ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೃಪಾಂಕ ಆಧಾರಿತ ನೌಕರರ ವಜಾ, ಮರುನೇಮಕದ ಅಭಯ

By Staff
|
Google Oneindia Kannada News

ಕೃಪಾಂಕ ಆಧಾರಿತ ನೌಕರರ ವಜಾ, ಮರುನೇಮಕದ ಅಭಯ
ನ್ಯಾಯಾಂಗ ನಿಂದನೆಯಿಂದ ಬಚಾವ್‌ ಆಗಲು ವಿಶೇಷ ನಿಯಮ ರಚನೆ

ಬೆಂಗಳೂರು : ಗ್ರಾಮೀಣ ಕೃಪಾಂಕ ಆಧಾರಿತ ನೇಮಕವನ್ನು ಸುಪ್ರೀಂ ಕೋರ್ಟ್‌ ಅನೂರ್ಜಿತಗೊಳಿಸಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರವು ಕೃಪಾಂಕ ಆಧಾರದ ಮೇಲೆ ನೇಮಕಗೊಂಡ ನೌಕರರನ್ನು ಕೆಲಸದಿಂದ ತೆಗೆದು ನಂತರ ಅವರಿಗೆ ಬೇರೆ ಉದ್ಯೋಗ ಕಲ್ಪಿಸುವುದಾಗಿ ಪ್ರಕಟಿಸಿದೆ.

ಗ್ರಾಮೀಣ ಕೃಪಾಂಕ ಕುರಿತು ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪು 13,500 ನೌಕರರಿಗೆ ಅನ್ವಯವಾಗಲಿದೆ. ಆದರೆ ನೇಮಕಾತಿಯನ್ನು ಮರುಪರಿಷ್ಕರಿಸಿದ ನಂತರವೂ 9,500 ನೌಕರರು ಮೆರಿಟ್‌ ಮೇಲೆ ಕೆಲಸಕ್ಕೆ ಆಯ್ಕೆಯಾಗುತ್ತಾರೆ.

ಉಳಿದ ನಾಲ್ಕು ಸಾವಿರ ನೌಕರರಿಗೋಸ್ಕರ ವಿಶೇಷ ನಿಯಮಗಳನ್ನು ರೂಪಿಸಿ ಸರಕಾರ ಉದ್ಯೋಗ ಕಲ್ಪಿಸಲಿದೆ. ಈ ನಾಲ್ಕು ಸಾವಿರ ಮಂದಿಯನ್ನು ಒಂದು ದಿನದ ಮಟ್ಟಿಗೆ ಕೆಲಸದಿಂದ ವಿಮುಕ್ತಿಗೊಳಿಸಿ, ನಂತರ ಅವರಿಗೆ ಉದ್ಯೋಗ ಕಲ್ಪಿಸಲು ಸರ್ಕಾರ ಉದ್ದೇಶಿಸಿದೆ.

ಗುರುವಾರ ಸಂಜೆ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ವಾರ್ತ ಸಚಿವ ಕಾಗೋಡು ತಿಮ್ಮಪ್ಪ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಸರಕಾರದ ಈ ಕ್ರಮದಿಂದ ನೌಕರರ ಹಿತಾಸಕ್ತಿಯ ರಕ್ಷಿಸಿದಂತಾಗುತ್ತದೆ ಹಾಗೂ ನ್ಯಾಯಾಂಗ ನಿಂದನೆ ಆರೋಪದಿಂದ ಪಾರಾದಂತಾಗುತ್ತದೆ ಎಂದು ತಿಮ್ಮಪ್ಪ ಹೇಳಿದರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X