ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಲಾಪುರ ಗಣೇಶನ ಲಡ್ಡು -1.55 ಲಕ್ಷ ರು. ಹರಾಜು ಕೂಗಿದ ರೈತ

By Staff
|
Google Oneindia Kannada News

ಬಾಲಾಪುರ ಗಣೇಶನ ಲಡ್ಡು -1.55 ಲಕ್ಷ ರು. ಹರಾಜು ಕೂಗಿದ ರೈತ
ಇಲ್ಲಿ 21 ಕಿಲೋ ಗಣೇಶನ ಲಾಡು ಪ್ರಸಾದದ ಹರಾಜು ರಂಗೋ ರಂಗು

ಹೈದರಾಬಾದ್‌ : ಪ್ರತಿಷ್ಠೆಯಾಗಿ ಪರಿವರ್ತಿತವಾಗಿರುವ ಬಾಲಾಪುರ ಗಣೇಶನ ಲಡ್ಡು ಪ್ರಸಾದ ಗಿಟ್ಟಿಸಿಕೊಳ್ಳುವ ಹರಾಜು ಈ ಸಲ ಭಾರೀ ರಂಗೇರಿತು. ಕರ್ನಾಟಕದ ರೈತರು ಮಾಡಿದ ಸಾಲ ತೀರಿಸಲಾಗದೆ ತ್ರಾಸು ಅನುಭವಿಸುತ್ತಿರುವ, ಜೀವ ತೆತ್ತುತ್ತಿರುವ ಈ ಸಂದರ್ಭದಲ್ಲಿ ಆಂಧ್ರಪ್ರದೇಶದ ಒಬ್ಬ ರೈತ 21 ಕಿಲೋ ಲಡ್ಡು ಪ್ರಸಾದವನ್ನು 1.55 ಲಕ್ಷ ರುಪಾಯಿ ಹರಾಜು ಕೂಗಿ ಪಡೆದಿದ್ದಾನೆ !

ಚಿಗಿರಿಂತ ಬಾಲ ರೆಡ್ಡಿ ಎಂಬ ರೈತ ಹರಾಜು ಕೂಗಿದ 18 ಸ್ಪರ್ಧಾಳುಗಳನ್ನು ಮೀರಿಸಿ, 1.55 ಲಕ್ಷ ರುಪಾಯಿಗೆ ಲಡ್ಡು ಪ್ರಸಾದ ಪಡೆದುಕೊಂಡ. 1,116 ರುಪಾಯಿಗೆ ಶುರುವಾದ ಹರಾಜು ಬಾಲ ರೆಡ್ಡಿಗೆ ಬಾಲಾಪುರ ಗಣೇಶನ ತುಟ್ಟಿ ಪ್ರಸಾದ ಸಿಗುವುದರೊಂದಿಗೆ ಮುಗಿಯಿತು.

‘ಅಷ್ಟೊಂದು ದುಬಾರಿ ಪ್ರಸಾದವನ್ನ ಏನಪ್ಪಾ ಮಾಡ್ತೀಯ’ ಅಂತ ಬಾಲ ರೆಡ್ಡಿಯನ್ನು ಕೇಳಿದರೆ, ‘ಮನೆಮಂದಿಗೆಲ್ಲ ಹಂಚುತ್ತೇನೆ. ಒಂದಷ್ಟನ್ನು ನನ್ನ ಹೊಲದ ಮಣ್ಣಿನಲ್ಲಿ ಹೂಳುತ್ತೇನೆ. ಈ ಗಣೇಶನ ಪ್ರಸಾದದಿಂದ ಭಾರೀ ಬೆಳೆ ತೆಗೆಯುತ್ತೇನೆ’ ಎನ್ನುತ್ತಾರೆ.

ಹತ್ತು ವರ್ಷಗಳಿಂದ ಇಲ್ಲಿ ಗಣೇಶನ ಲಾಡು ಪ್ರಸಾದವನ್ನು ಹರಾಜು ಕೂಗುವ ಪ್ರತೀತಿಯಿದೆ. ಮೊದಲು ಕೇವಲ 450 ರುಪಾಯಿ ಹರಾಜಿಗೆ ಸಿಗುತ್ತಿದ್ದ ಲಾಡು ಪ್ರಸಾದ ಈಗ ಪ್ರತಿಷ್ಠೆಯ ವಿಷಯವಾಗಿದೆ. ಕಳೆದ ವರ್ಷ 1 ಲಕ್ಷದ 5 ಸಾವಿರ ರುಪಾಯಿಗೆ ಲಾಡು ಹರಾಜಾಗಿತ್ತು. ಹರಾಜಿನಿಂದ ಬರುವ ಹಣವನ್ನು ಆಂಧ್ರಪ್ರದೇಶದ ಹಳೆಯ ದೇವಸ್ಥಾನಗಳ ಪುನರುಜ್ಜೀವನ ಕೆಲಸಕ್ಕೆ ವಿನಿಯೋಗಿಸಲಾಗುತ್ತಿದೆ.

(ಇನ್ಫೋ ವಾರ್ತೆ)

Post your views

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X