ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮನೆ ಗಲೀಜಾಗಿಟ್ಟುಕೊಂಡಿರುವುದಕ್ಕೆ ಅಮಿತಾಬ್ ಬಚ್ಚನ್ಗೆ ದಂಡ
ಮನೆ
ಗಲೀಜಾಗಿಟ್ಟುಕೊಂಡಿರುವುದಕ್ಕೆ
ಅಮಿತಾಬ್
ಬಚ್ಚನ್ಗೆ
ದಂಡ
ಕಾನೂನು
ಸಚಿವ
ಅರುಣ್
ಜೈಟ್ಲಿ
ಮನೆಯಲ್ಲೂ
ಸೊಳ್ಳೆಗಳು
ಹಾರಾಡುತ್ತಿವೆಯಂತೆ
!
ಡೆಂಗ್ಯೂ ಮತ್ತು ಮಲೇರಿಯಾ ರೋಗಗಳನ್ನು ನಿಯಂತ್ರಿಸಲು ದೆಹಲಿ ಮಹಾನಗರ ಪಾಲಿಕೆ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಮನೆ ಹಾಗೂ ಆವರಣಗಳನ್ನು ಗಲೀಜಾಗಿಟ್ಟುಕೊಂಡವರಿಗೆ ನೋಟೀಸು ಕಳುಹಿಸುತ್ತಿದೆ. ಈ ವರ್ಷ ಈವರೆಗೆ ಪಾಲಿಕೆ 15,541 ಮಂದಿಗೆ ನೋಟೀಲು ಕೊಟ್ಟಿದೆ. ಮೊನ್ನೆ ‘ಮನೆಯನ್ನು ಗಲೀಜಾಗಿಟ್ಟುಕೊಂಡಿರುವುದಕ್ಕೆ ದಂಡ ಕಟ್ಟಿ’ ಎಂದು ಪಾಲಿಕೆಯ ಉಪ ನಿರ್ದೇಶಕ ಬಿ.ಕೆ.ಹಜಾರಿಕ, ಅಮಿತಾಬ್ ಬಚ್ಚನ್ ಮತ್ತು ಕಾನೂನು ಸಚಿವ ಅರುಣ್ ಜೈಟ್ಲಿ ಅವರಿಗೆ ನೋಟೀಸು ಕಳಿಸಿದರು.
ಪ್ರತಿವರ್ಷ ದೆಹಲಿಯಲ್ಲಿ ಲಕ್ಷಾಂತರ ಜನ ಡೆಂಗ್ಯೂ ಹಾಗೂ ಮಲೇರಿಯಾ ರೋಗಕ್ಕೆ ತುತ್ತಾಗುತ್ತಿರುವುದರಿಂದ ಅಶುಚಿತ್ವಕ್ಕೆ ದಂಡ ಕಟ್ಟಿಸಿಕೊಳ್ಳುವುದು ಅನಿವಾರ್ಯವಾಗಿದೆ ಎನ್ನುತ್ತದೆ ಪಾಲಿಕೆ. ಅಮಿತಾಬ್ ಹಾಗೂ ಜೈಟ್ಲಿ ಅವರಿಗೆ ವಿಧಿಸಿರುವ ದಂಡ ಎಷ್ಟು ಎಂಬುದು ಗೊತ್ತಾಗಿಲ್ಲ.
(ಏಜೆನ್ಸೀಸ್)
ಮುಖಪುಟ / ವಾರ್ತೆಗಳು
Comments
Story first published: Saturday, May 24, 2003, 5:30 [IST]