ವೀರಪ್ಪನ್ ಕಾರ್ಯಾಚರಣೆಯಿಂದ ಗಡಿಭದ್ರತಾಪಡೆ ಬಲು ದೂರ
ವೀರಪ್ಪನ್
ಕಾರ್ಯಾಚರಣೆಯಿಂದ
ಗಡಿಭದ್ರತಾಪಡೆ
ಬಲು
ದೂರ
ಕಾರ್ಯಾಚರಣೆಯಲ್ಲಿ
ಎಲ್ಲಿಯೋ
ತಪ್ಪು
ನಡೆಯುತ್ತಿದೆ-
ಬಿಎಸ್ಎಫ್
ಮಹಾ
ನಿರ್ದೇಶಕ
ವೀರಪ್ಪನ್ನನ್ನು ಹಿಡಿಯುವುದಕ್ಕೋಸ್ಕರ ಘಟಕಗಳನ್ನು ಕಳುಹಿಸುವ ಪರಿಸ್ಥಿತಿಯಲ್ಲಿ ಬಿಎಸ್ಎಫ್ ಇಲ್ಲ. ಜಮ್ಮು ಕಾಶ್ಮೀರದಲ್ಲಿನ ಕಾರ್ಯಾಚರಣೆಯಲ್ಲಿ ಬಿಎಸ್ಎಫ್ ತೊಡಗಿಕೊಂಡಿದೆ. ಸಾಕಷ್ಟು ಸಾಮರ್ಥ್ಯವಿಲ್ಲದಿರುವಾಗ ವೀರಪ್ಪನ್ ಶಿಕಾರಿಯನ್ನು ಅರೆ ಮನಸ್ಸಿನಿಂದ ಬಿಎಸ್ಎಫ್ ಒಪ್ಪಿಕೊಳ್ಳುವುದಿಲ್ಲ ಎಂದು ಗುರುವಾರ(ಸೆ. 18) ಸುದ್ದಿಗೋಷ್ಠಿಯಲ್ಲಿ ಅಜಯ್ ರಾಜ್ ಶರ್ಮಾ ಹೇಳಿದರು.
ಕರ್ನಾಟಕ ಹಾಗೂ ತಮಿಳುನಾಡಿಗೆ ತೊಂದರೆ ನೀಡುತ್ತಿರುವ ವೀರಪ್ಪನ್ನ ಬಂಧನದಲ್ಲಾಗುತ್ತಿರುವ ವಿಪರೀತ ವಿಳಂಬದ ಬಗ್ಗೆ ಮಾತನಾಡಿದ ಶರ್ಮಾ- ನಿರ್ದಿಷ್ಟ ಅವಧಿಯಲ್ಲಿ ಸದೆ ಬಡಿಯಲಿಕ್ಕಾಗದೇ ಇರುವ ದುಷ್ಟ ಗುಂಪು ಇದೆ ಎಂಬುದನ್ನು ತಾವು ನಂಬುವುದಿಲ್ಲ ಎಂದರು. ಚಂಬಲ್ ಕಣಿವೆಯಲ್ಲಿದ್ದ ಡಕಾಯಿತರ ಗುಂಪನ್ನು ಈ ಹಿಂದೆ 10-15 ವರ್ಷಗಳ ಕಾಲ ಕಾರ್ಯಾಚರಣೆ ನಡೆಸಿ ಬಿಎಸ್ಎಫ್ ಸದೆ ಬಡಿದಿರುವುದನ್ನು ಉದಾಹರಿಸಿದ ಶರ್ಮಾ- ಇಚ್ಛಾಶಕ್ತಿಯಿದ್ದರೆ ಎಲ್ಲವೂ ಸಾಧ್ಯ ಎಂದರು.
ವೀರಪ್ಪನ್ ಕಾರ್ಯಾಚರಣೆ ಪ್ರಕ್ರಿಯೆಯಲ್ಲಿ ಎಲ್ಲಿಯೋ ತಪ್ಪು ನಡೆಯುತ್ತಿದೆ. ಆ ಬಗ್ಗೆ ಗಮನ ಹರಿಸಬೇಕಾಗಿದೆ ಎಂದು ಶರ್ಮ ಸಲಹೆ ಮಾಡಿದರು.
(ಪಿಟಿಐ)
ಮುಖಪುಟ / ವೀರಪ್ಪನ್