ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬರ ಇನ್ನಷ್ಟು ಉಗ್ರ: ಕಪ್ಪುಪಟ್ಟಿಗೆ ಹೆಚ್ಚುವರಿ 20 ತಾಲ್ಲೂಕು

By Staff
|
Google Oneindia Kannada News

ಬರ ಇನ್ನಷ್ಟು ಉಗ್ರ: ಕಪ್ಪುಪಟ್ಟಿಗೆ ಹೆಚ್ಚುವರಿ 20 ತಾಲ್ಲೂಕು
ದೊಡ್ಡ ತಾಲ್ಲೂಕುಗಳು ಎರಡಾಗಿ ಪರಿಗಣನೆ, ವಿಶೇಷ ತಹಸಿಲ್ದಾರ್‌ ನೇಮಕ

ಬೆಂಗಳೂರು : ಹೆಚ್ಚುವರಿ 20 ತಾಲ್ಲೂಕುಗಳನ್ನು ಬರ ಪೀಡಿತ ಪ್ರದೇಶಗಳ ಪಟ್ಟಿಗೆ ರಾಜ್ಯ ಸರ್ಕಾರ ಸೇರ್ಪಡೆ ಮಾಡಿದ್ದು , ಇದರಿಂದಾಗಿ ಬರಪೀಡಿತ ತಾಲ್ಲೂಕುಗಳ ಸಂಖ್ಯೆ 146ಕ್ಕೆ ಏರಿದೆ. ರಾಜ್ಯದಲ್ಲಿನ ಒಟ್ಟು ತಾಲ್ಲೂಕುಗಳ ಸಂಖ್ಯೆ 176.

ಬರಪೀಡಿತ ತಾಲ್ಲೂಕುಗಳ ಪಟ್ಟಿಯಿಂದ ಹೊರಗಿದ್ದ ಇಪ್ಪತ್ತು ತಾಲ್ಲೂಕುಗಳಲ್ಲಿ ಬಿದ್ದಿರುವ ಮಳೆಯ ಪ್ರಮಾಣ ಅತ್ಯಂತ ಕಡಿಮೆಯಿದ್ದು , ಈ ತಾಲ್ಲೂಕುಗಳನ್ನು ಬರ ಪೀಡಿತ ಪ್ರದೇಶಗಳೆಂದು ಸರ್ಕಾರ ಘೋಷಿಸಿರುವುದಾಗಿ ಕಂದಾಯ ಸಚಿವ ಎಚ್‌.ಸಿ. ಶ್ರೀಕಂಠಯ್ಯ ಸೆ.1ರ ಸೋಮವಾರ ಸುದ್ದಿಗಾರರಿಗೆ ತಿಳಿಸಿದರು.

ಬರ ಪೀಡಿತ 20 ತಾಲ್ಲೂಕುಗಳಲ್ಲಿ ಬರ ಪರಿಹಾರ ಕಾಮಗಾರಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ತ್ವರಿತವಾಗಿ ಕೈಗೊಳ್ಳಲು ಅನುಕೂಲವಾಗುವಂತೆ ಸರ್ಕಾರ ವಿಶೇಷ ತಹಸಿಲ್ದಾರ್‌ಗಳನ್ನು ನೇಮಿಸಲಿದೆ. ಬರ ಪರಿಹಾರ ಕಾರ್ಯಕ್ರಮಗಳ ಉದ್ದೇಶದಿಂದ ದೊಡ್ಡ ತಾಲ್ಲೂಕುಗಳನ್ನು ಎರಡು ತಾಲ್ಲೂಕುಗಳಾಗಿ ಪರಿಗಣಿಸಲಾಗಿದೆ (ತಾತ್ಕಾಲಿಕವಾಗಿ) ಎಂದು ಶ್ರೀಕಂಠಯ್ಯ ಹೇಳಿದರು.

ಬರ ಪೀಡಿತ ಪ್ರದೇಶಗಳಲ್ಲಿ ಕೂಲಿಗಾಗಿ ಕಾಳು ಯೋಜನೆಯ ಅನುಷ್ಠಾನಕ್ಕಾಗಿ ಕೇಂದ್ರ ಸರ್ಕಾರ 1 ಲಕ್ಷ ಮೆಟ್ರಿಕ್‌ ಟನ್‌ ಆಹಾರ ಧಾನ್ಯ ಬಿಡುಗಡೆ ಮಾಡಿರುವುದಾಗಿ ಸಚಿವರು ತಿಳಿಸಿದರು.

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X