ಬರ ನಿಭಾವಣೆ : ಕೇಂದ್ರದ ವಿಳಂಬ ನೀತಿಗೆ ರಾಜ್ಯದ ದಬಾವಣೆ
ಬರ
ನಿಭಾವಣೆ
:
ಕೇಂದ್ರದ
ವಿಳಂಬ
ನೀತಿಗೆ
ರಾಜ್ಯದ
ದಬಾವಣೆ
ತಕ್ಷಣವೇ
3
ಲಕ್ಷ
ಮೆಟ್ರಿಕ್
ಟನ್
ಆಹಾರ
ಧಾನ್ಯ
ಬಿಡುಗಡೆಗೆ
ಆಗ್ರಹ
ಗುರುವಾರ (ಸೆ.18) ನಡೆದ ಸಚಿವ ಸಂಪುಟದ ಸಭೆಯಲ್ಲಿ ಕೇಂದ್ರ ಸರ್ಕಾರ ರಾಜ್ಯದ ಬರ ಪರಿಸ್ಥಿತಿ ನಿರ್ವಹಣೆಗೆ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ ಎಂಬ ಮಾತು ಕೇಳಿಬಂತು.
ದೇಶದಲ್ಲಿ ಮಳೆ ಇಲ್ಲದೆ ತೀರಾ ಬರ ಎದುರಿಸುತ್ತಿರುವ ಏಕೈಕ ರಾಜ್ಯ ಕರ್ನಾಟಕ. 1,881 ಕೋಟಿ ರುಪಾಯಿ ಹಣದ ಹಾಗೂ 9.90 ಲಕ್ಷ ಮೆಟ್ರಿಕ್ ಟನ್ ಧಾನ್ಯದ ನೆರವು ಕೊಡುವಂತೆ ರಾಜ್ಯ ಮಾಡಿಕೊಂಡಿರುವ ಮನವಿಗೆ ಕೇಂದ್ರ ಸರ್ಕಾರ ಇನ್ನೂ ಸ್ಪಂದಿಸಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಪ್ರೊ. ಬಿ.ಕೆ.ಚಂದ್ರಶೇಖರ್ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಎಂ.ವೈ.ಘೋರ್ಪಡೆ ಸುದ್ದಿಗಾರರಿಗೆ ತಿಳಿಸಿದರು.
ಆಗಸ್ಟ್ 17ರಿಂದ 20ನೇ ತಾರೀಕಿನ ತನಕ ಕೇಂದ್ರ ಸರ್ಕಾರದ ಅಧ್ಯಯನ ತಂಡ ರಾಜ್ಯದ ಬರ ಪರಿಸ್ಥಿತಿಯ ಅಧ್ಯಯನ ನಡೆಸಿ ಹೋಯಿತು. ತಂಡ ತನ್ನ ವರದಿಯನ್ನೂ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದೆ. ಆದರೆ, ಉಪ ಮುಖ್ಯಮಂತ್ರಿ ಎಲ್.ಕೆ.ಅಡ್ವಾಣಿ ನೇತೃತ್ವದ ಬರ ನಿರ್ವಹಣೆ ಕುರಿತ ಉನ್ನತ ಮಟ್ಟದ ಸಮಿತಿ ಇನ್ನೂ ಸಭೆ ಸೇರಿಲ್ಲ. ಸೆಪ್ಟೆಂಬರ್ 10ರಂದು ರಾಜ್ಯಕ್ಕೆ ಅಡ್ವಾಣಿ ಅವರು ಬಂದಿದ್ದಾಗ, ಅವರಿಗೆ ರಾಜ್ಯ ಸರ್ಕಾರ ಈಗಾಗಲೇ ಸಲ್ಲಿಸಿರುವ ಮನವಿ ಪತ್ರದ ಪ್ರತಿಯನ್ನು ಮುಖ್ಯಮಂತ್ರಿ ಕೃಷ್ಣ ಮತ್ತೆ ಕೊಟ್ಟರು. ಹಾಗಿದ್ದೂ ಅಡ್ವಾಣಿ ಇನ್ನೂ ವಿಳಂಬ ನೀತಿ ಅನುಸರಿಸುತ್ತಿರುವುದು ಸರಿಯಲ್ಲ ಎಂದು ಸಚಿವರು ಹೇಳಿದರು.
ಆಹಾರ ಧಾನ್ಯಗಳನ್ನು ಕ್ಷಿಪ್ರವಾಗಿ ಪೂರೈಸಲು 30 ಹೆಚ್ಚುವರಿ ರೈಲುಗಳನ್ನು ಓಡಿಸುವಂತೆ ರೈಲ್ವೆ ಇಲಾಖೆಗೆ ಸಲಹೆ ಕೊಡಬೇಕು ಹಾಗೂ 3 ಲಕ್ಷ ಮೆಟ್ರಿಕ್ ಟನ್ ಆಹಾರವನ್ನು ತಕ್ಷಣವೇ ಬಿಡುಗಡೆ ಮಾಡಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಲು ಸಚಿವ ಸಂಪುಟ ಸಭೆ ತೀರ್ಮಾನಿಸಿತು.
(ಪಿಟಿಐ)
ಮುಖಪುಟ / ವಾರ್ತೆಗಳು