ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಅಮೃತಾನಂದಮಯಿ ಮಠದಿಂದ ಬಡವರಿಗೆ ಕಾನೂನು ನೆರವು
ಅಮೃತಾನಂದಮಯಿ
ಮಠದಿಂದ
ಬಡವರಿಗೆ
ಕಾನೂನು
ನೆರವು
ಸೆಪ್ಟೆಂಬರ್
23ರಂದು
ಕಾನೂನು
ನೆರವು
ಯೋಜನೆಗೆ
ಚಾಲನೆ
ರಾಷ್ಟ್ರ ಮಟ್ಟದ ಈ ಯೋಜನೆಯಿಂದಾಗಿ ದೇಶದ ಬಡವರಿಗೆ ಅನುಕೂಲವಾಗಲಿದೆ. ದೇಶಾದ್ಯಂತ ಒಟ್ಟು 1008 ವಕೀಲರು ಈ ಉಚಿತ ಕಾನೂನು ಸೇವೆ ಯೋಜನೆಯಲ್ಲಿ ಕೈ ಜೋಡಿಸುವರು. ಈ ವಕೀಲರ ಗುಂಪಿಗೆ ಅಮೃತಾ ಕೃಪಾ ನೀತಿ ಪ್ರತಿಷ್ಠಾನ ಎಂದು ಹೆಸರಿಡಲಾಗಿದೆ.
ಮಾನವ ಹಕ್ಕುಗಳಿಂದ ವಂಚಿತರಾದವರಿಗೆ, ಬುಡಕಟ್ಟು ಕಾನೂನು ಉಲ್ಲಂಘನೆಯಿಂದ ಸಂತ್ರಸ್ತರಾದವರಿಗೆ, ಪರಿಸರನಾಶದಿಂದ ಆಗುವ ಹಾನಿ ನಿವಾರಣೆಗೆ, ಅಂಗವೈಕಲ್ಯ ಹಾಗೂ ಬುದ್ಧಿ ಭ್ರಮಣೆ ಹೊಂದಿದವರಿಗೂ ಈ ವೇದಿಕೆ ಬೆಂಬಲ-ನೆರವು ನೀಡಲಿದೆ.
ಅಮೃತಾ ಕೃಪಾ ನೀತಿ ಪ್ರತಿಷ್ಠಾನವು ಸೆಪ್ಟೆಂಬರ್ 23ರಂದು ಕೊಚ್ಚಿಯ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಉದ್ಘಾಟನೆಗೊಳ್ಳಲಿದೆ. ಅಂದು ನಡೆಯುವ ‘ಯುವ ಅಮೃತ ವರ್ಷಂ ಉತ್ಸವ’ದ ಸಂದರ್ಭದಲ್ಲಿ ಈ ಯೋಜನೆಗೆ ಚಾಲನೆ ದೊರೆಯಲಿದ್ದು , ಉಪರಾಷ್ಟ್ರಪತಿ ಭೈರೋನ್ ಸಿಂಗ್ ಶೇಖಾವತ್ ಸಮಾರಂಭದಲ್ಲಿ ಭಾಗವಹಿಸುವರು.
(ಏಜೆನ್ಸೀಸ್)
ಮುಖಪುಟ / ವಾರ್ತೆಗಳು
Comments
Story first published: Saturday, May 24, 2003, 5:30 [IST]