ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನ್ಯೂಜಿಲೆಂಡ್‌ ವಿರುದ್ಧ ನಾವು ಗೆದ್ದೇ ತೀರುವೆವು-ಸೌರವ್‌ಗಂಗೂಲಿ

By Staff
|
Google Oneindia Kannada News

ನ್ಯೂಜಿಲೆಂಡ್‌ ವಿರುದ್ಧ ನಾವು ಗೆದ್ದೇ ತೀರುವೆವು-ಸೌರವ್‌ಗಂಗೂಲಿ
ತಂಡದಲ್ಲಿ ಸ್ಥಾನ ಪಡೆಯುವುದು ಯಾರಿಗಾದರೂ ಸುಲಭದ ಮಾತಲ್ಲ

ಬೆಂಗಳೂರು : ನ್ಯೂಜಿಲೆಂಡ್‌ ವಿರುದ್ಧದ ಕ್ರಿಕೆಟ್‌ ಪಂದ್ಯಾವಳಿಗೆ ಸಿದ್ಧತೆ ನಡೆಸುತ್ತಿರುವ ಸಂಭವನೀಯ ಆಟಗಾರರ ಶಿಬಿರದ ತರಬೇತಿ ಇನ್ನೊಂದು ದಿನ ಬಾಕಿಯಿರುವಂತೆ- ತಂಡದಲ್ಲಿ ಸ್ಥಾನ ಪಡೆಯುವುದು ಸುಲದ ಮಾತಲ್ಲ ಎಂದು ಭಾರತೀಯ ಕ್ರಿಕೆಟ್‌ ತಂಡದ ನಾಯಕ ಸೌರವ್‌ ಗಂಗೂಲಿ ಸಹ ಕ್ರಿಕೆಟಿಗರಿಗೆ ಎಚ್ಚರಿಸಿದ್ದಾರೆ.

ದೈಹಿಕ ಕ್ಷಮತೆ ಹಾಗೂ ಪ್ರಸ್ತುತದ ಫಾರಂ ಮುಖ್ಯವೇ ಹೊರತು ಕಾಗದದ ಮೇಲಿನ ಹಳೆಯ ಅಂಕಿಅಂಶಗಳು ಆಯ್ಕೆಗೆ ಮಾನದಂಡವಾಗುವುದಿಲ್ಲ ಎಂದು ಸೆ.5ರ ಶುಕ್ರವಾರ ಪಿಟಿಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಸೌರವ್‌ ಗಂಗೂಲಿ ತಿಳಿಸಿದರು.

ಪಾರ್ಥಿವ್‌ ಪಟೇಲ್‌ರ ಆಟದ ಬಗ್ಗೆ ಶ್ಲಾಘಿಸಿದ ಗಂಗೂಲಿ- ಆತ ಉತ್ತಮವಾಗಿ ಆಡುತ್ತಿದ್ದಾನೆ. ಆದರೆ ಆತನಿಂದ ಇನ್ನಷ್ಟು ಒಳ್ಳೆಯ ಬ್ಯಾಟಿಂಗ್‌ ನಿರೀಕ್ಷಿಸುವುದಾಗಿ ಹೇಳಿದರು. ದೀರ್ಘಕಾಲಿಕ ವಿಶ್ರಾಂತಿಯ ನಂತರವೂ ನ್ಯೂಜಿಲೆಂಡ್‌ ವಿರುದ್ಧ ಉತ್ತಮ ಪ್ರದರ್ಶನ ನೀಡುವ ವಿಶ್ವಾಸ ತಮಗಿದೆ ಎಂದರು.

ಶೇನ್‌ಬಾಂಡ್‌ ಅನುಪಸ್ಥಿತಿ ನ್ಯೂಜಿಲೆಂಡ್‌ ತಂಡಕ್ಕೆ ದೊಡ್ಡ ಹೊಡೆತ. ಆದರೆ, ಬಾಂಡ್‌ ಅನುಪಸ್ಥಿತಿ ಭಾರತದ ಫಲಿತಾಂಶದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ . ಬಾಂಡ್‌ ಇದ್ದಿದ್ದರೂ ನಾವು ಗೆದ್ದೇ ಗೆಲ್ಲುತ್ತಿದ್ದೆವು ಎಂದು ಗಂಗೂಲಿ ಅಪಾರ ಆತ್ಮ ವಿಶ್ವಾಸ ವ್ಯಕ್ತಪಡಿಸಿದರು.

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X