಜಿನ ನಾಟಕ ವಿಭಾಗದ ಮುಖ್ಯಸ್ಥರಾದ ಡಾ. ಮೀರಾ ಮೂರ್ತಿ ಕಾರ್ಯಕ್ರಮದಲ್ಲಿ ಭಾಗವಹಿಸುವರು.

ಕಾರ್ಯಕ್ರಮದ ಬಗೆಗಿನ ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ- ದೂರವಾಣಿ : (0821) 2 540 872; (0821) 2 511 786

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X