ಹೈಕೋರ್ಟ್ ಪೀಠಕ್ಕೆ ಒತ್ತಾಯಿಸಿ ಗುಲ್ಬರ್ಗಾ ಬಂದ್, ಹಿಂಸಾಚಾರ
ಹೈಕೋರ್ಟ್
ಪೀಠಕ್ಕೆ
ಒತ್ತಾಯಿಸಿ
ಗುಲ್ಬರ್ಗಾ
ಬಂದ್,
ಹಿಂಸಾಚಾರ
ಬಳ್ಳಾರಿಯಲ್ಲಿ
ಪೀಠ
ಒತ್ತಾಯಿಸಿ
ಶನಿವಾರ
ಕೊಪ್ಪಳ
ಬಂದ್
!
ಗುಲ್ಬರ್ಗಾ ಜಿಲ್ಲಾ ವಕೀಲರ ಸಂಘ, ವಿವಿಧ ರಾಜಕೀಯ ಪಕ್ಷಗಳು, ವ್ಯಾಪಾರಿಗಳು ಹಾಗೂ ಅನೇಕ ಸಂಘ ಸಂಸ್ಥೆಗಳು ಶುಕ್ರವಾರದ ಬಂದ್ಗೆ ಬೆಂಬಲ ವ್ಯಕ್ತಪಡಿಸಿದ್ದವು. ಗುಲ್ಬರ್ಗಾ ನಗರ ಹೈದ್ರಾಬಾದ್ ಕರ್ನಾಟಕದ ಕೇಂದ್ರ ಭಾಗವಾಗಿರುವುದರಿಂದ ಇಲ್ಲಿಯೇ ಹೈಕೋರ್ಟ್ ಪೀಠ ಸ್ಥಾಪಿಸಬೇಕೆನ್ನುವುದು ಪ್ರತಿಭಟನಕಾರರ ಆಗ್ರಹ.
ಬಂದ್ನಲ್ಲಿ ತೊಡಗಿದ್ದ ಕೆಲವು ಉದ್ರಿಕ್ತ ಪ್ರತಿಭಟನಾಕಾರರು ಹಿಂಸಾಚಾರದಲ್ಲಿ ತೊಡಗಿದ್ದರಿಂದ ಕೆಲಕಾಲ ಗುಲ್ಬರ್ಗಾ ನಗರದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು . ಲಾರಿ, ಕಾರು ಹಾಗೂ ಅಂಗಡಿ ಮುಂಗಟ್ಟುಗಳ ಮೇಲೆ ಉದ್ರಿಕ್ತರು ಕಲ್ಲು ತೂರಾಟ ನಡೆಸಿದರು. ವಕೀಲರೊಬ್ಬರ ಮೇಲೆ ಹಲ್ಲೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶಾಂತಿ ಹಾಗೂ ಸುವ್ಯವಸ್ಥೆಯಲ್ಲಿ ತೊಡಗಿದ್ದ ಪೊಲೀಸರು ಹಾಗೂ ಉದ್ರಿಕ್ತರ ನಡುವೆ ಕೆಲವೆಡೆ ಚಕಮಕಿಯೂ ನಡೆದಿದೆ. ಬಂದ್ ಪ್ರಯುಕ್ತ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿತ್ತು . ಅಂಗಡಿ ಮುಂಗಟ್ಟು , ಹೊಟೇಲ್, ಸಿನಿಮಾ ಮಂದಿರಗಳು ಮುಚ್ಚಿದ್ದವು. ಸಾರಿಗೆ ಸಂಪರ್ಕ ಸಂಪೂರ್ಣ ಸ್ಥಗಿತಗೊಂಡಿತ್ತು .
ಹುಬ್ಬಳ್ಳಿಯಲ್ಲಿ ಹೈಕೋರ್ಟ್ ಪೀಠಕ್ಕೆ ಒತ್ತಾಯಿಸಿ ಸೆ.4ರ ಗುರುವಾರ ಶಾಂತಿಯುತ ಉತ್ತರ ಕರ್ನಾಟಕ ಬಂದ್ ನಡೆದಿತ್ತು . ಹುಬ್ಬಳ್ಳಿಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿರುವ ಕೊಪ್ಪಳ ಜಿಲ್ಲಾ ವಕೀಲರ ಸಂಘ ಸೆ.6ರ ಶನಿವಾರ ಕೊಪ್ಪಳ ಜಿಲ್ಲಾ ಬಂದ್ಗೆ ಕರೆ ನೀಡಿದೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು