ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೂಡಬಿದಿರೆ ದೇವಳದಲ್ಲಿ ಚಿನ್ನ ಕದ್ದ ಆರೋಪಿ ಸಂತಾನಂ ಬಂಧನ

By Staff
|
Google Oneindia Kannada News

ಮೂಡಬಿದಿರೆ ದೇವಳದಲ್ಲಿ ಚಿನ್ನ ಕದ್ದ ಆರೋಪಿ ಸಂತಾನಂ ಬಂಧನ
ಸಂತಾನಂ ಹಾಗೂ ಮೂವರು ಸಹಚರರಿಂದ 7 ಲಕ್ಷ ರೂ. ಮೌಲ್ಯದ ಬಂಗಾರ ವಶ

ಮಂಗಳೂರು: ಇತ್ತೀಚೆಗೆ ಮೂಡಬಿದಿರೆಯ ಜೈನ ದೇವಳದಲ್ಲಿ ಒಡವೆ ಕಳ್ಳತನ ಮಾಡಿದ ಆರೋಪ ಹೊತ್ತಿರುವ ಅಂತರರಾಜ್ಯ ಆರೋಪಿಯನ್ನು ಆತನ ಮೂವರು ಸಹಚರರ ಸಹಿತ ಕೊಯಮತ್ತೂರಿನ ಕಾರಡಿಯಲ್ಲಿ ಬಂಧಿಸಲಾಗಿದೆ.

ತಮಿಳುನಾಡು ಪೊಲೀಸರ ನೆರವಿನೊಂದಿಗೆ ಬಂಧಿಸಲಾದ ಆರೋಪಿಗಳಿಂದ ಸುಮಾರು 7 ಲಕ್ಷ ರೂ. ಮೌಲ್ಯದ ಬಂಗಾರವನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯನ್ನು ಸಂತಾನಂ ಅಲಿಯಾಸ್‌ ಆಂಟೋನಿ ಎಂದು ಗುರುತಿಸಲಾಗಿದೆ. ಆತ ಸುಮಾರು 20ಕ್ಕೂ ಹೆಚ್ಚು ಕಳ್ಳತನದ ಪ್ರಕರಣಗಳಲ್ಲಿ ಆರೋಪಿಯಾಗಿದ್ದು, ಕೇಸುಗಳನ್ನು ಎದರಿಸುತ್ತಿದ್ದಾನೆ ಎಂದು ಮಂಗಳೂರಿನ ಪೊಲೀಸ್‌ ಸೂಪರಿಂಟೆಂಡೆಂಟ್‌ ಸೀಮಂತ್‌ಕುಮಾರ್‌ ಬುಧವಾರ (ಸೆ. 10) ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ವಿಚಾರಣೆ ವೇಳೆ ಸಂತಾನಂ ನೀಡಿರುವ ಮಾಹಿತಿಯ ಮೇರೆಗೆ ಆತನ ಇತರ ಸಹಚರರನ್ನೂ ಬಂಧಿಸಲಾಗಿದೆ. ಸಂತಾನಂ ಹಾಗೂ ಆತನ ಸಹಚರರು ಕಳೆದ ಜುಲೈ 7ರಂದು ಮೂಡಬಿದಿರೆಯ ಜೈನ ದೇವಸ್ಥಾನದಲ್ಲಿ 2 ಲಕ್ಷ ರೂಪಾಯಿ ಮೌಲ್ಯದ ಒಡವೆಗಳನ್ನು ಲೂಟಿ ಮಾಡಿ ಪರಾರಿಯಾಗಿದ್ದರು.

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X