ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾರವಾರದಲ್ಲಿ ಜಯಂತ ಕಾಯ್ಕಿಣಿಯಿಂದ ಪ್ರತಿಭೋತ್ಸವಕ್ಕೆ ಚಾಲನೆ

By Staff
|
Google Oneindia Kannada News

ಕಾರವಾರದಲ್ಲಿ ಜಯಂತ ಕಾಯ್ಕಿಣಿಯಿಂದ ಪ್ರತಿಭೋತ್ಸವಕ್ಕೆ ಚಾಲನೆ
ಬಹುಮಾನಗಳಿಗಾಗಿಯೇ ಸ್ಪರ್ಧೆ ನಡೆಸುವ ಬಗ್ಗೆ ಕಾಯ್ಕಿಣಿ ವಿಷಾದ

ಕಾರವಾರ : ಎತ್ತ ತಿರುಗಿ ನೋಡಿದರೂ ಸ್ಪರ್ಧೆಗಳು-ಸ್ಪರ್ಧೆಗಳು ಮತ್ತು ಸ್ಪರ್ಧೆಗಳು ! ಅದೂ ಸಾಲದೆಂಬಂತೆ ಸ್ಪರ್ಧೆಯಾಳಗೆ ಒಳಸ್ಪರ್ಧೆಗಳು. ಬದುಕೇ ಸ್ಪರ್ಧೆಗಳಲ್ಲಿ ಮುಳುಗಿ ಹೋಗುತ್ತಿರುವ ಬಗ್ಗೆ ಕತೆಗಾರ ಜಯಂತ ಕಾಯ್ಕಿಣಿ ಬೇಸರ ವ್ಯಕ್ತಪಡಿಸಿದ್ದಾರೆ.

ವಾರದಲ್ಲಿ ಭಾನುವಾರ (ಸೆ.14) ಆರಂಭವಾದ ಮೂರು ದಿನಗಳ ಜಿಲ್ಲಾ ಮಟ್ಟದ ಸ್ಪರ್ಧೆಗಳ ಕಾರ್ಯಕ್ರಮ ‘ಕಲಾ ಪ್ರತಿಭೋತ್ಸವ-2003’ನ್ನು ಉದ್ಘಾಟಿಸಿ ಕಾಯ್ಕಿಣಿ ಮಾತನಾಡುತ್ತಿದ್ದರು. ಸ್ಪರ್ಧಾತ್ಮಕ ಜಗತ್ತಿಗೆ ಹೆಚ್ಚು ಪ್ರೋತ್ಸಾಹ ಕೊಟ್ಟಂತೆಲ್ಲಾ ನೈಜತೆ ಕಳೆದುಹೋಗುತ್ತದೆ. ಆದ್ದರಿಂದ ಬಹುಮಾನಗಳಿಗಾಗಿಯೇ ಸ್ಪರ್ಧೆಗಳು ಬೇಡ ಎಂದು ಕಾಯ್ಕಿಣಿ ಸಲಹೆ ಮಾಡಿದರು.

ಈಚಿನ ದಿನಗಳಲ್ಲಿ ಪಾಲಕರು ಮಕ್ಕಳ ಮೇಲೆ ಒತ್ತಡ ಹೇರಿ ಬಹುಮಾನ ಗಳಿಸುವಂತೆ ಮಾಡುತ್ತಾರೆ. ಸ್ಪರ್ಧೆಯ ಬಹುಮಾನಗಳನ್ನು ಗೆಲ್ಲುವುದಷ್ಟೇ ಬದುಕಿನ ಧ್ಯೇಯವಾಗಬಾರದು. ನೈಜ ಪ್ರತಿಭೆಯನ್ನು ಗುರುತಿಸುವ ಕೆಲಸವಾಗಬೇಕು ಎಂದು ಕಾಯ್ಕಿಣಿ ಅಭಿಪ್ರಾಯಪಟ್ಟರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X