ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೆ.11ರಂದು ಬೇಲೂರು ದೇವಾಲಯ ಸ್ಫೋಟ- ಬೆದರಿಕೆ ಪತ್ರ!

By Staff
|
Google Oneindia Kannada News

ಸೆ.11ರಂದು ಬೇಲೂರು ದೇವಾಲಯ ಸ್ಫೋಟ- ಬೆದರಿಕೆ ಪತ್ರ!
ಚನ್ನಕೇಶವಸ್ವಾಮಿ ದೇವಾಲಯದಲ್ಲಿ ಬಿಗಿ ಪೊಲೀಸ್‌ ಭದ್ರತೆಗೆ ಕ್ರಮ

ಬೇಲೂರು : ಜಗತ್ಪ್ರಸಿದ್ಧ ಚನ್ನಕೇಶವ ಸ್ವಾಮಿ ದೇವಾಲಯವನ್ನು ಸೆಪ್ಟೆಂಬರ್‌ 11ನೇ ತಾರೀಕು ಸ್ಫೋಟಿಸುವುದಾಗಿ ಬೆದರಿಸಿ, ಅನಾಮಧೇಯ ಪತ್ರವೊಂದು ದೇವಳಕ್ಕೆ ಬಂದಿದೆ.

ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ನಾಗರಾಜ್‌ ಅವರ ಹೆಸರಿಗೆ ಶುಕ್ರವಾರ (ಸೆ.05) ಅನಾಮಧೇಯ ಪತ್ರ ಬಂದಿದೆ. ಸಂಜೆ 5 ಗಂಟೆ ಹೊತ್ತಿಗೆ ಪತ್ರವನ್ನು ತೆರೆದು ಓದಿದಾಗ, ದೇವಳದ ಆಡಳಿತ ಮಂಡಳಿಯಲ್ಲಿ ಆತಂಕ ಮಡುಗಟ್ಟಿತು. ಪತ್ರವನ್ನು ಇಂಗ್ಲಿಷ್‌ನಲ್ಲಿ ಬರೆದಿದ್ದು, ಬಾಂಬ್‌ ಇಟ್ಟು ದೇವಸ್ಥಾನವನ್ನು ಸ್ಫೋಟಿಸುವುದರ ಜೊತೆಗೆ ಜನರನ್ನು ಕೊಲ್ಲುವ ಬೆದರಿಕೆಯ ಒಕ್ಕಣೆ ಇದೆ. ಪತ್ರದ ಕೊನೆಯಲ್ಲಿ ಪಾಕಿಸ್ತಾನ್‌ ಜಿಂದಾಬಾದ್‌ ಅಂತಲೂ ಬರೆಯಲಾಗಿದೆ.

ದೇವಳದ ತಹಸೀಲ್ದಾರ್‌ ಕೂಡ ಆಗಿರುವ ನಾಗರಾಜ್‌, ಬೇಲೂರಿನ ತಹಸೀಲ್ದಾರ್‌ ಎಂ.ಬಿ.ಜಗನ್ನಾಥ್‌ ಅವರಿಗೆ ಹಾಗೂ ಪೊಲೀಸರಿಗೆ ಪತ್ರದ ವಿಷಯ ತಿಳಿಸಿದ್ದಾರೆ. ದೇವಾಲಯದಲ್ಲಿ ಈಗಿನಿಂದಲೇ ಬಿಗಿ ಬಂದೋಬಸ್ತ್‌ ನಿಯೋಜಿಸುವಂತೆ ಮೇಲಧಿಕಾರಿಗಳಿಗೆ ಮನವಿ ಮಾಡಿಕೊಳ್ಳಲಾಗಿದೆ. ಪತ್ರವನ್ನು ಹೊಳೆ ನರಸಿಪುರದಲ್ಲಿ ಪೋಸ್ಟ್‌ ಮಾಡಲಾಗಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X