ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಸ್ಪಂದನ’ ರಂಗತಂಡದಿಂದ ಎಚ್ಚೆಸ್ವಿ ‘ಮಂತ್ರ’

By Staff
|
Google Oneindia Kannada News

‘ಸ್ಪಂದನ’ ರಂಗತಂಡದಿಂದ ಎಚ್ಚೆಸ್ವಿ ‘ಮಂತ್ರ’
ಸೆಪ್ಟಂಬರ್‌ 24ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ನಾಟಕ ಪ್ರದರ್ಶನ

ರಂಗ ಚಟುವಟಿಕೆಯಲ್ಲಿ ಅತ್ಯಂತ ಸಕ್ರಿಯವಾಗಿರುವ ‘ಸ್ಪಂದನ’ ರಂಗತಂಡ ಸೆಪ್ಟಂಬರ್‌ 24ರಂದು ‘ಮಂತ್ರ’ ನಾಟಕವನ್ನು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದರ್ಶಿಸಲಿದೆ.

ನಾಟಕಕಾರರಾಗಿಯೂ ಪಳಗಿರುವ ‘ಮೂವತ್ತು ಮಳೆಗಾಲ’ದ ಹಿರಿಯ ಕವಿ ಡಾ.ಎಚ್‌.ಎಸ್‌.ವೆಂಕಟೇಶಮೂರ್ತಿ ‘ಮಂತ್ರ’ ನಾಟಕವನ್ನು ರಚಿಸಿದ್ದಾರೆ. ಖ್ಯಾತ ರಂಗ ಕಲಾವಿದೆ ಬಿ.ಜಯಶ್ರೀ ‘ಮಂತ್ರ’ ನಾಟಕದ ನಿರ್ದೇಶಕರು.

ಸೆಪ್ಟಂಬರ್‌ 22 ರಿಂದಲೇ ನಾಟಕದ ಡೋನರ್‌ ಪಾಸ್‌ಗಳು ರವೀಂದ್ರ ಕಲಾಕ್ಷೇತ್ರದ ಮೊಗಸಾಲೆಯಲ್ಲಿ ಲಭ್ಯ. ಹವ್ಯಾಸಿ ರಂಗತಂಡವಾದ ‘ಸ್ಪಂದನ’ ಉತ್ತಮ ನಾಟಕಗಳ ಪ್ರದರ್ಶನಕ್ಕೆ ಹೆಸರುವಾಸಿ. ಈ ಮುನ್ನಿನಂತೆ ‘ಮಂತ್ರ’ ನಾಟಕ ಪ್ರಯೋಗಕ್ಕೂ ನಾಟಕಪ್ರೇಮಿಗಳ ಬೆಂಬಲವನ್ನು ಸ್ಪಂದನದ ಗೆಳೆಯರು ನಿರೀಕ್ಷಿಸಿದ್ದಾರೆ.

ನೆನಪಿಡಿ-

ನಾಟಕ : ಮಂತ್ರ
ತಂಡ : ಸ್ಪಂದನ
ಸ್ಥಳ : ರವೀಂದ್ರ ಕಲಾಕ್ಷೇತ್ರ
ದಿನಾಂಕ : ಸೆಪ್ಟಂಬರ್‌ 24, 2003. ಸಂಜೆ 7 ಗಂಟೆಗೆ

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X