ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಸಾರ್‌, ಬರಗೂರರಿಗೆ ಆದರ್ಶ ಪ್ರಶಸ್ತಿ

By Staff
|
Google Oneindia Kannada News

ನಿಸಾರ್‌, ಬರಗೂರರಿಗೆ ಆದರ್ಶ ಪ್ರಶಸ್ತಿ
ಚಿತ್ರನಟ ಶ್ರೀನಾಥ್‌ ಕಲಾರತ್ನ. ಸೆ.9ರಂದು ಪ್ರಶಸ್ತಿ ಪ್ರದಾನ

ಬೆಂಗಳೂರು : ನಿತ್ಯೋತ್ಸವ ಕವಿ ಪ್ರೊ.ಕೆ.ಎಸ್‌.ನಿಸಾರ್‌ ಅಹಮದ್‌ ಅವರನ್ನು ಆದರ್ಶ ಸುಗಮ ಸಂಗೀತರತ್ನ ಪ್ರಶಸ್ತಿಗೆ ಆರಿಸಲಾಗಿದೆ.

ಆದರ್ಶ ಸುಗಮ ಸಂಗೀತ ಅಕಾಡೆಮಿ ಸಂಗೀತ, ಸಿನಿಮಾ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ವ್ಯಕ್ತಿಗಳಿಗೆ ವಿವಿಧ ಪ್ರಶಸ್ತಿಗಳನ್ನು ಕೊಡುತ್ತಿದೆ. ಅಕಾಡೆಮಿ ಅಧ್ಯಕ್ಷ ಕಿಕ್ಕೇರಿ ಕೃಷ್ಣಮೂರ್ತಿ ಗುರುವಾರ (ಸೆ.04) ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.

ಪ್ರಶಸ್ತಿಗೆ ಭಾಜನರಾಗಲಿರುವ ಇತರರು-
ಪ್ರೊ.ಬರಗೂರು ರಾಮಚಂದ್ರಪ್ಪ (ಆದರ್ಶ ಸಾಹಿತ್ಯರತ್ನ ಪ್ರಶಸ್ತಿ)
ಚಿತ್ರನಟ ಶ್ರೀನಾಥ್‌ (ಆದರ್ಶ ಕಲಾರತ್ನ ಪ್ರಶಸ್ತಿ)
ಸಂಗೀತ ನಿರ್ದೇಶಕ ವಿ.ಮನೋಹರ್‌ (ಆದರ್ಶ ಸಂಗೀತರತ್ನ ಪ್ರಶಸ್ತಿ).

ಸೆಪ್ಟೆಂಬರ್‌ 7ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಉದ್ಘಾಟಿಸುವರು. ಕವಿ ಡಾ.ಎಚ್‌.ಎಸ್‌.ವೆಂಕಟೇಶ ಮೂರ್ತಿ ಅಧ್ಯಕ್ಷತೆ ವಹಿಸುವರು. ಕೊಳದಮಠದ ಪೀಠಾಧ್ಯಕ್ಷ ಡಾ.ಶಾಂತವೀರ ಸ್ವಾಮೀಜಿ ಆಶೀರ್ವಾದ ಮಾಡುವರು.

ಅದೇ ದಿನ ಸಾಯಂಕಾಲ ಕವಯತ್ರಿ ಬಿ.ಟಿ.ಲಲಿತಾ ನಾಯಕ್‌ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿಯಿದೆ. ಅಕಾಡೆಮಿಯ 7ನೇ ವಾರ್ಷಿಕೋತ್ಸವ ಸಮಾರಂಭ ಕೂಡ ಅದಾಗಲಿದ್ದು, ವಿವಿಧ ಮಕ್ಕಳಿಂದ ಗಾಯನ ಕಾರ್ಯಕ್ರಮ ಇರುತ್ತದೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X