ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೂಡಲಸಂಗಮದಲ್ಲಿ ಬಸವ ವಿವಿ ಸ್ಥಾಪನೆಗೆ ಆಗ್ರಹ

By Staff
|
Google Oneindia Kannada News

ಬಾಗಲಕೋಟೆ : ಹಂಪಿಯಲ್ಲಿರುವ ಕನ್ನಡ ವಿಶ್ವವಿದ್ಯಾಲಯದ ಮಾದರಿಯಲ್ಲಿ ಕೂಡಲ ಸಂಗಮದಲ್ಲಿ ಬಸವಣ್ಣನ ಹೆಸರಿನಲ್ಲಿ ಅಂತರರಾಷ್ಟ್ರೀಯ ಅಧ್ಯಯನಕ್ಕೆ ಮೀಸಲಾದ ವಿಶ್ವವಿದ್ಯಾಲಯವನ್ನು ಸ್ಥಾಪಿಸಬೇಕು ಎಂದು ವೀರಶೈವ ಲಿಂಗಾಯತ ಮಠಾಧೀಶರ ಸಮಾವೇಶ ಆಗ್ರಹಿಸಿದೆ.

ವೀರಶೈವ ಮಠಾಧೀಶರ ರಾಷ್ಟ್ರೀಯ ಸಮಾವೇಶ ಭಾನುವಾರ ಕೂಡಲ ಸಂಗಮದಲ್ಲಿ ಮುಕ್ತಾಯವಾಯಿತು. ಸಮಾವೇಶದಲ್ಲಿ ಬಾಗೇವಾಡಿ ಸ್ವಾಮೀಜಿಗಳು ಮಂಡಿಸಿದ ವಿವಿ ಸ್ಥಾಪನೆಯ ಆಗ್ರಹ ಹಾಗೂ ಇತರ ನಿರ್ಣಯವನ್ನು ಇಂಗಳೇಶ್ವರ ಸ್ವಾಮೀಜಿ ಅನುಮೋದಿಸಿದರು.

ಬಿಜಾಪುರದಲ್ಲಿ ಸ್ಥಾಪಿಸಲಾಗುವ ಮಹಿಳಾ ವಿವಿಗೆ ಅಕ್ಕನ ಹೆಸರಿಡಬೇಕು. ವಚನಗಳ ನಾಮಾಂಕಿತ ಬದಲಿಸಿದ ಮಾತೆ ಮಹಾದೇವಿ ಪ್ರಕಟಿಸಿದ ಪುಸ್ತಕಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸಬೇಕು ಎಂಬ ಪ್ರಮುಖ ನಿರ್ಣಯಗಳೂ ಸೇರಿದಂತೆ ಸಮಾವೇಶದಲ್ಲಿ ಒಟ್ಟು 11 ನಿರ್ಣಯಗಳನ್ನು ಅಂಗೀಕರಿಸಲಾಯಿತು.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X