ಯಳಂದೂರಿನಲ್ಲಿ ಸೋನಿಯಾರಿಂದ ಅಕ್ಷರ ದಾಸೋಹಕ್ಕೆ ಚಾಲನೆ
ಯಳಂದೂರಿನಲ್ಲಿ
ಸೋನಿಯಾರಿಂದ
ಅಕ್ಷರ
ದಾಸೋಹಕ್ಕೆ
ಚಾಲನೆ
ಪೊಳ್ಳು
ಭರವಸೆಗಳ
ನೀಡದಂತೆ
ಸೋನಿಯಾ
ಸೂಚನೆ
ಅವರು ಮಂಗಳವಾರ (ಸೆ. 02)ರಂದು ಯಳಂದೂರಿನ ಜೆಎಸ್ಎಸ್ ಪ್ರಾಥಮಿಕ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ ಕಾರ್ಯಕ್ರಮ ಅಕ್ಷರ ದಾಸೋಹವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಕೈಗೆತ್ತಿಕೊಂಡ ಅಭಿವೃದ್ಧಿ ಕಾರ್ಯಗಳನ್ನು ನಿಗದಿತ ಅವಧಿಯಾಳಗೆ ಮುಗಿಸುವಂತೆ ಸೂಚಿಸಿದ ಸೋನಿಯಾ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಆರಂಭಿಸಿರುವ ಅಕ್ಷರ ದಾಸೋಹ ಯೋಜನೆಯನ್ನು ಶ್ಲಾಘಿಸಿದರು. ಕೇಂದ್ರ ಸರಕಾರವು ಇದೇ ಯೋಜನೆಯ ಮಾದರಿಯಲ್ಲಿ ಇಡೀ ದೇಶದಲ್ಲಿ ಅಕ್ಷರ ದಾಸೋಹ ಯೋಜನೆಯನ್ನು ಅಳವಡಿಸಬೇಕು ಎಂದರು.
ಮಕ್ಕಳಿಗೆ ಊಟ ಬಡಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದ ಸೋನಿಯಾ ಶಾಲೆಯ ಅಡುಗೆ ಮನೆಯನ್ನು ವೀಕ್ಷಿಸಿದರು. ಕರ್ನಾಟಕ ಸರಕಾರದ ಸಹಯೋಗದೊಂದಿಗೆ ಅಕ್ಷರ ದಾಸೋಹವನ್ನು ಆರಂಭಿಸಿದ ಜೆಎಸ್ಎಸ್ ಮಠದ ಆಸಕ್ತಿಯನ್ನು ಸೋನಿಯಾ ಗಾಂಧಿ ಹೊಗಳಿದರು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ, ಅಕ್ಷರ ದಾಸೋಹ ಯೋಜನೆಯ ವಿಸ್ತರಣೆಗೋಸ್ಕರ ಕೇಂದ್ರದ ನೆರವನ್ನು ಕೋರಿದರು.
(ಪಿಟಿಐ)
ಮುಖಪುಟ / ವಾರ್ತೆಗಳು