ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಯಶಸ್ವಿನಿ ಆರೋಗ್ಯವಿಮೆ ಯೋಜನೆ ಇನ್ನು ಶಾಲಾ ಶಿಕ್ಷಕರಿಗೂ ಲಭ್ಯ
ಯಶಸ್ವಿನಿ
ಆರೋಗ್ಯವಿಮೆ
ಯೋಜನೆ
ಇನ್ನು
ಶಾಲಾ
ಶಿಕ್ಷಕರಿಗೂ
ಲಭ್ಯ
ನಾರಾಯಣ
ಹೃದಯಾಲಯದ
ಡಾ.ದೇವೀಶೆಟ್ಟಿಗೆ
ವಿಶ್ವೇಶ್ವರಯ್ಯ
ಪ್ರಶಸ್ತಿ
ಪ್ರದಾನ
ಕರ್ನಾಟಕ ವಾಣಿಜ್ಯ ಮತ್ತು ಉದ್ದಿಮೆಗಳ ಒಕ್ಕೂಟ (ಎಫ್ಕೆಸಿಸಿಐ) ಕೊಡುವ ಸರ್ ಎಂ.ವಿಶ್ವೇಶ್ವರಯ್ಯ ಪ್ರಶಸ್ತಿಯನ್ನು ನಾರಾಯಣ ಹೃದಯಾಲಯದ ಅಧ್ಯಕ್ಷ ಡಾ.ದೇವೀಶೆಟ್ಟಿ ಅವರಿಗೆ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಸೋಮವಾರ (ಸೆ.15) ಪ್ರದಾ ನ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿ, ಶಾಲಾ ಶಿಕ್ಷಕರಿಗೂ ಯಶಸ್ವಿನಿ ಯೋಜನೆಯನ್ನು ವಿಸ್ತರಿಸಿರುವುದಾಗಿ ಹೇಳಿದರು.
ಡಾ.ದೇವೀಶೆಟ್ಟಿ ಅವರು ಈ ಪ್ರಸ್ತಾವನೆಯನ್ನು ಕೃಷ್ಣ ಅವರ ಮುಂದೆ ಇಟ್ಟಿದ್ದರು. ರೈತರಿಗೆ ಯಶಸ್ವಿನಿ ಯೋಜನೆಯಿಂದ ಸಾಕಷ್ಟು ಉಪಯೋಗವಾಗುತ್ತಿದೆ. ಲಕ್ಷಾಂತರ ರುಪಾಯಿ ಖರ್ಚಾಗುವ ಹೃದ್ರೋಗ ಶಸ್ತ್ರಚಿಕಿತ್ಸೆ ಉಚಿತವಾಗಿ ಸಿಗುವಂತಾಗಿದೆ. ಇದಕ್ಕೆ ರೈತರಿಂದ ಒಳ್ಳೆಯ ಪ್ರತಿಕ್ರಿಯೆ ಬಂದಿದೆ ಎಂದು ಕೃಷ್ಣ ತಿಳಿಸಿದರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು
Comments
Story first published: Saturday, May 24, 2003, 5:30 [IST]