ಬೆಂಗಳೂರಿನ ಐಸೋಲೇಷನ್ ರೇಬಿಸ್ ಆಸ್ಪತ್ರೆಯಲ್ಲೇ ನಾಯಿಕಾಟ !
ಬೆಂಗಳೂರಿನ
ಐಸೋಲೇಷನ್
ರೇಬಿಸ್
ಆಸ್ಪತ್ರೆಯಲ್ಲೇ
ನಾಯಿಕಾಟ
!
ಮೊದಲೇ
ನಾಯಿಕಡಿತದಿಂದ
ಕಂಗೆಟ್ಟವರಿಗೆ
ಇಲ್ಲೂ
ನಾಯಿ
ಕಾಟ
ಅಂದರೆ...
‘ಅಲಸೂರಿನ ಐಸೋಲೇಷನ್ ಆಸ್ಪತ್ರೆಗೆ ಮಾತ್ರ ಸೇರಬೇಡಿ. ನಾಯಿ ಕಡಿಯಿತು ಅಂತ ಅಲ್ಲಿಗೆ ಹೋದರೆ, ಹೆಜ್ಜೆ ಹೆಜ್ಜೆಗೂ ನಾಯಿಗಳು ಕಾಡುತ್ತವೆ. ಸ್ವಲ್ಪ ಕಾಸು ಖರ್ಚಾದರೂ ಚಿಂತಿಲ್ಲ , ಪ್ರೆೃವೇಟ್ ಆಸ್ಪತ್ರೆಗೇ ಹೋಗಿ’ ಅಂತ ಅನುಭವಿಸಿದವರು ಅಲವತ್ತುಕೊಳ್ಳುತ್ತಿದ್ದಾರೆ.
ಮಹಾನಗರ ಪಾಲಿಕೆ ಮಂದಿಗೆ ಐಸೋಲೇಷನ್ ಆಸ್ಪತ್ರೆ ಪ್ರದೇಶದ ಬಗ್ಗೆ ದೂರುಗಳು ಸಾಕಷ್ಟು ಹೋಗಿವೆ. ಆದರೂ ನಾಯಿಗಳ ಸಂಖ್ಯೆ ತಗ್ಗಿಲ್ಲ. ರಾತ್ರಿ ಹೊತ್ತು ಕೆಲವು ನಾಯಿಗಳು ಕಾದಾಡುತ್ತವೆ. ಕೆಲವು ನಾಯಿಗಳು ಮುದ್ದು ಮಾಡುತ್ತಿರುತ್ತವೆ. ಇನ್ನು ಕೆಲವು ಆಡುತ್ತಿರುತ್ತವೆ. ಹೀಗಾಗಿ ಹಲವಾರು ನಾಯಿಗಳ ತರಾವರಿ ಸದ್ದು ಕಿವಿಗೆ ಅಡಚುತ್ತಿರುತ್ತದೆ. ಮೊದಲೇ ನಾಯಿಕಡಿತದಿಂದ ಕಂಗೆಟ್ಟು ಆಸ್ಪತ್ರೆ ಸೇರಿರುವ ಮಂದಿಗೆ ಮತ್ತದೇ ಶ್ವಾನಕಾಟ ಅಂದರೆ ನಿದ್ದೆ ಹೇಗೆ ಬಂದೀತು ಹೇಳಿ?
ಮೊನ್ನೆ ಒಂದು ನಾಯಿ ಸೀದಾ ವಾರ್ಡಿನೊಳಕ್ಕೇ ನುಗ್ಗಿಬಿಟ್ಟಿತ್ತು. ರೋಗಿಗಳೆಲ್ಲ ಬೆವೆತು ತೊಪ್ಪೆಯಾಗಿ ಬಿಟ್ಟಿದ್ದರು ಎಂದು ಆಸ್ಪತ್ರೆಯವರೇ ಹೇಳುತ್ತಾರೆ. ಹೀಗಿದ್ದೂ ನಾಯಿಗಳ ಬೊಗಳಾಟ ನಿಲ್ಲಿಸಲು ಮಹಾನಗರ ಪಾಲಿಕೆ ಯಾವ ಕ್ರಮವನ್ನೂ ಕೈಗೊಂಡಿಲ್ಲ.
ನಿಮಗಿದು ಗೊತ್ತಿರಲಿ- ಜನವರಿ 2003ರಿಂದ ಇದುವರೆಗೆ 239 ಮಂದಿ ನಾಯಿ ಕೈಲಿ ಕಡಿಸಿಕೊಂಡಿದ್ದು, ಈ ಆಸ್ಪತ್ರೆಗೆ ಸೇರಿದ್ದಾರೆ. ಈ ಪೈಕಿ 19 ಜನ ಸತ್ತಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ಬೆಂಗಳೂರು ಡೈರಿ