ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎದೆತುಂಬಿ ಬರೆದ ಕವಿಯ ಹಾಡುಮಾತು

By Staff
|
Google Oneindia Kannada News

ಎದೆತುಂಬಿ ಬರೆದ ಕವಿಯ ಹಾಡುಮಾತು
ಮನೆಮನೆ ಬಾಗಿಲಿಗೆ ಸುಗಮ ಸಂಗೀತ ತಲುಪಿಸುತ್ತಿರುವ ‘ಉಪಾಸನಾ’ದ ನಾಲ್ಕನೇ ಹುಟ್ಟುಹಬ್ಬದಲ್ಲಿ ಜಿಎಸ್ಸೆಸ್‌ ಆನಂದ ತುಂದಿಲರಾಗಿದ್ದರು. ಅವರ ಜೊತೆಯಲ್ಲಿ ಕವಿಗಳ ದಂಡೇ ಇತ್ತು. ಅದೊಂದು ಬಹುಮುಖಿ ಸಮಾರಂಭ.

*ಮುಕುಂದ ತೇಜಸ್ವಿ

Upasana felicitating G.S.Shivarudrappa
The Poet Friends together : La.Na.Bhattaru, Siddhalinga Pattanashetty, Doddarange Gowda and B.R.Lakshmana Rao
Kavi Namana by Upasana
ಅದು ನಾಲ್ಕರ ಮಗು. ಹುಟ್ಟಿದ ನಾಲ್ಕು ವರ್ಷದಲ್ಲಿ ಎಷ್ಟೋ ಸಾಧನೆ ಮಾಡಿದೆ. ಅದರ ಹುಟ್ಟುಹಬ್ಬ ಶನಿವಾರ ನಗರದ ಡಾ ಹೆಚ್‌.ಎನ್‌. ಕಲಾಕ್ಷೇತ್ರದಲ್ಲಿ . ಅದನ್ನು ಹರಸಲು ಅನೇಕ ಕವಿಗಳು, ಗಾಯಕರು ಬಂದಿದ್ದರು. ಶುದ್ಧ ಸಂಗೀತವೇ ಮರೆತುಹೋಗಿರುವ ಈ ಸಮಯದಲ್ಲಿ ತನ್ನ ಅನೇಕ ಯೋಜನೆಗಳಿಂದ ಕರ್ನಾಟಕದ ಮನೆ ಮನೆಗೂ ಶುದ್ಧ ಸಂಗೀತದ ಸವಿ ಉಣಿಸುತ್ತಿರುವ ಹರಿಸುತ್ತಿರುವ ‘ಉಪಾಸನಾ’ ಸಂಗೀತ ಶಾಲೆಯ ಹುಟ್ಟುಹಬ್ಬವದು.

ಕವಿ ವಂದನೆ ಸ್ವೀಕರಿಸಿ ಮಾತನಾಡಿದ ಹಿರಿಯ ಕವಿ ಡಾ. ಜಿ.ಎಸ್‌. ಶಿವರುದ್ರಪ್ಪ , ಸುಗಮ ಸಂಗೀತ ಬೆಳವಣಿಗೆಯ ಬಗ್ಗೆ ಆತಂಕ ಪಡುವ ಕಾಲ ಮುಗಿದು ಸುಗ್ಗಿಯ ಕಾಲ ಆರಂಭವಾಗಿದೆ. ಜನರಿಂದ ಆಂಗೀಕರಿಸಲಾಗಿರುವ ಭಾವಗೀತೆಗಳ ಗಾಯನ ಸಂಭ್ರಮದ ತುಟ್ಟ ತುದಿಯಲ್ಲಿದೆ, ಸುಗಮ ಸಂಗೀತ ಕಲಾವಿದರು ಕವಿತೆಯನ್ನು ಹಾಡಾಗಿಸಿ ಜನರ ಮನ ತಲುಪಿಸುವ ಕೆಲಸ ಚೆನ್ನಾಗಿ ಮಾಡಿದ್ದಾರೆ ಎಂದು ಪ್ರಶಂಸಿಸಿದರು.

ಇತ್ತೀಚೆಗೆ ಮಂಡ್ಯದಲ್ಲಿ ಎರಡು ದಿನಗಳ ಕಾಲ ನಡೆದ ಸುಗಮ ಸಂಗೀತ ಸಮ್ಮೇಳನದಲ್ಲಿ ಸಾವಿರಾರು ಜನರು ಭಾಗವಹಿಸಿದ್ದರು. ಮೊನ್ನೆ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಹೆಸರಾಂತ ಗಾಯಕ ಅಶ್ವತ್ಥ ಅವರ ಕಾರ್ಯಕ್ರಮದಲ್ಲೂ ಕಿಕ್ಕಿರಿದು ಜನ ನೆರೆದಿದ್ದರು. ಪ್ರವಾಹೋಪಾದಿಯಲ್ಲಿ ಹರಿಯುತ್ತಿರುವ ಸುಗಮ ಸಂಗೀತ ಕ್ಷೇತ್ರವನ್ನು ಉಪಾಸನಾ ಮತ್ತಿತರ ಸಂಸ್ಥೆಗಳು ಅಣೆಕಟ್ಟುಗಳಂತೆ ಕಾರ್ಯನಿರ್ವಹಿಸುವ ಮೂಲಕ ವಿವಿಧಡೆಗೆ ಹಾಯಿಸುತ್ತವೆ. ಇದೆಲ್ಲವನ್ನು ನೋಡಿದರೆ ಸುಗಮ ಸಂಗೀತ ಕ್ಷೇತ್ರಕ್ಕೆ ಒಳ್ಳೆಯ ಭವಿಷ್ಯವಿದೆ ಎಂದು ಅವರು ಆಶಾಭಾವನೆ ವ್ಯಕ್ತಪಡಿಸಿದರು.

ಕೇಂದ್ರ ಸಚಿವ ಅನಂತಕುಮಾರ್‌ ಪತ್ನಿ ತೇಜಸ್ವಿನಿ ‘ಲಿಪಿ’ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಿದರು. ಶಿವಮೊಗ್ಗ ಸುಬ್ಬಣ್ಣ ‘ಪ್ರೇಮದ ಚಿಟಿಕೆ’ ಎಂಬ ಭಾವಗೀತೆಗಳ ಧ್ವನಿಸುರುಳಿಯನ್ನು ಬಿಡುಗಡೆ ಮಾಡಿದರು. ಕವಿಗಳಾದ ಡಾ. ಸುಮತೀಂದ್ರ ನಾಡಿಗ್‌, ಡಾ. ಎನ್‌.ಎಸ್‌. ಲಕ್ಷ್ಮೀನಾರಾಯಣಭಟ್ಟ, ಡಾ. ಹೆಚ್‌.ಎಸ್‌. ವೆಂಕಟೇಶಮೂರ್ತಿ, ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ, ದೊಡ್ಡರಂಗೇಗೌಡ, ಬಿ.ಆರ್‌. ಲಕ್ಷ್ಮಣರಾವ್‌ ಕವಿವಂದನೆ ಸ್ವೀಕರಿಸಿದರು. ಜಿ.ವಿ. ಅತ್ರಿಯವರ ನೆನಪಿಗಾಗಿ ಸ್ಥಾಪಿಸಿರುವ ‘ಉಪಾಸನಾ ಪ್ರಶಸ್ತಿ’ಯನ್ನು ಯುವ ಗಾಯಕ ಪಂಚಮ ಹಳಿಬಂಡಿ ಆವರಿಗೆ ಪ್ರದಾನ ಮಾಡಲಾಯಿತು. ಉಪಾಸನಾ ಸಂಸ್ಥೆಯ ಜೆ. ಮೋಹನ್‌ ಸ್ವಾಗತಿಸಿದರು.

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X