ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಶಸ್ವಿನಿ ಆರೋಗ್ಯವಿಮೆ ಯೋಜನೆ ಇನ್ನು ಶಾಲಾ ಶಿಕ್ಷಕರಿಗೂ ಲಭ್ಯ

By Staff
|
Google Oneindia Kannada News

ಯಶಸ್ವಿನಿ ಆರೋಗ್ಯವಿಮೆ ಯೋಜನೆ ಇನ್ನು ಶಾಲಾ ಶಿಕ್ಷಕರಿಗೂ ಲಭ್ಯ
ನಾರಾಯಣ ಹೃದಯಾಲಯದ ಡಾ.ದೇವೀಶೆಟ್ಟಿಗೆ ವಿಶ್ವೇಶ್ವರಯ್ಯ ಪ್ರಶಸ್ತಿ ಪ್ರದಾನ

ಬೆಂಗಳೂರು : ರೈತರಿಗಾಗಿ ಸರ್ಕಾರ ಒದಗಿಸುತ್ತಿರುವ ಯಶಸ್ವಿನಿ ಆರೋಗ್ಯ ವಿಮಾ ಯೋಜನೆಯನ್ನು ಶಾಲಾ ಶಿಕ್ಷಕರು ಹಾಗೂ ಅವರ ಕುಟುಂಬದವರಿಗೂ ಕರ್ನಾಟಕ ಸರ್ಕಾರ ವಿಸ್ತರಿಸಿದೆ.

ಕರ್ನಾಟಕ ವಾಣಿಜ್ಯ ಮತ್ತು ಉದ್ದಿಮೆಗಳ ಒಕ್ಕೂಟ (ಎಫ್‌ಕೆಸಿಸಿಐ) ಕೊಡುವ ಸರ್‌ ಎಂ.ವಿಶ್ವೇಶ್ವರಯ್ಯ ಪ್ರಶಸ್ತಿಯನ್ನು ನಾರಾಯಣ ಹೃದಯಾಲಯದ ಅಧ್ಯಕ್ಷ ಡಾ.ದೇವೀಶೆಟ್ಟಿ ಅವರಿಗೆ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಸೋಮವಾರ (ಸೆ.15) ಪ್ರದಾ ನ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿ, ಶಾಲಾ ಶಿಕ್ಷಕರಿಗೂ ಯಶಸ್ವಿನಿ ಯೋಜನೆಯನ್ನು ವಿಸ್ತರಿಸಿರುವುದಾಗಿ ಹೇಳಿದರು.

ಡಾ.ದೇವೀಶೆಟ್ಟಿ ಅವರು ಈ ಪ್ರಸ್ತಾವನೆಯನ್ನು ಕೃಷ್ಣ ಅವರ ಮುಂದೆ ಇಟ್ಟಿದ್ದರು. ರೈತರಿಗೆ ಯಶಸ್ವಿನಿ ಯೋಜನೆಯಿಂದ ಸಾಕಷ್ಟು ಉಪಯೋಗವಾಗುತ್ತಿದೆ. ಲಕ್ಷಾಂತರ ರುಪಾಯಿ ಖರ್ಚಾಗುವ ಹೃದ್ರೋಗ ಶಸ್ತ್ರಚಿಕಿತ್ಸೆ ಉಚಿತವಾಗಿ ಸಿಗುವಂತಾಗಿದೆ. ಇದಕ್ಕೆ ರೈತರಿಂದ ಒಳ್ಳೆಯ ಪ್ರತಿಕ್ರಿಯೆ ಬಂದಿದೆ ಎಂದು ಕೃಷ್ಣ ತಿಳಿಸಿದರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X