ಬಾಲಾಪುರ ಗಣೇಶನ ಲಡ್ಡು -1.55 ಲಕ್ಷ ರು. ಹರಾಜು ಕೂಗಿದ ರೈತ
ಬಾಲಾಪುರ
ಗಣೇಶನ
ಲಡ್ಡು
-1.55
ಲಕ್ಷ
ರು.
ಹರಾಜು
ಕೂಗಿದ
ರೈತ
ಇಲ್ಲಿ
21
ಕಿಲೋ
ಗಣೇಶನ
ಲಾಡು
ಪ್ರಸಾದದ
ಹರಾಜು
ರಂಗೋ
ರಂಗು
ಚಿಗಿರಿಂತ ಬಾಲ ರೆಡ್ಡಿ ಎಂಬ ರೈತ ಹರಾಜು ಕೂಗಿದ 18 ಸ್ಪರ್ಧಾಳುಗಳನ್ನು ಮೀರಿಸಿ, 1.55 ಲಕ್ಷ ರುಪಾಯಿಗೆ ಲಡ್ಡು ಪ್ರಸಾದ ಪಡೆದುಕೊಂಡ. 1,116 ರುಪಾಯಿಗೆ ಶುರುವಾದ ಹರಾಜು ಬಾಲ ರೆಡ್ಡಿಗೆ ಬಾಲಾಪುರ ಗಣೇಶನ ತುಟ್ಟಿ ಪ್ರಸಾದ ಸಿಗುವುದರೊಂದಿಗೆ ಮುಗಿಯಿತು.
‘ಅಷ್ಟೊಂದು ದುಬಾರಿ ಪ್ರಸಾದವನ್ನ ಏನಪ್ಪಾ ಮಾಡ್ತೀಯ’ ಅಂತ ಬಾಲ ರೆಡ್ಡಿಯನ್ನು ಕೇಳಿದರೆ, ‘ಮನೆಮಂದಿಗೆಲ್ಲ ಹಂಚುತ್ತೇನೆ. ಒಂದಷ್ಟನ್ನು ನನ್ನ ಹೊಲದ ಮಣ್ಣಿನಲ್ಲಿ ಹೂಳುತ್ತೇನೆ. ಈ ಗಣೇಶನ ಪ್ರಸಾದದಿಂದ ಭಾರೀ ಬೆಳೆ ತೆಗೆಯುತ್ತೇನೆ’ ಎನ್ನುತ್ತಾರೆ.
ಹತ್ತು ವರ್ಷಗಳಿಂದ ಇಲ್ಲಿ ಗಣೇಶನ ಲಾಡು ಪ್ರಸಾದವನ್ನು ಹರಾಜು ಕೂಗುವ ಪ್ರತೀತಿಯಿದೆ. ಮೊದಲು ಕೇವಲ 450 ರುಪಾಯಿ ಹರಾಜಿಗೆ ಸಿಗುತ್ತಿದ್ದ ಲಾಡು ಪ್ರಸಾದ ಈಗ ಪ್ರತಿಷ್ಠೆಯ ವಿಷಯವಾಗಿದೆ. ಕಳೆದ ವರ್ಷ 1 ಲಕ್ಷದ 5 ಸಾವಿರ ರುಪಾಯಿಗೆ ಲಾಡು ಹರಾಜಾಗಿತ್ತು. ಹರಾಜಿನಿಂದ ಬರುವ ಹಣವನ್ನು ಆಂಧ್ರಪ್ರದೇಶದ ಹಳೆಯ ದೇವಸ್ಥಾನಗಳ ಪುನರುಜ್ಜೀವನ ಕೆಲಸಕ್ಕೆ ವಿನಿಯೋಗಿಸಲಾಗುತ್ತಿದೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು