ಬರದ ಇನ್ನೊಂದು ಮುಖ ;ಗುಲ್ಬರ್ಗಾದಲ್ಲಿ ಆಮ್ಲ ಮಳೆ ಭಯ
ಬರದ
ಇನ್ನೊಂದು
ಮುಖ
;ಗುಲ್ಬರ್ಗಾದಲ್ಲಿ
ಆಮ್ಲ
ಮಳೆ
ಭಯ
ಬಳ್ಳಾರಿಯ
ಬೇವಿನ
ಹಳ್ಳಿ
ಜನ
ಕುಡಿಯುವ
ನೀರು
7
ಕಿ.ಮೀ.
ಹೋಗಬೇಕಾದ
ದುಸ್ಥಿತಿ,
ಗುಲ್ಬರ್ಗಾದಲ್ಲಿ
ಆಮ್ಲೀಯ
ಮಳೆಯ
ಭೀತಿ.
ಮೂರು ಗಂಟೆ ಕಾಲ ಈ ರೀತಿ ಪ್ರತಿಭಟನೆ ವ್ಯಕ್ತಪಡಿಸಿದ ನಂತರ ತಹಸೀಲ್ದಾರ್ ಶಿವಪ್ಪ ಸೀಟಿನಿಂದ ಎದ್ದು ಬಂದರು. ತಕ್ಷಣವೇ 2 ಲಕ್ಷ ರುಪಾಯಿ ಬಿಡುಗಡೆ ಮಾಡಿ, ಕುಡಿಯುವ ನೀರಿಗೆ ವ್ಯವಸ್ಥೆ ಮಾಡುವುದಾಗಿ ಭರವಸೆ ಕೊಟ್ಟರು.
ಗುಲ್ಬರ್ಗಾ : ಜಿಲ್ಲೆಯ ಮಂದಿಗೆ ನೀರಿನ ತೊಂದರೆ ಹೊಸದೇನೂ ಅಲ್ಲ. ಆದರೆ ಈ ಸಲ ಪರಿಸ್ಥಿತಿ ಪ್ರಕೋಪಕ್ಕೆ ಹೋಗಿದೆ. ಭೀಮಾ, ಅಮರ್ಜಾ, ಕಗ್ನ, ಬೆಣ್ಣಿತೋರ ಮೊದಲಾದ ನದಿಗಳ ನೀರಿಂದ ಇರುವ ಭೂಮಿಯಲ್ಲಿ ಹರಸಾಹಸ ಮಾಡಿ ಬೆಳೆ ತೆಗೆಯುತ್ತಿದ್ದ ಮಂದಿಗೆ ಈಗ ಆ ದಾರಿಯೂ ಮುಚ್ಚಿಹೋಗಿದೆ. ನದಿಗಳಲ್ಲಿ ನೀರಿಲ್ಲ.
ಇನ್ನು ಪಟ್ಟಣದ ವಿಚಾರ- ಗುಲ್ಬರ್ಗಾ ನಗರದ ಸುಮಾರು 4 ಲಕ್ಷ ಮಂದಿಗೆ ಕೊಳವೆ ಬಾವಿಗಳೇ ನೀರಾಧಾರ. ಪ್ರತಿಶತ 40ರಷ್ಟು ಮಂದಿಗೆ ಕೊಳವೆ ಬಾವಿಗಳಿಲ್ಲದೆ ನೀರಿಗೆ ಬೇರೆ ಮೂಲ ಇಲ್ಲವೇ ಇಲ್ಲ. ಬರಬರುತ್ತಾ ನೀರು ಕೊಡುವ ಕೊಳವೆ ಬಾವಿಗಳು ತೀರಾ ಕಡಿಮೆಯಾಗುತ್ತಿವೆ.
ಆಸ್ತಿ- ಪಾಸ್ತಿ ರಕ್ಷಿಸಿಕೊಳ್ಳಲು ಬೇಕಾದ ನೀರೂ ಇಲ್ಲದೆ ಜನ ಕಂಗಾಲಾಗುತ್ತಿದ್ದಾರೆ. ಇನ್ನೂ ಮಳೆ ಬರದಿದ್ದರೆ, ಆಸ್ತಿ- ಪಾಸ್ತಿ ಮಾರಿ ಬೇರೆಡೆಗೆ ಗುಳೇ ಹೋಗಬೇಕಾದ ದುಸ್ಥಿತಿ ನಿರ್ಮಾಣವಾಗಲಿದೆ. ಹವಾಮಾನ ವಿಜ್ಞಾನಿಗಳ ಪ್ರಕಾರ ಗುಲ್ಬರ್ಗಾದ ಹವೆಯಲ್ಲಿ ಇಂಗಾಲದ ಪ್ರಮಾಣ ಅತಿಯಾಗಿ ಜಮೆಯಾಗುತ್ತಿದೆ. ಇದರಿಂದ ಆಮ್ಲೀಯ ಮಳೆ ಸುರಿಯುವ ಭೀತಿ ಇದೆ !
ರಾಜ್ಯದ ಸುಮಾರು 40 ಸಾವಿರ ಮುಜರಾಯಿ ದೇವಳಗಳಲ್ಲಿ ಅವಿರತ ಪ್ರಾರ್ಥನೆ ನಡೆದಿದ್ದರೂ ಮಳೆರಾಯ ಇನ್ನೂ ಒಲಿದಿಲ್ಲ. ಮಂಡ್ಯದ ಕಬ್ಬು ರೈತನಿಂದ ವಿಜಾಪುರದ ಜೋಳದ ರೈತನವರೆಗೆ ಎಲ್ಲರದ್ದೂ ಒಂದೇ ಪ್ರಾರ್ಥನೆ- ‘ಹುಯ್ಯೋ ಹುಯ್ಯೋ ಮಳೆರಾಯ’.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು