ಜಲ ಪರೀಕ್ಷೆ : ಕಬಿನಿ ಹರಿದದ್ದು ಬೆಂಗಳೂರಿಗೋ ತಮಿಳುನಾಡಿಗೊ?
ಜಲ
ಪರೀಕ್ಷೆ
:
ಕಬಿನಿ
ಹರಿದದ್ದು
ಬೆಂಗಳೂರಿಗೋ
ತಮಿಳುನಾಡಿಗೊ?
ಹೊಳೆ
ನೀರಿಗೆ
ಅಧಿಕಾರಿಳದೇ
ಅಪ್ಪಣೆ-
ರೈತರ
ದೂರು
ಬೆಂಗಳೂರಿನಲ್ಲಿ
ಕುಡಿಯುವ
ನೀರಿಗೆ
ತತ್ವಾರ
ಒದಗಿದ್ದರೂ
ರಾಜ್ಯ
ಸರ್ಕಾರ
ತಮಿಳುನಾಡಿಗೆ
ನೀರು
ಹರಿಸುತ್ತಿದೆಯೇ
?
ಕಬಿನಿ
ಜಲಾನಯನ
ಪ್ರದೇಶದ
ರೈತರ
ಪ್ರಕಾರ-
ಹೌದು.
ಜಲ
ಸಂಪನ್ಮೂಲ
ಇಲಾಖೆ
ಅಧಿಕಾರಿಗಳ
ಪ್ರಕಾರ-
ಇಲ್ಲ
.
ಕಬಿನಿ ಜಲಾಶಯ ಇನ್ನೂ ತುಂಬಿಲ್ಲ . ಜಲಾಶಯಕ್ಕೆ ಹರಿದುಬರುತ್ತಿರುವ ಒಳ ಹರಿವಿನ ಪ್ರಮಾಣವೂ ಹೇಳಿಕೊಳ್ಳುವಂತಿಲ್ಲ . ರಾಜ್ಯದಲ್ಲಿ ಮುಂಗಾರು ಆರ್ಭಟ ಕರಾವಳಿಗಷ್ಟೇ ಸೀಮಿತವಾಗಿರುವುದರಿಂದ ಜಲಾಶಯದ ನೀರಿನ ಸಂಗ್ರಹದ ಬಗ್ಗೆ ಹೆಚ್ಚಿನ ಆಶಾಭಾವ ಇಟ್ಟುಕೊಳ್ಳುವಂತೆಯೂ ಇಲ್ಲ . ಆದರೆ, ರಾಜ್ಯ ಸರ್ಕಾರ ಮಾತ್ರ ತಮಿಳುನಾಡಿಗೆ ನೀರು ಹರಿಸುತ್ತಿದೆ ಎಂದು ರೈತಮುಖಂಡರು ಆರೋಪಿಸಿದ್ದಾರೆ.
ಬೆಂಗಳೂರಿಗೆ ಕುಡಿಯುವ ನೀರು ಬಿಡುವ ನೆಪದಲ್ಲಿ ತಮಿಳುನಾಡಿಗೆ 4 ಸಾವಿರ ಕ್ಯುಸೆಕ್ಸ್ ನೀರು ಬಿಡುಗಡೆ ಮಾಡಲಾಗಿದೆ. ತುರ್ತು ದ್ವಾರಗಳ ಮೂಲಕ ಈಗಲೂ ನೀರು ಹರಿಸಲಾಗುತ್ತಿದೆ ಎಂದು ರೈತ ಮುಖಂಡರು ದೂರುತ್ತಿದ್ದಾರೆ.
ರೈತ
ಮುಖಂಡರ
ಕೆಲವು
ಪ್ರಶ್ನೆಗಳು
ಹೀಗಿವೆ-
- ಯಾವುದೇ ಬೆಳೆ ಇಲ್ಲದಿದ್ದರೂ ರಾಂಪುರ ನಾಲೆಗೆ ನೀರು ಹರಿಸಿದ್ದು ಯಾಕೆ ?
- ಕಬಿನಿ ಜಲಾಶಯ ತುಂಬುವ ಮೊದಲೇ ನೀರು ಬಿಟ್ಟಿದ್ದು ಏಕೆ ?
- ನೀರು ಬಿಡುವ ವಿಷಯದಲ್ಲಿ ಸರ್ಕಾರ ಮುಚ್ಚುಮರೆ ಮಾಡುತ್ತಿರುವುದು ಯಾಕೆ ?
- ಪೊಲೀಸರ ಕಾವಲಿನಲ್ಲಿ ನೀರು ಬಿಡುಗಡೆ ಮಾಡುತ್ತಿರುವುದು ಯಾಕೆ ?
ಯಾರ ಮಾತು ನಂಬುವುದು. ಮಳೆಯೇನಾದರೂ ಸರಿಯಾಗಿ ಸುರಿಯದಿದ್ದಲ್ಲಿ - ಕೃಷ್ಣ ಸರ್ಕಾರ ಮತ್ತೊಂದು ನೀರಿನ ಪರೀಕ್ಷೆಗೆ ಒಳಪಡುವುದು ತಪ್ಪದು!
ಪೂರಕ ಓದಿಗೆ :
ಹರಿಯುತ್ತಿರುವ ಕಬಿನಿ ನೀರಿಗೆ ಪೊಲೀಸ್ ಪಡೆಯ ಕಾವಲು !
ಮುಖಪುಟ / ವಾರ್ತೆಗಳು