ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಳಂದೂರಿನಲ್ಲಿ ಸೋನಿಯಾರಿಂದ ಅಕ್ಷರ ದಾಸೋಹಕ್ಕೆ ಚಾಲನೆ

By Staff
|
Google Oneindia Kannada News

ಯಳಂದೂರಿನಲ್ಲಿ ಸೋನಿಯಾರಿಂದ ಅಕ್ಷರ ದಾಸೋಹಕ್ಕೆ ಚಾಲನೆ
ಪೊಳ್ಳು ಭರವಸೆಗಳ ನೀಡದಂತೆ ಸೋನಿಯಾ ಸೂಚನೆ

ಮೈಸೂರು : ಚುನಾವಣೆ ಸಂದರ್ಭದಲ್ಲಿ ನೀಡಿದ ಎಲ್ಲ ಭರವಸೆಗಳನ್ನೂ ಪೂರೈಸುವಂತೆ ಮತ್ತು ಜನರಿಗೆ ಪೊಳ್ಳು ಭರವಸೆಗಳನ್ನು ಯಾವತ್ತೂ ನೀಡದಂತೆ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ದೇಶದಲ್ಲಿನ ಆಡಳಿತಾರೂಢ ಕಾಂಗ್ರೆಸ್‌ ಸರ್ಕಾರಗಳಿಗೆ ಕರೆ ನೀಡಿದ್ದಾರೆ.

ಅವರು ಮಂಗಳವಾರ (ಸೆ. 02)ರಂದು ಯಳಂದೂರಿನ ಜೆಎಸ್‌ಎಸ್‌ ಪ್ರಾಥಮಿಕ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ ಕಾರ್ಯಕ್ರಮ ಅಕ್ಷರ ದಾಸೋಹವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಕೈಗೆತ್ತಿಕೊಂಡ ಅಭಿವೃದ್ಧಿ ಕಾರ್ಯಗಳನ್ನು ನಿಗದಿತ ಅವಧಿಯಾಳಗೆ ಮುಗಿಸುವಂತೆ ಸೂಚಿಸಿದ ಸೋನಿಯಾ ಮುಖ್ಯಮಂತ್ರಿ ಎಸ್‌. ಎಂ. ಕೃಷ್ಣ ಆರಂಭಿಸಿರುವ ಅಕ್ಷರ ದಾಸೋಹ ಯೋಜನೆಯನ್ನು ಶ್ಲಾಘಿಸಿದರು. ಕೇಂದ್ರ ಸರಕಾರವು ಇದೇ ಯೋಜನೆಯ ಮಾದರಿಯಲ್ಲಿ ಇಡೀ ದೇಶದಲ್ಲಿ ಅಕ್ಷರ ದಾಸೋಹ ಯೋಜನೆಯನ್ನು ಅಳವಡಿಸಬೇಕು ಎಂದರು.

ಮಕ್ಕಳಿಗೆ ಊಟ ಬಡಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದ ಸೋನಿಯಾ ಶಾಲೆಯ ಅಡುಗೆ ಮನೆಯನ್ನು ವೀಕ್ಷಿಸಿದರು. ಕರ್ನಾಟಕ ಸರಕಾರದ ಸಹಯೋಗದೊಂದಿಗೆ ಅಕ್ಷರ ದಾಸೋಹವನ್ನು ಆರಂಭಿಸಿದ ಜೆಎಸ್‌ಎಸ್‌ ಮಠದ ಆಸಕ್ತಿಯನ್ನು ಸೋನಿಯಾ ಗಾಂಧಿ ಹೊಗಳಿದರು.

ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ, ಅಕ್ಷರ ದಾಸೋಹ ಯೋಜನೆಯ ವಿಸ್ತರಣೆಗೋಸ್ಕರ ಕೇಂದ್ರದ ನೆರವನ್ನು ಕೋರಿದರು.

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X