ಮತ್ತೆ ಪುಟಿದೆದ್ದ ವಾಟಾಳ್;ವಿಧಾನಸಭೆ ಚುನಾವಣೆಗೆ ಸಿದ್ಧತೆ ಆರಂಭ
ಮತ್ತೆ
ಪುಟಿದೆದ್ದ
ವಾಟಾಳ್;ವಿಧಾನಸಭೆ
ಚುನಾವಣೆಗೆ
ಸಿದ್ಧತೆ
ಆರಂಭ
ಕನ್ನಡಿಗರ
ಉದ್ಯೋಗ
ಕಸಿದುಕೊಳ್ಳುತ್ತಿರುವ
ವಲಸಿಗರು
-
ಕನ್ನಡಿಗರಿಗೆ
ನ್ಯಾಯ
ಒದಗಿಸಲು
ಆಗ್ರಹ
ಕರ್ನಾಟಕಕ್ಕೆ, ಅದರಲ್ಲಿಯೂ ಬೆಂಗಳೂರಿಗೆ ವಲಸೆ ಬರುತ್ತಿರುವ ಹೊರರಾಜ್ಯದ ನಿವಾಸಿಗಳ ಸಂಖ್ಯೆ ಹೆಚ್ಚುತ್ತಿದ್ದಂತೆಯೇ ಸ್ಥಳೀಯ ಕನ್ನಡಿಗರು ಉದ್ಯೋಗ ಅವಕಾಶಗಳಿಂದ ವಂಚಿತರಾಗುತ್ತಿದ್ದಾರೆ. ಇದರಿಂದ ಸ್ಥಳೀಯರಿಗೆ ನಿರಾಸೆ ಹೆಚ್ಚುತ್ತಿದೆ. ಈ ಭಾವನೆಯಿಂದ ರಾಜ್ಯಕ್ಕೆ ಒಳಿತಾಗುವುದಿಲ್ಲ ಎಂದು ಜೂ. 20ರ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಾಟಾಳ್ ನಾಗರಾಜ್ ಹೇಳಿದರು.
ಸ್ಥಳೀಯರು ರಾಜ್ಯದಲ್ಲೇ ಉದ್ಯೋಗ ಅವಕಾಶದಿಂ ವಂಚಿತರಾದ ನಂತರ ದೇಶದ ಬೇರೆ ಕಡೆಗಳಿಗೆ ಹೋಗುವುದಕ್ಕೆ ಸಾಧ್ಯವಾಗುತ್ತಿಲ್ಲ. ಸ್ಥಳೀಯ ನಿವಾಸಿಗಳಿಗೆ ಆಗುತ್ತಿರುವ ಅನ್ಯಾಯದತ್ತ ರಾಜ್ಯ ಸರಕಾರ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ವಾಟಾಳ್ ಆಗ್ರಹಿಸಿದರು.
ಕನ್ನಡಿಗರ ಹಿತಾಸಕ್ತಿ ರಕ್ಷಣೆಗಾಗಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದು, ಚುನಾವಣೆಯಲ್ಲಿ ಸಕ್ರಿಯವಾಗಿ ಭಾಗಿಯಾಗುವ ಉದ್ದೇಶದಿಂದ ಕನ್ನಡ ಪರ ಹಾಗೂ ರೈತರ ಸಂಘಟನೆಯಾಂದನ್ನು ಸ್ಥಾಪಿಸುವುದಾಗಿ ವಾಟಾಳ್ ನಾಗರಾಜ್ ಹೇಳಿದರು.
(ಪಿಟಿಐ)
ಮುಖಪುಟ / ವಾರ್ತೆಗಳು