ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾನ್ಸಾಂಟೊ ಹಠಾವೊ, ಉದ್ರಿಕ್ತ ರೈತರ ಗುಂಪಿಂದ ಕಲ್ಲು ತೂರಾಟ

By Staff
|
Google Oneindia Kannada News

ಮಾನ್ಸಾಂಟೊ ಹಠಾವೊ, ಉದ್ರಿಕ್ತ ರೈತರ ಗುಂಪಿಂದ ಕಲ್ಲು ತೂರಾಟ
ಭಾರತೀಯ ವಿಜ್ಞಾನ ಸಂಸ್ಥೆ ಆವರಣದಲ್ಲಿನ ಕಚೇರಿ ಮೇಲೆ ದಾಳಿ

ಬೆಂಗಳೂರು : ಭಾರತೀಯ ವಿಜ್ಞಾನ ಸಂಸ್ಥೆಯ ಆವರಣದಲ್ಲಿರುವ ಕಚೇರಿಯಾಂದನ್ನು, ಬಹುರಾಷ್ಟ್ರೀಯ ಕಂಪನಿ ಮಾನ್ಸಾಂಟೊದ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರವೆಂದು ಭಾವಿಸಿದ ರೈತರ ಗುಂಪೊಂದು ಶುಕ್ರವಾರ ದಾಳಿ ನಡೆಸಿತು.

ಸುಮಾರು 20 ಮಂದಿಯಿದ್ದ ರೈತರ ಗುಂಪು ಕಚೇರಿಯ ಮೇಲೆ ಸೆ.11ರ ಶುಕ್ರವಾರ ಕಲ್ಲು ತೂರಾಟ ನಡೆಸಿತು. ಈ ಕಲ್ಲು ತೂರಾಟದಲ್ಲಿ ಕಿಟಕಿಗಳು ಜಖಂಗೊಂಡಿವೆ.

ಮಾನ್ಸಾಂಟೊ ಕಂಪನಿ ದೇಶ ಬಿಟ್ಟು ತೊಲಗಬೇಕೆಂದು ಒತ್ತಾಯಿಸಿದ ಉದ್ರಿಕ್ತರ ಗುಂಪು, ಕಂಪನಿಯ ವಿರುದ್ಧ ಘೋಷಣೆಗಳನ್ನು ಕೂಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ದಾಂಧಲೆಯಲ್ಲಿ ತೊಡಗಿದ್ದ ರೈತರನ್ನು ಪೊಲೀಸರು ಬಂಧಿಸಿದ್ದಾರೆ.

ಕರ್ನಾಟಕ ರಾಜ್ಯ ರೈತ ಸಂಘ ಎಂಬ ಬ್ಯಾನರ್‌ ಹೊಂದಿದ್ದ ಗುಂಪು ದಾಳಿ ನಡೆಸಿತು. ಈ ಗುಂಪು ಭಾರತೀಯ ವಿಜ್ಞಾನ ಸಂಸ್ಥೆಯ ಆವರಣದಲ್ಲಿನ ಕಚೇರಿಯನ್ನು ಮಾನ್ಸಾಂಟೊ ಕಂಪನಿಯ ಕಟ್ಟಡವೆಂದು ಭಾವಿಸಿ ದಾಳಿ ನಡೆಸಿದೆ. ಆದರೆ, ಕಳೆದ ಜುಲೈ ತಿಂಗಳಲ್ಲಿಯೇ ಮಾನ್ಸಾಂಟೊ ತನ್ನ ನೆಲೆ ಬದಲಿಸಿದೆ ಎಂದು ಪೊಲೀಸ್‌ ಉಪ ಆಯುಕ್ತ ಪರಶಿವಮೂರ್ತಿ ತಿಳಿಸಿದ್ದಾರೆ.

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X