ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂಗಾರ ಮಳೆಯ ಸಂಭ್ರಮದ ಬೆನ್ನಿಗೆ ಸೂತಕದ ಸುದ್ದಿಗಳು

By Staff
|
Google Oneindia Kannada News

ಮುಂಗಾರ ಮಳೆಯ ಸಂಭ್ರಮದ ಬೆನ್ನಿಗೆ ಸೂತಕದ ಸುದ್ದಿಗಳು
ಕರಾವಳಿಯಲ್ಲಿ ಮಳೆಗಾಳಿ, ಸಿಡಿಲು ಹೊಡೆತಕ್ಕೆ ಐವರು ಬಲಿ

ಕುಂದಾಪುರ : ಮುಂಗಾರು ಮಳೆ ಕರಾವಳಿ ಜಿಲ್ಲೆಗಳನ್ನು ಪ್ರವೇಶಿಸಿದ ಹಿತವಾದ ಸುದ್ದಿಯ ಬೆನ್ನಿಗೇ, ಸಾವುನೋವಿನ ಸೂತಕದ ಸುದ್ದಿಗಳೂ ಬರತೊಡಗಿವೆ. ಉಡುಪಿ ಜಿಲ್ಲೆಯ ಬೈಂದೂರು ಠಾಣಾ ವ್ಯಾಪ್ತಿಯ ಶಿರೂರು ಮತ್ತು ಕೋಟ ವ್ಯಾಪ್ತಿಯಲ್ಲಿ ನಾಲ್ವರು ಸಿಡಿಲಿಗೆ ಬಲಿಯಾಗಿದ್ದಾರೆ.

ಶಿರೂರಿನ ನೀರಗದ್ದೆ ಆಚಾರಕೇರಿ ಎಂಬಲ್ಲಿನ ಫಾತಿಮಾ (39), ನಾಗರಾಜ (27) ಎಂಬುವರು ಸಿಡಿಲಿಗೆ ಗುರುವಾರ (ಜೂನ್‌12) ಬಲಿಯಾದರು. ಸಾವಿಗೀಡಾದ ಭಟ್ಕಳದ ವ್ಯಕ್ತಿಯ ಹೆಸರು ತಿಳಿದುಬಂದಿಲ್ಲ . ಸಾಸ್ತಾನದ ಕೋಡಿತಲೆಯಲ್ಲಿ ನಾಡದೋಣಿಯಲ್ಲಿ ಮೀನುಗಾರಿಕೆಗೆ ಹೊರಟಿದ್ದ ಶೀನ ಖಾರ್ವಿ (58) ಎನ್ನುವ ವ್ಯಕ್ತಿ ಕೂಡ ಸಿಡಿಲ ಹೊಡೆತದಿಂದ ಸಾವನ್ನಪ್ಪಿದ್ದಾನೆ.

ತಿ. ನರಸೀಪುರ ವರದಿ : ಇಲ್ಲಿಗೆ ಸಮೀಪದ ಮೂಗೂರು ಗ್ರಾಮದ ನಿವಾಸಿ ತಂಗಮ್ಮ (60) ಎನ್ನುವ ಮಹಿಳೆ ಬಿರುಗಾಳಿ ಮಳೆಯಿಂದ ಗುಡಿಸಲು ಕುಸಿದು ಬಿದ್ದು ಮೃತಳಾಗಿದ್ದಾಳೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X