ರಾಜ್ಯಾದ್ಯಂತ ವಾಣಿಜ್ಯ ವಹಿವಾಟು ಬಂದ್, ಕೈಗಾರಿಕೆಗಳಿಗೆ ರಜೆ
ರಾಜ್ಯಾದ್ಯಂತ
ವಾಣಿಜ್ಯ
ವಹಿವಾಟು
ಬಂದ್,
ಕೈಗಾರಿಕೆಗಳಿಗೆ
ರಜೆ
ಒಂದು
ಕೋಟಿ
ರುಪಾಯಿ
ವಹಿವಾಟಿಗೆ
ಅಡ್ಡಿ
ಬೆಂಗಳೂರು, ಮೈಸೂರು, ಹುಬ್ಬಳ್ಳಿ- ಧಾರವಾಡ, ಮಂಗಳೂರು, ಗುಲ್ಬರ್ಗಾ ಸೇರಿದಂತೆ ರಾಜ್ಯದ ಪ್ರಮುಖ ಪಟ್ಟಣಗಳಲ್ಲಿ ವಾಣಿಜ್ಯ ಚಟುವಟಿಕೆಗಳು ಹೆಚ್ಚೂಕಡಿಮೆ ಸಂಪೂರ್ಣವಾಗಿ ಸ್ಥಗಿತಗೊಂಡಿದ್ದವು. ಎಪಿಎಂಸಿಗಳು, ಸಣ್ಣ ಕೈಗಾರಿಕೆಗಳು, ಆಭರಣ ವರ್ತಕರು ಹಾಗೂ ಅಂಗಡಿ ವರ್ತಕರು ತಂತಮ್ಮ ಮಳಿಗೆ-ಅಂಗಡಿ ಮುಂಗಟ್ಟುಗಳನ್ನು ಮುಚ್ಚುವ ಮೂಲಕ ಪ್ರತಿಭಟನೆಯಲ್ಲಿ ಭಾಗವಹಿಸಿದರು.
ವಾಣಿಜ್ಯ ಹಾಗೂ ಕೈಗಾರಿಕಾ ಮುಷ್ಕರದಿಂದ ಹಾಲು, ತರಕಾರಿ, ಔಷಧಿ ಇತ್ಯಾದಿ ಅವಶ್ಯಕ ವಸ್ತುಗಳಿಗೆ ವಿನಾಯಿತಿ ನೀಡಲಾಗಿತ್ತು . ್ಫಸರ್ಕಾರದ ತೆರಿಗೆ ನೀತಿಯನ್ನು ವಿರೋಧಿಸಿ ಜೂನ್ 11ರಂದು ಒಂದು ದಿನದ ಬಂದ್ಗೆ ಕೈಗಾರಿಕಾ ಮಹಾಸಂಸ್ಥೆ ಹಾಗೂ ಅದರ ಬೆಂಬಲಿತ ಸಂಘಟನೆಗಳು ಕರೆ ನೀಡಿದ್ದವು.
ರಾಜ್ಯ ಸರ್ಕಾರದ ಮಾರಾಟ ತೆರಿಗೆ ತಿದ್ದುಪಡಿ ಸುಗ್ರೀವಾಜ್ಞೆ ಜೂನ್ 1ರಿಂದ ಜಾರಿಗೆ ಬಂದಿದ್ದು ವರ್ತಕರ ಪಾಲಿಗೆ ಕಹಿ ಗುಳಿಗೆಯಾಗಿ ಪರಿಣಮಿಸಿದೆ. ಈ ಸುಗ್ರೀವಾಜ್ಞೆಯನ್ನು ತಕ್ಷಣದಿಂದಲೇ ವಾಪಸ್ಸು ಪಡೆಯಬೇಕು ಎಂದು ಎಫ್ಕೆಸಿಸಿಐ ಒತ್ತಾಯಿಸಿದೆ.
(ಇನ್ಫೋ ವಾರ್ತೆ)
ವಾರ್ತಾ
ಸಂಚಯ
ಜೂನ್
11ರಂದು
ರಾಜ್ಯಾದ್ಯಂತ
ವ್ಯಾಪಾರ
ವಹಿವಾಟು
ಬಂದ್
ಮುಖಪುಟ / ವಾರ್ತೆಗಳು