ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಉ.ಕ. ಸಾಂಸ್ಕೃತಿಕ ರಾಜಧಾನಿ ಧಾರವಾಡದಿ ರಂಗಾಯಣ ಅಂಗಸಂಸ್ಥೆ
ಉ.ಕ.
ಸಾಂಸ್ಕೃತಿಕ
ರಾಜಧಾನಿ
ಧಾರವಾಡದಿ
ರಂಗಾಯಣ
ಅಂಗಸಂಸ್ಥೆ
ಸಾಂಸ್ಕೃತಿಕ
ಚಟುವಟಿಕೆಗಳ
ಉತ್ತರ
ಕರ್ನಾಟಕದಲ್ಲಿ
ಅಭಿವೃದ್ಧಿಪಡಿಸಲು
ಸಂಸ್ಕೃತಿ
ಇಲಾಖೆ
ಆಸಕ್ತಿ
ಧಾರವಾಡ ಉತ್ತರ ಕರ್ನಾಟಕದ ಸಾಂಸ್ಕೃತಿಕ ರಾಜಧಾನಿಯಾಗಿರುವುದರಿಂದ ಹಾಗೂ ಈ ಮುನ್ನ ಅನೇಕ ಸಾಂಸ್ಕೃತಿಕ ಸಂಘಟನೆಗಳು ಧಾರವಾಡ ಜಿಲ್ಲೆಯಲ್ಲಿದ್ದು ಈಗ ಕಣ್ಮರೆಯಾಗಿರುವ ಹಿನ್ನೆಲೆಯಲ್ಲಿ ರಂಗಾಯಣದ ಕಾರ್ಯಚಟುವಟಿಕೆಗಳಿಗೆ ಧಾರವಾಡ ಸೂಕ್ತ ಪ್ರದೇಶವೆಂದು ಗುರುತಿಸಲಾಗಿದೆ. ಅಲ್ಲಿ ರಂಗಾಯಣದ ಅಂಗಸಂಸ್ಥೆಯನ್ನು ತೆರೆಯಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವೆ ರಾಣಿ ಸತೀಶ್ ತಿಳಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಯೋಜನೆಗಳನ್ನು ಇತರ ಪ್ರದೇಶಗಳಿಗೂ ತಲುಪಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಇದರಿಂದ ಉತ್ತರ ಕರ್ನಾಟಕದ ಅಭಿವೃದ್ಧಿಯಲ್ಲಿರುವ ಅಸಮತೋಲನ ತುಸು ನಿವಾರಣೆಯಾಗಬಹುದು ಎಂಬ ಆಶಾ ಭಾವನೆಯನ್ನು ಸಚಿವೆ ಸುದ್ದಿಗೋಷ್ಠಿಯಲ್ಲಿ ವ್ಯಕ್ತಪಡಿಸಿದರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು
Comments
Story first published: Monday, June 2, 2003, 5:30 [IST]