ಬಡತನದ ವಿರುದ್ಧ ಯುದ್ಧ ಸಾರಲು ವಿಜ್ಞಾನಿಗಳಿಗೆ ಕಲಾಂ ಕರೆ
ಬಡತನದ
ವಿರುದ್ಧ
ಯುದ್ಧ
ಸಾರಲು
ವಿಜ್ಞಾನಿಗಳಿಗೆ
ಕಲಾಂ
ಕರೆ
ಕೇಂದ್ರ
ಸರ್ಕಾರದ
ನೀತಿಯಿಂದಾಗಿ
ವಿಜ್ಞಾನ-
ತಂತ್ರಜ್ಞಾನ
ಕ್ಷೇತ್ರಕ್ಕೆ
ಹೆಚ್ಚಿನ
ಸ್ವಾತಂತ್ರ್ಯ
ಬೆಂಗಳೂರಿನ ಜಕ್ಕೂರಿನಲ್ಲಿರುವ ಜವಾಹರ್ಲಾಲ್ ನೆಹರು ಕೇಂದ್ರದ ಆಧುನಿಕ ವೈಜ್ಞಾನಿಕ ಸಂಶೋಧನಾ ಕೇಂದ್ರದ ವಿಜ್ಞಾನಿಗಳು ಹಾಗೂ ಸಿಬ್ಬಂದಿಯನ್ನು ಉದ್ದೇಶಿಸಿ ಕಲಾಂ ಶನಿವಾರ (ಜೂ.7) ಮಾತನಾಡಿದರು. 260 ಮಿಲಿಯನ್ ಮಂದಿ ಬಡತನರ ರೇಖೆಯ ಕೆಳಗೆ ಜೀವಿಸುತ್ತಿದ್ದು , ಬಡತನ ನಮ್ಮ ಶತ್ರುವಾಗಿದೆ ಎಂದು ಕಲಾಂ ಬಣ್ಣಿಸಿದರು.
ಜೈವಿಕ ವಿಜ್ಞಾನ, ನ್ಯಾನೊ ತಂತ್ರಜ್ಞಾನ ಹಾಗೂ ಇನ್ನಿತರ ಕ್ಷೇತ್ರಗಳ ವಿಜ್ಞಾನಿಗಳು ತಮ್ಮ ಪ್ರಯೋಗಾಲಯಗಳಲ್ಲಿ ಬಡತನದ ವಿರುದ್ಧ ಹೋರಾಡಬೇಕು. ಈ ವಿಜ್ಞಾನಿಗಳ ಸಂಶೋಧನೆಗಳು ದೇಶಕ್ಕೆ ನೆಮ್ಮದಿ ತರಲಿವೆ. ಪ್ರಸಕ್ತ ವರ್ಷದ ಪ್ರಾರಂಭದಲ್ಲಿ ಕೇಂದ್ರ ಸರ್ಕಾರ ಪ್ರಕಟಿಸಿದ ವಿಜ್ಞಾನ ಮತ್ತು ತಂತ್ರಜ್ಞಾನ ನೀತಿ, ವಿಜ್ಞಾನ- ತಂತ್ರಜ್ಞಾನಕ್ಕೆ ಹೆಚ್ಚಿನ ಸ್ವಾತಂತ್ರ್ಯ ಕಲ್ಪಿಸಿದೆ ಎಂದರು.
ವೈಫಲ್ಯಗಳಿಂದಾಗಿ ಎದೆಗುಂದುವುದು ಬೇಡ. ಕೆಲವು ಬಾರಿ ಸಂಶೋಧನೆಯ ಭಾಗವಾಗಿ ವೈಫಲ್ಯಗಳು ಸಂಭವಿಸುತ್ತವೆ ಎಂದು ರಾಷ್ಟ್ರಪತಿ ಕಲಾಂ ವಿಜ್ಞಾನಿಗಳಿಗೆ ಕಿವಿಮಾತು ಹೇಳಿದರು. ರಾಜ್ಯಪಾಲ ಟಿ.ಎನ್. ಚತುರ್ವೇದಿ ಹಾಗೂ ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ಕಾರ್ಯಕ್ರಮದಲ್ಲಿ ಹಾಜರಿದ್ದರು.
(ಪಿಟಿಐ)
ಮುಖಪುಟ / ವಾರ್ತೆಗಳು