ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯಾದ್ಯಂತ ವಾಣಿಜ್ಯ ವಹಿವಾಟು ಬಂದ್‌, ಕೈಗಾರಿಕೆಗಳಿಗೆ ರಜೆ

By Staff
|
Google Oneindia Kannada News

ರಾಜ್ಯಾದ್ಯಂತ ವಾಣಿಜ್ಯ ವಹಿವಾಟು ಬಂದ್‌, ಕೈಗಾರಿಕೆಗಳಿಗೆ ರಜೆ
ಒಂದು ಕೋಟಿ ರುಪಾಯಿ ವಹಿವಾಟಿಗೆ ಅಡ್ಡಿ

ಬೆಂಗಳೂರು : ಸರಕುಗಳ ಮೇಲಿನ ಮಾರಾಟ ತೆರಿಗೆ ಕಾಯ್ದೆಯ ಬದಲಾವಣೆಯನ್ನು ವಿರೋಧಿಸಿ ರಾಜ್ಯಾದ್ಯಂತ ವರ್ತಕರು ನಡೆಸಿದ ವಾಣಿಜ್ಯ ಹಾಗೂ ಕೈಗಾರಿಕಾ ಮುಷ್ಕರ ಸಂಪೂರ್ಣ ಯಶಸ್ವಿಯಾಗಿದ್ದು , ಸುಮಾರು 1 ಸಾವಿರ ಕೋಟಿ ರುಪಾಯಿ ವಹಿವಾಟಿಗೆ ಅಡಚಣೆ ಉಂಟಾಯಿತು.

ಬೆಂಗಳೂರು, ಮೈಸೂರು, ಹುಬ್ಬಳ್ಳಿ- ಧಾರವಾಡ, ಮಂಗಳೂರು, ಗುಲ್ಬರ್ಗಾ ಸೇರಿದಂತೆ ರಾಜ್ಯದ ಪ್ರಮುಖ ಪಟ್ಟಣಗಳಲ್ಲಿ ವಾಣಿಜ್ಯ ಚಟುವಟಿಕೆಗಳು ಹೆಚ್ಚೂಕಡಿಮೆ ಸಂಪೂರ್ಣವಾಗಿ ಸ್ಥಗಿತಗೊಂಡಿದ್ದವು. ಎಪಿಎಂಸಿಗಳು, ಸಣ್ಣ ಕೈಗಾರಿಕೆಗಳು, ಆಭರಣ ವರ್ತಕರು ಹಾಗೂ ಅಂಗಡಿ ವರ್ತಕರು ತಂತಮ್ಮ ಮಳಿಗೆ-ಅಂಗಡಿ ಮುಂಗಟ್ಟುಗಳನ್ನು ಮುಚ್ಚುವ ಮೂಲಕ ಪ್ರತಿಭಟನೆಯಲ್ಲಿ ಭಾಗವಹಿಸಿದರು.

ವಾಣಿಜ್ಯ ಹಾಗೂ ಕೈಗಾರಿಕಾ ಮುಷ್ಕರದಿಂದ ಹಾಲು, ತರಕಾರಿ, ಔಷಧಿ ಇತ್ಯಾದಿ ಅವಶ್ಯಕ ವಸ್ತುಗಳಿಗೆ ವಿನಾಯಿತಿ ನೀಡಲಾಗಿತ್ತು . ್ಫಸರ್ಕಾರದ ತೆರಿಗೆ ನೀತಿಯನ್ನು ವಿರೋಧಿಸಿ ಜೂನ್‌ 11ರಂದು ಒಂದು ದಿನದ ಬಂದ್‌ಗೆ ಕೈಗಾರಿಕಾ ಮಹಾಸಂಸ್ಥೆ ಹಾಗೂ ಅದರ ಬೆಂಬಲಿತ ಸಂಘಟನೆಗಳು ಕರೆ ನೀಡಿದ್ದವು.

ರಾಜ್ಯ ಸರ್ಕಾರದ ಮಾರಾಟ ತೆರಿಗೆ ತಿದ್ದುಪಡಿ ಸುಗ್ರೀವಾಜ್ಞೆ ಜೂನ್‌ 1ರಿಂದ ಜಾರಿಗೆ ಬಂದಿದ್ದು ವರ್ತಕರ ಪಾಲಿಗೆ ಕಹಿ ಗುಳಿಗೆಯಾಗಿ ಪರಿಣಮಿಸಿದೆ. ಈ ಸುಗ್ರೀವಾಜ್ಞೆಯನ್ನು ತಕ್ಷಣದಿಂದಲೇ ವಾಪಸ್ಸು ಪಡೆಯಬೇಕು ಎಂದು ಎಫ್‌ಕೆಸಿಸಿಐ ಒತ್ತಾಯಿಸಿದೆ.

(ಇನ್ಫೋ ವಾರ್ತೆ)

ವಾರ್ತಾ ಸಂಚಯ
ಜೂನ್‌ 11ರಂದು ರಾಜ್ಯಾದ್ಯಂತ ವ್ಯಾಪಾರ ವಹಿವಾಟು ಬಂದ್‌

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X