ನ್ಯೂಜಿಲೆಂಡ್ ವಿರುದ್ಧ ನಾವು ಗೆದ್ದೇ ತೀರುವೆವು-ಸೌರವ್ಗಂಗೂಲಿ
ನ್ಯೂಜಿಲೆಂಡ್
ವಿರುದ್ಧ
ನಾವು
ಗೆದ್ದೇ
ತೀರುವೆವು-ಸೌರವ್ಗಂಗೂಲಿ
ತಂಡದಲ್ಲಿ
ಸ್ಥಾನ
ಪಡೆಯುವುದು
ಯಾರಿಗಾದರೂ
ಸುಲಭದ
ಮಾತಲ್ಲ
ದೈಹಿಕ ಕ್ಷಮತೆ ಹಾಗೂ ಪ್ರಸ್ತುತದ ಫಾರಂ ಮುಖ್ಯವೇ ಹೊರತು ಕಾಗದದ ಮೇಲಿನ ಹಳೆಯ ಅಂಕಿಅಂಶಗಳು ಆಯ್ಕೆಗೆ ಮಾನದಂಡವಾಗುವುದಿಲ್ಲ ಎಂದು ಸೆ.5ರ ಶುಕ್ರವಾರ ಪಿಟಿಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಸೌರವ್ ಗಂಗೂಲಿ ತಿಳಿಸಿದರು.
ಪಾರ್ಥಿವ್ ಪಟೇಲ್ರ ಆಟದ ಬಗ್ಗೆ ಶ್ಲಾಘಿಸಿದ ಗಂಗೂಲಿ- ಆತ ಉತ್ತಮವಾಗಿ ಆಡುತ್ತಿದ್ದಾನೆ. ಆದರೆ ಆತನಿಂದ ಇನ್ನಷ್ಟು ಒಳ್ಳೆಯ ಬ್ಯಾಟಿಂಗ್ ನಿರೀಕ್ಷಿಸುವುದಾಗಿ ಹೇಳಿದರು. ದೀರ್ಘಕಾಲಿಕ ವಿಶ್ರಾಂತಿಯ ನಂತರವೂ ನ್ಯೂಜಿಲೆಂಡ್ ವಿರುದ್ಧ ಉತ್ತಮ ಪ್ರದರ್ಶನ ನೀಡುವ ವಿಶ್ವಾಸ ತಮಗಿದೆ ಎಂದರು.
ಶೇನ್ಬಾಂಡ್ ಅನುಪಸ್ಥಿತಿ ನ್ಯೂಜಿಲೆಂಡ್ ತಂಡಕ್ಕೆ ದೊಡ್ಡ ಹೊಡೆತ. ಆದರೆ, ಬಾಂಡ್ ಅನುಪಸ್ಥಿತಿ ಭಾರತದ ಫಲಿತಾಂಶದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ . ಬಾಂಡ್ ಇದ್ದಿದ್ದರೂ ನಾವು ಗೆದ್ದೇ ಗೆಲ್ಲುತ್ತಿದ್ದೆವು ಎಂದು ಗಂಗೂಲಿ ಅಪಾರ ಆತ್ಮ ವಿಶ್ವಾಸ ವ್ಯಕ್ತಪಡಿಸಿದರು.
(ಪಿಟಿಐ)
ಮುಖಪುಟ / ವಾರ್ತೆಗಳು