ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಡಿಯೂರಪ್ಪ ಬಾಯಿಗೆ ತುಪ್ಪ , ರಾಜ್ಯ ಬಿಜೆಪಿ ಅಧ್ಯಕ್ಷತೆ ಅನಂತ್‌ಗೆ !

By Staff
|
Google Oneindia Kannada News

ಯಡಿಯೂರಪ್ಪ ಬಾಯಿಗೆ ತುಪ್ಪ , ರಾಜ್ಯ ಬಿಜೆಪಿ ಅಧ್ಯಕ್ಷತೆ ಅನಂತ್‌ಗೆ !
ಅನಂತ್‌ ನೇತೃತ್ವದ ಚುನಾವಣೆಗೆ ಯಡಿಯೂರಪ್ಪ ಸಾರಥ್ಯ

ಬೆಂಗಳೂರು : ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷರಾಗಿ ಕೇಂದ್ರ ಸಚಿವ ಅನಂತಕುಮಾರ್‌ ನೇಮಕ ಹೊಂದುವುದರೊಂದಿಗೆ ಬಿಜೆಪಿ ಅಧ್ಯಕ್ಷ ಸ್ಥಾನದ ಪ್ರಕ್ರಿಯೆಗೆ ತೆರೆ ಬಿದ್ದಿದೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ವೆಂಕಯ್ಯನಾಯ್ಡು ಅವರು ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಅನಂತ್‌ಕುಮಾರ್‌ ಅವರ ನೇಮಕವನ್ನು ಗುರುವಾರ (ಜೂನ್‌26) ದೆಹಲಿಯಲ್ಲಿ ಪ್ರಕಟಿಸಿದರು. ಪಕ್ಷದ ಇನ್ನೊಬ್ಬ ನಾಯಕ ಯಡಿಯೂರಪ್ಪ ಅವರನ್ನು ಬಿಜೆಪಿ ಪ್ರಚಾರ ಸಮಿತಿ ಅಧ್ಯಕ್ಷರಾಗಿ ನೇಮಿಸಲಾಗಿದೆ.

ಒಬ್ಬರಿಗೆ ಒಂದೇ ಹುದ್ದೆ ಎನ್ನುವ ನೀತಿ ಬಿಜೆಪಿ ಪಕ್ಷದಲ್ಲಿದ್ದರೂ- ಅನಂತಕುಮಾರ್‌ ಸ್ವಲ್ಪಕಾಲ ಕೇಂದ್ರ ಸಚಿವರಾಗಿ ಮುಂದುವರಿಯುವರು ಎಂದು ಪಕ್ಷದ ಮೂಲಗಳು ತಿಳಿಸಿವೆ.

ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಅನಂತಕುಮಾರ್‌ ಹೆಸರನ್ನು ಪ್ರಕಟಿಸುವ ಮುನ್ನ ರಾಜ್ಯದ ಬಿಜೆಪಿ ಮುಖಂಡರೊಂದಿಗೆ ವೆಂಕಯ್ಯನಾಯ್ಡು ಚರ್ಚೆ ನಡೆಸಿದರು. ಯಡಿಯೂರಪ್ಪ , ಜಗದೀಶ್‌ ಶೆಟ್ಟರ್‌, ಶಂಕರಮೂರ್ತಿ, ಮುಖ್ಯಮಂತ್ರಿ ಚಂದ್ರು, ವಿ.ಎಸ್‌.ಆಚಾರ್ಯ, ರಾಮಚಂದ್ರಗೌಡ ಮುಂತಾದವರೊಂದಿಗೆ ವೆಂಕಯ್ಯ ಸಮಾಲೋಚನೆ ನಡೆಸಿದರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X