ಶಿವಮೊಗ್ಗೆಯಲ್ಲಿ ವೇಶ್ಯಾವಾಟಿಕೆ ಜಾಲ ಬಯಲು, ಇಬ್ಬರ ಬಂಧನ
ಶಿವಮೊಗ್ಗೆಯಲ್ಲಿ
ವೇಶ್ಯಾವಾಟಿಕೆ
ಜಾಲ
ಬಯಲು,
ಇಬ್ಬರ
ಬಂಧನ
ಜಾಲದ
ತೆಕ್ಕೆಯಿಂದ
ಮುಕ್ತರಾದ
13
ಯುವತಿಯರ
ಪೈಕಿ
ಮೂವರಿಗೆ
ಏಡ್ಸ್
ಮೈಸೂರಿನ ಸ್ವಯಂ ಸೇವಾ ಸಂಸ್ಥೆ ‘ಒಡನಾಡಿ’ಯ ಪರಶುರಾಮ್ ಮತ್ತು ಸ್ಟ್ಯಾನ್ಲಿ ಅವರ ಪ್ರಯತ್ನದಿಂದ ಈ ಜಾಲಕ್ಕೆ ಸಿಲುಕಿ, ವೇಶ್ಯಾವಾಟಿಕೆಗೆ ಬಿದ್ದಿದ್ದ 13 ಯುವತಿಯರನ್ನು ಅವರವರ ಕುಟುಂಬಕ್ಕೆ ತಲುಪಿಸಲಾಗಿದೆ. ಆದರೆ ಈಗಾಗಲೇ 100ಕ್ಕೂ ಹೆಚ್ಚು ಯುವತಿಯರ ಜೀವನ ಜಾಲದ ಕಾರಣ ಹಾಳಾಗಿರುವ ಶಂಕೆಯಿದೆ.
ಭದ್ರಾವತಿಯ ಯಾಸ್ಮಿನ್ (ಹೆಸರು ಬದಲಿಸಲಾಗಿದೆ) ಎಂಬಾಕೆ ಪೊಲೀಸರಿಗೆ ದೂರು ಕೊಡಲು ಮುಂದೆ ಬಂದ ಕಾರಣ ಜಾಲವನ್ನು ಪತ್ತೆ ಮಾಡಲು ಸಾಧ್ಯವಾಯಿತು. ಶಿವಮೊಗ್ಗ ಹಾಗೂ- ಭದ್ರಾವತಿಯ 11, ಚಿತ್ರದುರ್ಗದ ಒಬ್ಬಾಕೆ, ಬೆಂಗಳೂರಿನ ಮೂವರು ಹಾಗೂ ತಮಿಳುನಾಡಿನ ಒಬ್ಬಾಕೆಯನ್ನು ವೇಶ್ಯಾವಾಟಿಕೆಯಿಂದ ಬಿಡಿಸಲಾಗಿದೆ.
ದುಬೈಗೆ ಕೆಲಸಕ್ಕಾಗಿ ಹೋದ ಯಾಸ್ಮಿನ್ ತನ್ನಿಬ್ಬರು ಹೆಣ್ಣು ಮಕ್ಕಳನ್ನು ನೋಡಿಕೊಳ್ಳುವಂತೆ ಹಸೀನಾ ಹತ್ತಿರ ಬಿಟ್ಟು ಹೋಗಿದ್ದರು. ಈ ಅವಕಾಶವನ್ನು ಉಪಯೋಗಿಸಿಕೊಂಡ ಹಸೀನಾ 16 ವರ್ಷದ ಒಬ್ಬ ಹೆಣ್ಣು ಮಗಳನ್ನು ದೆಹಲಿಯಲ್ಲಿ ವೇಶ್ಯಾವಾಟಿಕೆಗೆ ತಳ್ಳಿದಳು. ಮಗಳ ಜೊತೆ ಮಾತಾಡಲು ಯಾಸ್ಮಿನ್ ಫೋನ್ ಮಾಡಿದಾಗಲೆಲ್ಲಾ , ಹಸೀನಾ ಏನಾದರೂ ನೆವ ಹೇಳುತ್ತಿದ್ದಳು. ಕೊನೆಗೆ ದೆಹಲಿಯ ವೇಶ್ಯಾವಾಟಿಕೆಯ ಜಾಗದಿಂದಲೇ ಯಾಸ್ಮಿನ್ ಮಗಳು ಅಮ್ಮನ ಜೊತೆ ಮಾತಾಡಿ, ಬೇಗ ಬಾ ಎಂದಷ್ಟೇ ಹೇಳಿದಳು.
ಆತಂಕಗೊಂಡ ಯಾಸ್ಮಿನ್ ಬಂದು, ಹಸೀನಾಳನ್ನು ಪೀಡಿಸಿದಾಗ ನಡೆದ ಸಂಗತಿ ಗೊತ್ತಾಯಿತು. ದೆಹಲಿಯಲ್ಲಿ ಜಾಲಾಡಿ, ಗೊತ್ತಿರುವ ಎಲ್ಲರನ್ನೂ ಸಂಪರ್ಕಿಸಿದ ನಂತರ ತನ್ನ ಮಗಳು ‘ನಾರಿ ನಿಕೇತನ್’ ರಿಮ್ಯಾಂಡ್ ಹೋಮ್ನಲ್ಲಿರುವುದು ಪತ್ತೆಯಾಯಿತು. ಆಕೆಯನ್ನು ಅಲ್ಲಿಂದ ಬಿಡಿಸಿ ತರಲು ‘ಒಡನಾಡಿ’ ಸಂಸ್ಥೆ ಸಹಾಯ ಮಾಡಿತು. ಪ್ರಕರಣದ ಆಳ ಗೊತ್ತಾದಾಗ ಪೊಲೀಸರೇ ಬೇಸ್ತು ಬಿದ್ದರು. ಸಾಕಷ್ಟು ಯುವತಿಯರಿಗೆ ಹಸೀನಾ ಹಾಗೂ ಹಾಫೀಜ್ ಕೆಲಸದ ಆಮಿಷ ತೋರಿಸಿ, ಮುಂಬೈ ಹಾಗೂ ದೆಹಲಿಯ ವೇಶ್ಯಾವಾಟಿಕೆಗೆ ತಳ್ಳಿದ್ದರು.
ಜಾಲದ ತೆಕ್ಕೆಯಿಂದ ಮುಕ್ತರಾಗಿರುವ 13 ಯುವತಿಯರ ಪೈಕಿ ಮೂವರಿಗೆ ಏಡ್ಸ್ ಮಾರಿ ತಗುಲಿದೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು