ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾ.ಹಿರಣ್ಣಯ್ಯನವರಿಗೆ ಕೊಳದಮಠದ ಅಲ್ಲಮ ಶ್ರೀ ಪ್ರಶಸ್ತಿ

By Staff
|
Google Oneindia Kannada News

ಮಾ.ಹಿರಣ್ಣಯ್ಯನವರಿಗೆ ಕೊಳದಮಠದ ಅಲ್ಲಮ ಶ್ರೀ ಪ್ರಶಸ್ತಿ
ಜೂನ್‌ 14ರ ಶನಿವಾರದಂದು ಪ್ರಶಸ್ತಿ ಪ್ರದಾನ

ಬೆಂಗಳೂರು : ತಮ್ಮ ಚುರುಕು ನಾಲಗೆಯ ಮೂಲಕ ಕನ್ನಡ ರಸಿಕರ ಮನಗೆದ್ದಿರುವ ರಂಗ ಕಲಾವಿದ ಮಾಸ್ಟರ್‌ ಹಿರಣ್ಣಯ್ಯ ಅವರು ಕೊಳದಮಠ ಮಹಾಸಂಸ್ಥಾನದ ಅಲ್ಲಮ ಶ್ರೀ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ಅಲ್ಲಮ ಶ್ರೀ ಪ್ರಶಸ್ತಿಯನ್ನು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆಗೈದ ಸಾಧಕರಿಗೆ ಕೊಳದ ಮಠ ಸಂಸ್ಥಾನ ನೀಡುವುದು. ಹತ್ತು ಸಾವಿರ ರುಪಾಯಿ ನಗದು, ಸ್ಮರಣ ಫಲಕ, ಬಿನ್ನವತ್ತಳೆ ಹಾಗೂ ಸನ್ಮಾನವನ್ನು ಅಲ್ಲಮ ಶ್ರೀ ಪ್ರಶಸ್ತಿ ಒಳಗೊಂಡಿದೆ.

ಜೂನ್‌ 14ರ ಶನಿವಾರ ನಡೆಯುವ ಕಾರ್ಯಕ್ರಮದಲ್ಲಿ ಹಿರಣ್ಣಯ್ಯನವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಕೊಳದಮಠದ ಡಾ. ಶಾಂತವೀರ ಮಹಾಸ್ವಾಮಿ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X