ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಡತನದ ವಿರುದ್ಧ ಯುದ್ಧ ಸಾರಲು ವಿಜ್ಞಾನಿಗಳಿಗೆ ಕಲಾಂ ಕರೆ

By Staff
|
Google Oneindia Kannada News

ಬಡತನದ ವಿರುದ್ಧ ಯುದ್ಧ ಸಾರಲು ವಿಜ್ಞಾನಿಗಳಿಗೆ ಕಲಾಂ ಕರೆ
ಕೇಂದ್ರ ಸರ್ಕಾರದ ನೀತಿಯಿಂದಾಗಿ ವಿಜ್ಞಾನ- ತಂತ್ರಜ್ಞಾನ ಕ್ಷೇತ್ರಕ್ಕೆ ಹೆಚ್ಚಿನ ಸ್ವಾತಂತ್ರ್ಯ

ಬೆಂಗಳೂರು : ಬಡತನ ದೇಶದ ಶತ್ರುವಾಗಿದ್ದು , ವಿಜ್ಞಾನಿಗಳು ಹಾಗೂ ಯುವ ಸಂಶೋಧಕರು ತಂತಮ್ಮ ಪ್ರಯೋಗಾಲಯಗಳಲ್ಲಿ ಸಂಶೋಧನೆಗಳ ಮೂಲಕ ಬಡತನದ ವಿರುದ್ಧ ಹೋರಾಡಬೇಕು ಎಂದು ರಾಷ್ಟ್ರಪತಿ ಎಪಿಜೆ ಅಬ್ದುಲ್‌ ಕಲಾಂ ಕರೆ ನೀಡಿದರು.

ಬೆಂಗಳೂರಿನ ಜಕ್ಕೂರಿನಲ್ಲಿರುವ ಜವಾಹರ್‌ಲಾಲ್‌ ನೆಹರು ಕೇಂದ್ರದ ಆಧುನಿಕ ವೈಜ್ಞಾನಿಕ ಸಂಶೋಧನಾ ಕೇಂದ್ರದ ವಿಜ್ಞಾನಿಗಳು ಹಾಗೂ ಸಿಬ್ಬಂದಿಯನ್ನು ಉದ್ದೇಶಿಸಿ ಕಲಾಂ ಶನಿವಾರ (ಜೂ.7) ಮಾತನಾಡಿದರು. 260 ಮಿಲಿಯನ್‌ ಮಂದಿ ಬಡತನರ ರೇಖೆಯ ಕೆಳಗೆ ಜೀವಿಸುತ್ತಿದ್ದು , ಬಡತನ ನಮ್ಮ ಶತ್ರುವಾಗಿದೆ ಎಂದು ಕಲಾಂ ಬಣ್ಣಿಸಿದರು.

ಜೈವಿಕ ವಿಜ್ಞಾನ, ನ್ಯಾನೊ ತಂತ್ರಜ್ಞಾನ ಹಾಗೂ ಇನ್ನಿತರ ಕ್ಷೇತ್ರಗಳ ವಿಜ್ಞಾನಿಗಳು ತಮ್ಮ ಪ್ರಯೋಗಾಲಯಗಳಲ್ಲಿ ಬಡತನದ ವಿರುದ್ಧ ಹೋರಾಡಬೇಕು. ಈ ವಿಜ್ಞಾನಿಗಳ ಸಂಶೋಧನೆಗಳು ದೇಶಕ್ಕೆ ನೆಮ್ಮದಿ ತರಲಿವೆ. ಪ್ರಸಕ್ತ ವರ್ಷದ ಪ್ರಾರಂಭದಲ್ಲಿ ಕೇಂದ್ರ ಸರ್ಕಾರ ಪ್ರಕಟಿಸಿದ ವಿಜ್ಞಾನ ಮತ್ತು ತಂತ್ರಜ್ಞಾನ ನೀತಿ, ವಿಜ್ಞಾನ- ತಂತ್ರಜ್ಞಾನಕ್ಕೆ ಹೆಚ್ಚಿನ ಸ್ವಾತಂತ್ರ್ಯ ಕಲ್ಪಿಸಿದೆ ಎಂದರು.

ವೈಫಲ್ಯಗಳಿಂದಾಗಿ ಎದೆಗುಂದುವುದು ಬೇಡ. ಕೆಲವು ಬಾರಿ ಸಂಶೋಧನೆಯ ಭಾಗವಾಗಿ ವೈಫಲ್ಯಗಳು ಸಂಭವಿಸುತ್ತವೆ ಎಂದು ರಾಷ್ಟ್ರಪತಿ ಕಲಾಂ ವಿಜ್ಞಾನಿಗಳಿಗೆ ಕಿವಿಮಾತು ಹೇಳಿದರು. ರಾಜ್ಯಪಾಲ ಟಿ.ಎನ್‌. ಚತುರ್ವೇದಿ ಹಾಗೂ ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ಕಾರ್ಯಕ್ರಮದಲ್ಲಿ ಹಾಜರಿದ್ದರು.

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X